ಬರಗಾಲ ಅತಿವೃಷ್ಟಿಯಿಂದ ಜನ ಜಾನುವಾರುಗಳಿಗೆ ನೀರಿನ ಸಮಸ್ಯೆ ಆಗದಂತೆ ಶ್ರಮವಹಿಸಿ ಮಾಡಿ – ಜಿಲ್ಲಾಧಿಕಾರಿಗಳ ಸೂಚನೆ.

ಕೂಡ್ಲಿಗಿ ನವೆಂಬರ್.9

ಪಟ್ಟಣದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ನಡೆದ ಬರಗಾಲದ ಪರಿಸ್ಥಿತಿಯನ್ನು ಕುರಿತು ಮಾನ್ಯ ಜಿಲ್ಲಾಧಿಕಾರಿಗಳಾದ ಎಸ್. ದಿವಾಕರ್ ಇವರ ನೇತೃತ್ವದಲ್ಲಿ ಕೂಡ್ಲಿಗಿ ಮತ್ತು ಕೊಟ್ಟೂರು ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಯ ಅಧಿಕಾರಿ ವರ್ಗದವರನ್ನು ಸಭೆ ಕರೆದಿದ್ದು, ಕೂಡ್ಲಿಗಿ ಮತ್ತು ಕೊಟ್ಟೂರು ಈ ಎರಡು ತಾಲೂಕಿನ ಅಧಿಕಾರಿ ವರ್ಗದವರಿಗೆ ಬರಗಾಲ ಪರಿಸ್ಥಿತಿಯ ಕುರಿತು ಮುಂಬರುವ ದಿನಗಳಲ್ಲಿ ಜನ ಜಾನುವಾರಗಳ ಸಮಸ್ಯೆಗಳನ್ನು ನಿವಾರಣೆ ಮಾಡುವ ಕುರಿತು ಸಮಸ್ಯೆಗಳನ್ನು ಅರಿತು ಕೊಳ್ಳುವುದರ ಜೊತೆಗೆ ಮಾನ್ಯ ಜಿಲ್ಲಾಧಿಕಾರಿಗಳು ನಿವಾರಣೆಯ ಸಲಹೆಗಳನ್ನು ಸಹ ನೀಡಿದರು. ಕೂಡ್ಲಿಗಿ ಮತ್ತು ಕೊಟ್ಟೂರು ತಾಲೂಕಿನ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಮುಖ್ಯವಾಗಿ ಜನರಿಗೆ ಹಾಗೂ ಜಾನುವಾರಗಳಿಗೆ ನೀರಿನ ಸಮಸ್ಯೆ ಬಾರದಂತೆ ಮುಂಜಾಗ್ರತವಾಗಿ ಎಲ್ಲಾ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಬರುವಂತಹ ಹಳ್ಳಿಗಳಿಗೆ ನೀರಿನ ಕೊಳವೆ ಬಾವಿಗಳ ಮಾಹಿತಿಯನ್ನು ತೆಗೆದುಕೊಂಡು ನಂತರ ಹಾಲಿ ಕೊಳವೆಯ ಬಾವಿನ ನೀರು ಸರಬರಾಜು ಆಗುತ್ತಿರುವುದನ್ನು ಎಷ್ಟು ದಿನಗಳ ವರೆಗೆ ನಡೆಯಬಹುದು ಎಂಬುವುದನ್ನು ಪರೀಕ್ಷಿಸಿ ಕೊಂಡು ಕೊಳವೆ ಬಾವಿ ಕಾರಣಾಂತರಗಳಿಂದ ಕೈ ಕೊಟ್ಟರೆ ಮತ್ತೊಂದು ಕೊಳವೆ ಬಾವಿ ಮುಂಜಾಗ್ರತವಾಗಿ ತೆಗೆದುಕೊಳ್ಳುವುದಕ್ಕೆ ಅವಶ್ಯಕವಾಗಿ ಭದ್ರ ಪಡಿಸಿಕೊಳ್ಳಿ ಎಂದು ಸೂಚನೆ ನೀಡಿದರು. ಹಾಗೆ ಎಲ್ಲಾ ಎರಡು ತಾಲೂಕಿನ ಪಂಚಾಯಿತಿ ಅಧಿಕಾರಿಗಳಿಗೆ ಗ್ರಾಮ ಪಂಚಾಯತಿ ವಾಟರ್ ಮ್ಯಾನ್ ಗೆ ಹಳ್ಳಿಗಳಲ್ಲಿ ಜನರಿಗೆ ಯಾವುದೇ ರೀತಿಯಲ್ಲಿ ನೀರಿನ ಸಮಸ್ಯೆ ಬಾರದ ಹಾಗೆ ನೀರು ಪೂರೈಸುವಂತೆ ಕೆಲಸ ಮಾಡಬೇಕು ಎಂದು ಖಡಕ್ಕಾಗಿ ತಿಳಿಸಿ ಹೇಳಿ ಎಂದು ಸೂಚನೆ ನೀಡಿದರು. ಹಾಗೂ ಎಲ್ಲಾ ಗ್ರಾಮ ಪಂಚಾಯತಿಯ ಅಧಿಕಾರಿಗಳಿಗೆ ಸ್ಮಶಾನ ಅಭಿವೃದ್ಧಿ ಮಾಡಲು ಮುಂದಾಗುವಂತೆ ತಿಳಿಸಿದರು ಮತ್ತು ಯಾವುದೇ ಗ್ರಾಮಗಳಲ್ಲಿ ಸರ್ಕಾರದ ಸ್ಮಶಾನಕ್ಕೆ ಜಮೀನುಗಳನ್ನು ಬೇರೆ ಜನಗಳು ತೊಂದರೆ ಪಡಿಸಿದರೆ ಹಾಗೂ ಸ್ಮಶಾನದ ಜಮೀನನ್ನು ಹೊತ್ತುವರಿ ಮಾಡಿದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ತಿಳಿಸಿದರು ಹಾಗೆ ಎಲ್ಲಾ ಗ್ರಾಮಗಳಲ್ಲಿ ಎಲ್ಲಾ ಅಧಿಕಾರಿಗಳು ಚರಂಡಿಗಳ ಸ್ವಚ್ಛತೆ ಮಾಡಿಸಿ ಯಾವುದೇ ರೋಗ ರುಜಿನಗಳು ಭಾರದಂತೆ ಕಾಪಾಡಿ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಬರಗಾಲದ ಘೋಷಣೆ ಆಗಿರುವುದರಿಂದ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ತಾಲೂಕು ಕಚೇರಿಗಳಲ್ಲಿ ಇರುವಂತೆ ಹಾಗೂ ಯಾವುದೇ ಕಾರಣಕ್ಕೂ ತಮ್ಮ ತಮ್ಮ ಮೊಬೈಲ್ ಫೋನ್ ಗಳನ್ನು ಸ್ವಿಚ್ ಆಫ್ ಮಾಡಿ ಕೊಳ್ಳದೆ ಎಲ್ಲಾ ಜನರು ಈ ಬಾರಿ ಬರಗಾಲ ಆವರಿಸಿರು ವುದರಿಂದ ಕಷ್ಟದಲ್ಲಿರುವ ಜನರನ್ನು ನಾವು ಸಮಸ್ಯೆಗಳನ್ನು ಅರಿತು ಕೊಂಡು ಶ್ರಮವಹಿಸಿ ಸರ್ಕಾರದ ಕೆಲಸ ಮಾಡೋಣ ಎಂದು ಎಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿಗಳಾದ ಶ್ರೀಮತಿ, ರೇಣುಕಮ್ಮ, ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ರವಿಕುಮಾರ್,

ಜಿಲ್ಲಾ ವರದಿಗಾರರು:ರಾಘವೇಂದ್ರ.ಬಿ.ಸಾಲುಮನೆ ಕೂಡ್ಲಿಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button