ದೀಪ ಸಂಜೀವಿನಿ ಕಾರ್ಯಕ್ರಮದ ಮಳಿಗೆ ಉದ್ಘಾಟನೆ.
ಹುನಗುಂದ ನವೆಂಬರ್.9

ಎನ್.ಆರ್.ಎಲ್.ಎಂ ಯೋಜನೆಯ ದೀಪ ಸಂಜೀವಿನಿ ಕಾರ್ಯಕ್ರಮವನ್ನು ಹುನಗುಂದ ತಾಲೂಕಿನ ಬಸ್ ನಿಲ್ದಾಣದ ಮುಖ್ಯ ರಸ್ತೆಯಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವನ್ನು ತಾಲೂಕ ಪಂಚಾಯತಿ ಇ.ಒ ಕಾರ್ಯ ನಿರ್ವಾಹಕ ಅಧಿಕಾರಿ ಮುರಳಿಧರ ದೇಶಪಾಂಡೆ ರಿಬ್ಬನ್ ಕಟ್ ಮಾಡುವುದರ ಮೂಲಕ ಮಳಿಗೆಯನ್ನು ಉದ್ಘಾಟಿಸಿದರು.ಈ ಮಳಿಗೆಯಲ್ಲಿ ಸ್ವ ಸಹಾಯ ಸಂಘದ ಮಹಿಳೆಯರು ಮಣ್ಣಿನಿಂದ ತಯಾರಿಸಲಾದ ದೀಪಗಳನ್ನು ಮತ್ತು ಹಬ್ಬಕ್ಕೆ ಉಪಯೋಗವಾಗುವ ಉತ್ಪನ್ನಗಳನ್ನು ಮಾರಾಟ ಮಾಡಲು ಸೂಕ್ತ ವೇದಿಕೆ ಕಲ್ಪಿಸಲಾಗಿತ್ತು, ಗ್ರಾಮೀಣ ಭಾಗದ ಮಹಿಳೆಯರು ತಯಾರಿಸಲಾದ ದೀಪಗಳನ್ನು ಮಾರಾಟ ಮಾಡುವ ಮೂಲಕ ಸದಸ್ಯರುಗಳಿಗೆ ಆದಾಯ ಉತ್ಪನ್ನ , ಮಾರುಕಟ್ಟೆ ವ್ಯವಸ್ಥೆ ಮತ್ತು ಮಹಿಳೆಯರು ಕೈಗೊಂಡ ದೀಪಗಳ ಚಟುವಟಿಕೆ ತಯಾರಿಕೆಗೆ ಪ್ರೋತ್ಸಾಹಿಸಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ಈ ಸಂದರ್ಭದಲ್ಲಿ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಸಂಜು ಹುದ್ದಾರ, ವಲಯ ಮೇಲ್ವಿಚಾರಕರಾದ ಕೃಷ್ಣಾಜೀ ಪವಾರ್, ಕೆ. ಎಂ ನಾಡಗೌಡರ, ಐಇಸಿ ಸಂಯೋಜಕ ಬಸವರಾಜ ಕೊಪ್ಪದ, ಎಸ್ ಆರ್ ಡಿ ಸಂಪನ್ಮೂಲ ವ್ಯಕ್ತಿ ಬಸನಗೌಡ ಬೇವೂರ, ಯುವ ವೃತ್ತಿಪರ ಶ್ವೇತಾ ಡಿಗ್ಗಿ, ಬಿಆರ್ ಪಿಗಳು, ತಾ.ಪಂ ಸಿಬ್ಬಂದಿ ವರ್ಗ ಮತ್ತು ಸ್ವಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು