ಕೆಲಸದ ನೆಪದಲ್ಲಿ ಅಧಿಕಾರಿಗಳು ಹಣ ವಸೂಲಿ ಮತ್ತು ಸತಾಯಿಸುವ ಕಾರ್ಯ ತಕ್ಷಣವೇ ನಿಲ್ಲಿಸಬೇಕು – ಡಿ.ಎಸ್.ಪಿ ಸುರೇಶರೆಡ್ಡಿ.

ಹುನಗುಂದ ನವೆಂಬರ್.9

ಕಚೇರಿಗಳಿಗೆ ಸಮಸ್ಯೆಯನ್ನು ಹೇಳಿಕೊಂಡು ಬರುವ ಸಾರ್ವಜನಿಕರನ್ನು ಕೆಲಸ ಮಾಡಿ ಕೊಡುವ ನೆಪದಲ್ಲಿ ಅವರಿಂದ ಹಣ ಪಡೆಯುತ್ತಿರುವುದು ಮತ್ತು ಕೆಲಸ ಮಾಡದೇ ನಿತ್ಯ ಸತಾಯಿಸುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬರುತ್ತಿದೆ.ಹಾಗೇನಾದರೂ ಇನ್ನು ಮುಂದೆ ಕಂಡು ಬಂದರೇ ಅಂತಹವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಕೊಳ್ಳಲಾಗುವುದು ಎಂದು ಕರ್ನಾಟಕ ಲೋಕಾಯುಕ್ತ ಬಾಗಲಕೋಟೆಯ ಡಿಎಸ್‌ಪಿ ಸುರೇಶರೆಡ್ಡಿ ಎಂ.ಎಸ್ ಎಲ್ಲ ಇಲಾಖೆ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.ಪಟ್ಟಣದ ತಾಲೂಕ ಪಂಚಾಯತ ಸಭಾ ಭವನದಲ್ಲಿ ಬುಧವಾರ ನಡೆದ ಸಾರ್ವಜನಿಕ ಕುಂದು ಕೊರತೆ ಮತ್ತು ಅಹವಾಲು ಸ್ವೀಕಾರ ಸಭೆಯಲ್ಲಿ ಮಾತನಾಡಿದ ಅವರು ಹುನಗುಂದ ತಾಲೂಕಿನ ಪ್ರತಿಯೊಂದು ಇಲಾಖೆಯ ಮುಖ್ಯಸ್ಥರು ಸೇರಿದಂತೆ ಉಳಿದೆಲ್ಲ ನೌಕರರು ಸರ್ಕಾರಿ ನಿಯಮ ಪಾಲಿಸುತ್ತಿಲ್ಲ. ನಿಯಮಗಳನ್ನು ಗಾಳಿಗೆ ತೂರಿ ಬೇಕಾ ಬಿಟ್ಟಿಯಾಗಿ ನಡೆದು ಕೊಳ್ಳುತ್ತಿರುವುದರಿಂದ ಕೆಲಸಕ್ಕೆ ಬರುವ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.ಇನ್ಮುಂದೆ ಪ್ರತಿ ಇಲಾಖೆ ಮುಖ್ಯಸ್ಥರು ತಮ್ಮ ಕಚೇರಿಯಲ್ಲಿ ಲೋಕಾಯುಕ್ತ ಕಚೇರಿ ಮಾಹಿತಿಯ ಕುರಿತು ಫ್ಲೆಕ್ಸ್ ಬೋರ್ಡ್ ಹಾಕುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಪಶು ಇಲಾಖೆ: ಗ್ರಾಮೀಣ ಪ್ರದೇಶದಲ್ಲಿ ಜಾನುವಾರುಗಳಿಗೆ ಚಿಕಿತ್ಸೆ ನೀಡಲು ವೈಧ್ಯಾಧಿಕಾರಿಗಳು ರೈತರಿಂದ ಹಣ ವಸೂಲಿ ದಂಧೆಗೆ ಇಳಿದಿದ್ದಾರೆ ಎನ್ನುವ ಆರೋಪ ಕೇಳಿ ಬರುತ್ತಿದೆ.ಅಂತಹ ವೈದ್ಯಾಧಿಕಾರಿಗಳಿ ಖಡಕ್ ನೋಟಿಸ್ ನೀಡಿ.ಪಶು ಇಲಾಖೆಯಿಂದ ಪಶೂ ಸಂಜೀವಿನಿ ಯೋಜನೆಯಡಿಯಲ್ಲಿ ಪ್ರತಿಯೊಂದು ಗ್ರಾ.ಪಂ ಮಟ್ಟದಲ್ಲಿ ಪಶು ಸಂಚಾರಿ ಚಿಕಿತ್ಸೆಯ ಬಗ್ಗೆ ಬಿತ್ತಿ ಪತ್ರಗಳನ್ನು ಅಂಟಿಸಿ ಜನ ಜಾಗೃತಿ ಗೊಳಿಸುವ ಮೂಲಕ ದಿನದ ೨೪ ಗಂಟೆ ಜಾನುವಾರಿಗಳಿಗೆ ಚಿಕಿತ್ಸೆ ನೀಡುವ ಕೆಲಸ ಮಾಡ ಬೇಕೆಂದು ಪಶು ವೈದ್ಯಾಧಿಕಾರಿ ಎಸ್.ಪಿ ಬೇನಾಳ ಅವರಿಗೆ ಸೂಚಿಸಿದರು.ಆರೋಗ್ಯ ಇಲಾಖೆ; ಖಾಸಗಿ ಆಸ್ಪತ್ರೆಗಳಲ್ಲಿ ಸಿಗುವ ಎಲ್ಲಾ ಸೌಲಭ್ಯಗಳಂತೆ ಸರ್ಕಾರಿ ಆಸ್ಪತ್ರೆಯಲ್ಲಿ ಎಲ್ಲಾ ಬಗೆಯ ಮೂಲಭೂತ ಸೌಕರ್ಯ, ಶಸ್ತ್ರ ಚಿಕಿತ್ಸೆ ಹಾಗೂ ಗುಣಮಟ್ಟದ ಔಷದೋಪಚಾರ ದೊರಕಿಸ ಬೇಕೆಂದು ತಾಲೂಕಾ ವೈಧ್ಯಧಿಕಾರಿ ಡಾ. ಎಸ್.ಎಸ್. ಅಂಗಡಿ ಅವರಿಗೆ ಸೂಚಿಸಿದರು. ಅಬಕಾರಿ ಇಲಾಖೆ ತಾಲೂಕಿನಾಧ್ಯಂತ ಅಕ್ರಮ ಮದ್ಯ ಮಾರಾಟವಾಗುತ್ತಿದೆ.ಅಬಕಾರಿ ಇಲಾಖೆಯ ನಿಯಮಗಳನ್ನು ಮೀರಿ ಬೆಳಗ್ಗೆ ೧೦ ಗಂಟೆಗೆ ತೆರಯಬೇಕಾದ ಬಾರ್‌ಗಳು ಬೆಳಗ್ಗೆ ೬ ಗಂಟೆಗೆ ತಗೆಯುತ್ತಿವೆ ಎನ್ನುವ ಮಾಹಿತಿಯಿದೆ ಅದನ್ನು ತಡೆಯ ಬೇಕು.ಬಾರ್ ಬೆಳಗ್ಗೆ ತೆರೆಯುವುದರಿಂದ ದುಡಿಯುವ ವ್ಯಕ್ತಿಗಳ ಉದ್ಯೋಗದ ಮೇಲೆ ಪರಿಣಾಮ ಬೀರುವುದರ ಜೊತೆಗೆ ಕೌಟುಂಬಿಕ ಸಮಸ್ಯೆಗಳ ಎದುರಿಸಿ ಬೇಕಾಗುತ್ತೆ.ಡಾಬಾ ಗಳಲ್ಲಿ ಕೂಡಾ ಅಕ್ರಮ ಸಾರಾಯಿ ಮಾರಾಟ ಮಾಡುತ್ತಿದ್ದಾರೆ ಮತ್ತು ಕಳ್ಳಬಟ್ಟಿ ಮಾರಾಟ ಮಾಡುವ ತಾಂಡಾಗಳ ಮೇಲೆ ಹೆಚ್ಚಿನ ನಿಗಾ ವಹಿಸಿ ಅವುಗಳನ್ನು ಬಂದ್ ಮಾಡು ಕಾರ್ಯ ವಾಗಬೇಕು ಎಂದು ಅಬಕಾರಿ ಅಧಿಕಾರಿಗೆ ಸೂಚಿಸಿದರು.ಚಿಕ್ಕ ನೀರಾವರಿ ಇಲಾಖೆ; ಬರದ ಸ್ಥಿತಿಯಲ್ಲಿರುವ ರೈತರಿಗೆ, ಜನ ಜಾನುವಾರುಗಳಿಗೆ ಮತ್ತು ಪಕ್ಷಿ ಸಂಕುಲಕ್ಕೆ ನೀರು ಸಿಗುತ್ತಿಲ್ಲ ತಾಲೂಕಿನ ಬಿಸನಾಳ,ರಾಮವಾಡಗಿ,ಮಾಗಿ,ತಿಮ್ಮಾಪೂರ ಸೇರಿದಂತೆ ಅನೇಕ ಕಡೆಗಳಲ್ಲಿ ಇರುವ ಕೆರೆಗಳನ್ನು ಕೆರಯ ಅಕ್ಕ ಪಕ್ಕದ ರೈತರು ಒತ್ತುವರಿ ಮಾಡಿ ಕೊಂಡಿದ್ದಾರೆ.ಅವುಗಳ ಸರ್ವೇ ಮಾಡಿ ಒತ್ತುವರಿ ತೆರುವು ಗೊಳಿಸುವ ಕಾರ್ಯವಾಗಬೇಕು ಎಂದು ಇನ್ಸಪೆಕ್ಟರ್ ಬಸನಗೌಡ ಪಾಟೀಲ ಅಧಿಕಾರಿಗೆ ತಿಳಿಸಿದರು.ಮಹಿಳಾ ಮತ್ತು ಮಕ್ಕಳ ಕಲ್ಯಾಣ: ತಾಲೂಕಿನ ಪ್ರತಿಯೊಂದು ಅಂಗನವಾಡಿ ಕೇಂದ್ರಗಳಿಗೆ ಪೂರೈಕೆ ಯಾಗುತ್ತಿರುವ ಆಹಾರ ಕಳಪೆ ಮಟ್ಟದಿಂದ ಕೂಡಿದೆ.ಆಹಾರದ ಗುಣಮಟ್ಟ ಮತ್ತು ತೂಕದ ಬಗ್ಗೆ ಪರೀಕ್ಷಿಸಿ ಇದರಲ್ಲಿ ಏನಾದರೂ ವ್ಯತ್ಯಾಸವಾದರೇ ನೀವೇ ನೇರ ಹೊಣೆ ಗಾರಾಗುತ್ತಿರಿ ಎಂದು ಸಿಡಿಪಿಓ ಅನ್ನಪೂರ್ಣ ಕುಬಕಡ್ಡಿ ಖಡಕ್ ಎಚ್ಚರಿಕೆ ನೀಡಿದರು ಕೃಷಿ ಇಲಾಖೆ: ಮುಂಗಾರು ಮತ್ತು ಹಿಂಗಾರು ಮಳೆ ಕೈ ಕೊಟ್ಟಿದ್ದರಿಂದ ರೈತರು ಬೀಜ ಗೊಬ್ಬರಕ್ಕಾಗಿ ಸಾಲಶೂಲ ಮಾಡಿ ಸಂಪೂರ್ಣ ಹಾಳಾಗಿದ್ದಾರೆ. ರೈತರಿಗೆ ಸರ್ಕಾರದ ಸೌಲಭ್ಯ ಮತ್ತು ಬೆಳೆ ವಿಮೆ ಹಾಗೂ ಹಾನಿ ಪರಿಹಾರದ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡ ಬೇಕೆಂದು ಕೃಷಿ ಅಧಿಕಾರಿಗೆ ಹೇಳಿದರು. ಪುರಸಭೆ:ಪಟ್ಟಣದ ಜನತೆಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದರ ಜೊತೆಗೆ ಹೊಸ ಲೇಔಟಗಳಲ್ಲಿ ಸೀಮಿತ ಪ್ರದೇಶವನ್ನು ಪುರ ಸಭೆಯವರು ಕಾಯ್ದಿರಿಸ ಬೇಕೆಂದು ಮುಖ್ಯಾಧಿಕಾರಿಗೆ ಸೂಚಿಸಿದರು. ಕಂದಾಯ ಇಲಾಖೆ:ಕಂದಾಯ ಇಲಾಖೆಯಲ್ಲಿ ಆವಕ ಮತ್ತು ಜಾವಕ ಅರ್ಜಿಗಳನ್ನು ವಿಲೇವಾರಿಯಲ್ಲಿ ವ್ಯತ್ಯಾಸ ವಾಗುತ್ತಿದೆ.ಪಡೆದ ಅರ್ಜಿಗಳ ಬಗ್ಗೆ ನಿಗಾ ವಹಿಸದೇ ಇರೋದರಿಂದ ಸಾರ್ವಜನಿಕರು ಪರ ದಾಡುವಂತಾಗಿದೆ.ಇಲಾಖೆಯ ಕೆಲಸ ಕಾರ್ಯಗಳಲ್ಲಿ ಮಧ್ಯವರ್ತಿಗಳ ಹಾವಳಿ ಕಾಣುತ್ತಿದೆ ಅವೆಲ್ಲಾ ತಕ್ಷಣವೇ ನಿಲ್ಲಬೇಕು ಎಂದು ಸೂಚಿಸಿದರು.ಈ ಸಂದರ್ಭದಲ್ಲಿ ಪೊಲಿಸ್ ನಿರೀಕ್ಷಕರಾದ ಎಂ.ಎಚ್.ಬದರಿ,ಬಸನಗೌಡ ಪಾಟೀಲ, ಹೆಡ್ ಕಾನ್ಸಟೇಬಲ್ ಎಸ್.ಎಸ್. ಮುಷ್ಟಿಗೇರಿ,ಎಚ್.ವ್ಹಿ.ಹಲಗತ್ತಿ,ಎನ್.ಎ.ಪೂಜಾರಿ,ವ್ಹಿ.ಎ. ದೊಡಮನಿ,ಡಿ.ವಿ. ಪಾಟೀಲ,ಆರ್.ಎಸ್. ಗೌಡರ ಇದ್ದರು.

ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡಲಗಲ್ಲ ಹುನಗುಂದ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button