ತುಂಗಭದ್ರ ಜಲಾಶಯದಲ್ಲಿ ನೀರಿನ ಕೊರತೆ ; ಹೊಸ ಕಾರ್ಖಾನೆಗಳ ವಿರುದ್ಧ ಪರವಾನಿಗೆ ರದ್ದು ಮಾಡಲು ರೈತ ಸಂಘಗಳ ಎಚ್ಚರಿಕೆ.

ವಿಜಯನಗರ ನವೆಂಬರ್.17

ವಿಜಯನಗರ ಪ್ರಜಾವೇದಿಕೆ ಮತ್ತು ಕರ್ನಾಟಕ ರಾಜ್ಯ ರೈತ ಸಂಘ ಹಸಿರುಸೇನೆ ವತಿಯಿಂದಮುಖ್ಯ ಅಭಿಯಂತರ ಕಛೇರಿ ಜಲ ಸಂಪನ್ಮೂಲ ಇಲಾಖೆ ಮುನಿರಾಬಾದ್ ಕಾರ್ಯಲಯಗಳಿಗೆ ಮನವಿ ಪತ್ರ ನೀಡಲಾಯಿತು”ಈಗಾಗಲೇ ಕಳೆದ 3-4 ವರ್ಷಗಳಿಂದ ತುಂಗಭದ್ರ ಜಲಾಯನ ಪ್ರದೇಶದಲ್ಲಿ ಸಕಾಲದಲ್ಲಿ ಮಳೆ ಬಾರದ ಕಾರಣದಿಂದ ನೀರಿನ ಕೊರತೆ ಉಂಟಾಗಿದ್ದು ತಿಳಿದ ವಿಷಯವಾಗಿದೆ, ಇದರಿಂದ ವಿಜಯನಗರ ಜಿಲ್ಲೆ, ಕೊಪ್ಪಳ ಜಿಲ್ಲೆ, ಬಳ್ಳಾರಿ ಜಿಲ್ಲೆ ಮತ್ತು ರಾಯಚೂರು ಜಿಲ್ಲೆಗಳ ರೈತರು ಬೆಳೆದ ಬೆಳೆಗೆ ನೀರಿನ ಕೊರತೆ ಉಂಟಾಗಿದ್ದು, ಕಟಾವಿಗೆ ಬಂದ ಬೆಳೆಗಳಿಗೆ ಸರಿಯಾಗಿ ನೀರು ಪೂರೈಕೆ ಆಗುತ್ತಿಲ್ಲ. ಬೆಳೆಗಳು ಒಣಗುತ್ತಿರುವುದರಿಂದ ಅನ್ನದಾತನು ಆತಂಕಗೊಂಡಿದ್ದಾನೆ. ಈಗಾಗಲೇ ರೈತರು ಜಿಲ್ಲೆಯಾದ್ಯಂತ ಬೀದಿಗೆ ಬಂದು ತನ್ನ ನೀರಿನ ಹಕ್ಕಿಗಾಗಿ ಹೋರಾಟ ನಡೆಸುತ್ತಿದ್ದು ಒಂದು ಕಡೆಯಾದರೆ, ಇನ್ನೊಂದು ಕಡೆ ನಗರ ಪ್ರದೇಶದ ಸಾರ್ವಜನಿಕರಿಗೆ ಕುಡಿಯುವ ನೀರಿನ ಪ್ರತಿ ಬೇಸಿಗೆ ದಿನಗಳಲ್ಲಿ ಸಮಸ್ಯೆ ಯಾಗುತ್ತಿರುವ ಸಂದರ್ಭದಲ್ಲಿ ತಾವುಗಳು ಕಾರ್ಖಾನೆಗಳಾದ ಹೊಸ ಆರ್.ಪಿ.ಸಿ.ಎಲ್. ಮತ್ತು ಎಂ.ಎಸ್.ಪಿ.ಎಲ್. ಕಂಪನಿ ಕಾರ್ಖಾನೆಗಳಿಗೆ ಟಿ.ಬಿ.ಡ್ಯಾಂ ನಿಂದ ಹೊಸ ಕೊಳವೆ ಪೈಪ್‌ ಲೈನ್ ಮುಖಾಂತರ ಕಾರ್ಖಾನೆಗೆ ಒದಗಿಸಲು ಸದ್ದಿಲ್ಲದೇ ಪರವಾನಿಗೆ ನೀಡಿದ್ದು,

ತಕ್ಷಣ ಈ ಎರಡು ಕಾರ್ಖಾನೆಗಳಿಗೆ ಜಲಾಶಯದಿಂದ ನೀರು ಕೊಡುವ ಆದೇಶವನ್ನು ರದ್ದು ಮಾಡಬೇಕು. ಈಗಾಗಲೆ ತುಂಗಭದ್ರ ಜಲಾಶಯದ ತೀರದಲ್ಲಿ 10-15 ಹೆಚ್ಚಿನ ಕಾರ್ಖಾನೆಗಳು ನದಿಯಿಂದ ನೀರು ಸರಬರಾಜು ಆಗುತ್ತಿದ್ದು, ಇದರಿಂದ ತುಂಗಭದ್ರೆಯ ಒಡಲು ಬರಿದಾಗಿ ಬರಡು ಭೂಮಿಯಾಗಿ ಬೇಸಿಗೆ ಕಾಲದಲ್ಲಿ ದೂರ ಪ್ರದೇಶಗಳಿಂದ ಬರುವ ಸಾವಿರಾರು ವಿವಿಧ ತಳಿಯ ಪಕ್ಷಿ ಸಂಕುಲಗಳು ಈಗಾಗಲೆ ನಶಿಸಿ ಹೋಗಿವೆ. ಕಾರ್ಖಾನೆಗಳಿಂದ ಹೊರ ಸೂಸುವ ಹೊಗೆ, ವಿಷಪೂರಿತ ತ್ಯಾಜ್ಯ ನೀರು ನದಿಯಲ್ಲಿ ಸೇರಿ ನೀರು ಹಸಿರು ಬಣ್ಣಕ್ಕೆ ಬರುತ್ತಿದ್ದು, ಇದರಿಂದ ನೀರು ಮಲೀನ ವಾಗುತ್ತಿದ್ದು, ಜಲಚರಗಳು ನಶಿಸಿ ಹೋಗುತ್ತವೆ.ಕಾರಣ ನಾವುಗಳು ಈಗಾಗಲೆ ಮೇಲೆ ತಿಳಿಸಿದ ಸೋಮಲಾಪುರ ಗ್ರಾಮ ಸಂಡೂರು ತಾಲೂಕಿನ ಕಾರ್ಖಾನೆಗಳಿಗೆ ಆರ್.ಪಿ.ಸಿ.ಎಲ್‌. ಮತ್ತು ಎಂ.ಎಸ್.ಪಿ.ಎಲ್. ಕಂಪನಿ ಕಾರ್ಖಾನೆಗಳಿಗೆ ನೀರು ಸರಬರಾಜು ಆದೇಶ ರದ್ದು ಮಾಡಿ ರೈತರಿಗೆ, ಸಾರ್ವಜನಿಕರಿಗೆ, ಪಕ್ಷಿಗಳು, ಜಲಚರಗಳು, ಪ್ರಾಣಿಗಳು, ನ್ಯಾಯ ದೊರಕಿಸಿ ಕೊಡಬೇಕೆಂದು ವಿಜಯನಗರ ಪ್ರಜಾವೇದಿಕೆ ಮತ್ತು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಕೋರುವೆವು. ಒಂದುವೇಳೆ ತಾವುಗಳು ವಿಳಂಬ ನೀತಿ ಅನುಸರಿಸಿದರೆ ಬರುವ ದಿನಗಳಲ್ಲಿ ತುಂಗಭದ್ರ ಜಲಾಯನ ಪ್ರದೇಶದ ರೈತರು, ಸಾರ್ವಜನಿಕರು, ಸಂಘ ಸಂಸ್ಥೆಗಳು ಒಳಗೊಂಡು ಸಾವಿರಾರು ಜನರೊಂದಿಗೆ ಜಿಲ್ಲೆಯಾದ್ಯಂತ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು ಈ ಸಂದರ್ಭದಲ್ಲಿ ಮುಖಂಡರುಗಳಾದ ಶಂಷಾದ್ ಬೇಗಂ.ರಾಜ್ಯ ಮಹಿಳಾ ಉಪಾಧ್ಯಕ್ಷರು ,ಸಂಸ್ಥಾಪಕ ಅಧ್ಯಕ್ಷರು.ವೈ.ಗೋವಿಂದರಾಜ ಇನ್ನೂ ಹಲವಾರು ಮುಖಂಡರು ಕಾರ್ಯದರ್ಶಿಗಳು ಪಾಲ್ಗೊಂಡಿದ್ದರು.

ತಾಲೂಕ ವರದಿಗಾರರು:ಮಾಲತೇಶ್.ಶೆಟ್ಟರ್.ಹೊಸಪೇಟೆ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button