ಓದುಗರ ಕೊರತೆಯಿಂದ ಮುದ್ರಣ ಮಾಧ್ಯಮ ಸಂಕಷ್ಟದಲ್ಲಿದೆ.
ತರೀಕೆರೆ ಆಗಷ್ಟ.13

ಕವಲು ದಾರಿಯಲ್ಲಿ ಪತ್ರಕರ್ತರ ಸಂಘಗಳಿವೆ, ಒಗ್ಗಟ್ಟಾಗಿ ಸರಿದಾರಿಯಲ್ಲಿ ನಡೆಯಬೇಕಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರು ಹಾಗೂ ಮಾಜಿ ತಾಲೂಕು ಪಂಚಾಯಿತಿ ಸದಸ್ಯರಾದ ಸೀತಾರಾಮ್ ಎಂ ಗೌಡ ರವರು ಇಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕು ಪತ್ರಕರ್ತರ ಸಂಘವು ಏರ್ಪಡಿಸಿದ್ದ ಪತ್ರಕರ್ತರ ಗುರುತಿನ ಚೀಟಿ ವಿತರಣಾ ಸಮಾರಂಭವನ್ನು ಉದ್ಘಾಟನೆ ಮಾಡಿ ಮಾತನಾಡಿದರು. ಓದುಗರ ಕೊರತೆಯಿಂದ ಮುದ್ರಣ ಮಾಧ್ಯಮ ಸಂಕಷ್ಟದಲ್ಲಿದೆ ಇದನ್ನೇ ಅವಲಂಬಿಸಿರುವ ಕಾಗದ ಕಾರ್ಖಾನೆಗಳು ಆರ್ಥಿಕ ತೊಂದರೆಗಳಿಗೊಳಗಾಗಿವೆ. ಹೊರಗಿನ ವ್ಯವಸ್ಥೆ ಸರಿಪಡಿಸಲು ಪತ್ರಕರ್ತರು ಹೋರಾಟದಿಂದ ಕಷ್ಟ ಪಡುತ್ತಿದ್ದಾರೆ. ಪತ್ರಿಕೆಗಳಿಗೆ ವರದಿ ಮಾಡುವುದರ ಜೊತೆಯಲ್ಲಿ ವಿತರಣೆಯನ್ನು ಮಾಡುತ್ತಿದ್ದಾರೆ.

ಶಾಸಕರಾದ ಜಿಎಸ್ ಶ್ರೀನಿವಾಸರವರು ಪತ್ರಕರ್ತರಿಗೆ ಮನೆ ನಿವೇಶನಗಳನ್ನು ಕೊಡುತ್ತೇವೆ ಎಂದು ಹೇಳಿದ್ದಾರೆ ಈ ಕುರಿತು ಪತ್ರಕರ್ತರು ಅವರಿಗೆ ಆಗಾಗ ನೆನಪು ಮಾಡಬೇಕು ಉಪಯೋಗ ಪಡೆದುಕೊಳ್ಳಬೇಕು. ಪತ್ರಿಕಾ ಭವನ ನಿರ್ಮಾಣಕ್ಕೆ ನಾನು ನನ್ನ ಕೈಲಾದ ಸಹಕಾರ ಮಾಡುತ್ತೇನೆ ಎಂದು ಹೇಳಿದರು. ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಜಯ ಕರ್ನಾಟಕ ಸಂಘಟನೆಯ ತಾಲೂಕು ಅಧ್ಯಕ್ಷರಾದ ಟಿ ಎನ್ ಜಗದೀಶ್ ರವರು ಮಾತನಾಡಿ ಪತ್ರಕರ್ತರು ಗುಂಪುಗಾರಿಕೆ ಬಿಡಬೇಕು. ಸಮಾಜದಲ್ಲಿ ಶೈಕ್ಷಣಿಕವಾಗಿ ಸಾಮಾಜಿಕವಾಗಿ ತುಳಿತಕ್ಕೆ ಒಳಗಾದವರಿಗೆ ಸ್ಪಂದಿಸಿ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಬೇಕು., ಪತ್ರಕರ್ತರು ಕಚೇರಿ ತೆರೆಯಲು ನಾನು ಸಹಾಯ ಸಹಕಾರ ಮಾಡುತ್ತೇನೆ ಎಂದು ಹೇಳಿದರು.
ಪತ್ರಕರ್ತರ ಸಂಘದ ಉಪಾಧ್ಯಕ್ಷರಾದ ಎನ್ ವೆಂಕಟೇಶ್ ಮಾತನಾಡಿ, ಸರ್ಕಾರವು ಪತ್ರಕರ್ತರಿಗೆ ಬಸ್ ಪಾಸ್ ಮತ್ತು ಆರೋಗ್ಯ ಸುರಕ್ಷತಾ ಕಾರ್ಡ್ ಮತ್ತು ವಿಮೆ ಸೌಲಭ್ಯದ ಕುರಿತು ಜಾರಿ ಮಾಡಿರುವ ಸೌಲತ್ತುಗಳನ್ನು ಎಲ್ಲಾ ಪತ್ರಕರ್ತರಿಗೆ ಒದಗಿಸಿ ಕೊಡಬೇಕು, ಸಂಕಷ್ಟದಲ್ಲಿರುವ ಪತ್ರಕರ್ತರ ನೆರವಿಗೆ ಬರಬೇಕು ಎಂದು ಹೇಳಿದರು. ಸಂಘದ ಗೌರವಾಧ್ಯಕ್ಷ ಪರಮೇಶ್ವರಪ್ಪ ಮಾತನಾಡಿ ಶಾಸಕರಾದ ಜಿಎಚ್ ಶ್ರೀನಿವಾಸ್ ರವರು ಪತ್ರಕರ್ತರಿಗೆ ಮನೆ ನಿವೇಶನ ಕೊಡುತ್ತೇನೆ ಎಂದು ಹೇಳಿದ್ದಾರೆ ಎಲ್ಲಾ ಪತ್ರಕರ್ತರು ಸೌಲಭ್ಯವನ್ನು ಪಡೆದುಕೊಳ್ಳಬೇಕು ಎಲ್ಲರೂ ಒಗ್ಗಟ್ಟಿನಿಂದ ಇರೋಣ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಬಿ ಕೃಷ್ಣ ನಾಯಕ್ ಮಾತನಾಡಿ ಈ ಹಿಂದೆ ನಿರ್ಮಿಸಿರುವ ಪತ್ರಿಕಾ ಭವನ ಬೇರೆಯವರ ಹೆಸರಿನಲ್ಲಿದೆ ಇಂದು ಪಾಳು ಬಿದ್ದಿರುವುದು ವಿಷಾದನೀಯ ಆದರೆ ನಾವೊಂದು ಪತ್ರಿಕಾ ಭವನ ನಿರ್ಮಾಣ ಮಾಡುವುದೇ ನಮ್ಮ ಗುರಿಯಾಗಿದೆ ಶಾಸಕರು ಸಹ ಪತ್ರಕರ್ತರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಮನವಿ ಮಾಡಿದರು. ಎನ್ಜಿ ರಮೇಶ್ ಸ್ವಾಗತಿಸಿ ನಿರೂಪಿಸಿ ವಂದಿಸಿದರು.
ಜಿಲ್ಲಾ ವರದಿಗಾರರು: ಎನ್.ವೆಂಕಟೇಶ್.ತರೀಕೆರೆ