ಸಂತ ಶರಣ ಶ್ರೀ ಕನಕದಾಸರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲು:ಕುರುಬರ ಬಸವರಾಜ್ ಕರೆ.

ಕೂಡ್ಲಿಗಿ ನವೆಂಬರ್.22

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಪಟ್ಟಣದ ತಾಲೂಕಾ ಕಚೇರಿಯಲ್ಲಿ ಬುಧವಾರ ರಂದು ಮಾನ್ಯ ತಹಸೀಲ್ದಾರಾದ ಎಂ. ರೇಣುಕಾ, ಹಾಗೂ ತಾಲೂಕು ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ರವಿಕುಮಾರ್ ರವರ ನೇತೃತ್ವದಲ್ಲಿ ಶ್ರೀ ಕನಕದಾಸರ ಜಯಂತಿ ಅಂಗವಾಗಿ ಪೂರ್ವಭಾವಿ ಸಭೆ ಕರೆಯಲಾಗಿದ್ದು, ಈ ಸಭೆಯಲ್ಲಿ ಸಂತ ಶರಣರು ಶ್ರೀ ಕನಕದಾಸರು ಜಯಂತಿಯನ್ನು ಕೂಡ್ಲಿಗಿ ಯಲ್ಲಿ ಪ್ರಮುಖ ರಸ್ತೆಯಲ್ಲಿ ಶ್ರೀ ಕನಕದಾಸರ ಭಾವ ಚಿತ್ರದೊಂದಿಗೆ ಅದ್ದೂರಿಯಾಗಿ ವಿವಿಧ ವಾದ್ಯಾ ಮೇಳಗಳೊಂದಿಗೆ ಮೆರವಣಿಗೆ ಯನ್ನು 30- 11- 2023ರಂದು ಅದ್ದೂರಿ ಯಾಗಿ ಜಯಂತಿಯನ್ನು ಮಾಡಲು ಹಾಲು ಮತದ ಸಮುದಾಯದ ಮುಖಂಡರು ಹಾಗೂ ಇತರೆ ಸಮುದಾಯದ ಮುಖಂಡರು ಸಭೆಯಲ್ಲಿ ತೀರ್ಮಾನಿಸಲಾಯಿತು. ಈ ಸಂರ್ಭದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಕುರುಬ ಸಮುದಾಯದ ಮುಖಂಡರುಗಳು ಭಾಗವಹಿಸಿದ್ದರು.

ಮುಂದಿನ 30ನೇ ತಾರೀಕಿನಂದು ಶ್ರೀ ಕನಕದಾಸರ ಜಯಂತಿ ವಿಜೃಂಭಣೆಯಿಂದ ಮಾನ್ಯ ಕ್ಷೇತ್ರದ ಶಾಸಕರು ನೇತೃತ್ವದಲ್ಲಿ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಎಲ್ಲಾ ಸಮುದಾಯದ ಮುಖಂಡರುಗಳನ್ನು ಹಾಗೂ ಕುರುಬ ಸಮುದಾಯದ ಹಿರಿಯರು, ಯುವಕರು, ಪ್ರಮುಖ ಮುಖಂಡರುಗಳು ಜಯಂತಿಗೆ ಭಾಗವಹಿಸಿ ಕಾರ್ಯಕ್ರವನ್ನು ಯಶಸ್ವಿಯಾಗಿ ಮಾಡಬೇಕು ಎಂದು ತಾಲೂಕು ಕುರುಬ ಸಂಘದ ಅಧ್ಯಕ್ಷರು ಬೋಪ್ಪಾಲಾಪುರದ ಬಸವರಾಜ್ ತಿಳಿಸಿದರು, ಹಾಗೆ ಈ ಸಂರ್ಭದಲ್ಲಿ ಉಪನ್ಯಾಸಕರಾದ ದೇವಪ್ಪ ರವರು ಸಂತ ಶರಣರ ಇತಿಹಾಸ ಪುರುಷರ ಜಯಂತಿ ಯನ್ನು ಮಾಡುವ ಕುರಿತು ಸಮುದಾಯದ ಎಲ್ಲಾ ಬಂಧುಗಳಿಗೆ ತಿಳಿಸಿ ಹಾಗೂ ಜಯಂತಿಗೆ ಎಲ್ಲಾರನ್ನು ಕರೆತನ್ನಿ ಎಂದು ಕರೆ ಕೊಟ್ಟರು , ಈ ಸಂರ್ಭದಲ್ಲಿ ಪೋಲಕರ ಪ್ರಕಾಶ್ರವರು ಜಯಂತಿಯ ಕುರಿತು ಮಾತನಾಡಿದರು.ಮದ್ಯಾನಪ್ಪ, ಕೆ. ಎನ್. ರಾಘವೇಂದ್ರ, ಲಕ್ಷ್ಮಣ, ಬೊಪ್ಪಲಾಪುರದ, ಮಲ್ಲಿಕಾರ್ಜುನ, ಬೊಪ್ಪಲಾಪುರದ ಪರಸಪ್ಪ, ಅಂಜಿನಪ್ಪ ಗ್ರಾಮ ಪಂಚಾಯತಿ ಸದಸ್ಯರು, ಬಸವರಾಜ್ ಬಡೆಲಡಕು, ಉಮೇಶ್, ಬಡಲಡುಕು ಶಿವರಾಮಪ್ಪ, ಉಪಸ್ಥಿತರಿದ್ದರ.

ಜಿಲ್ಲಾ ವರದಿಗಾರರು:ರಾಘವೇಂದ್ರ.ಬಿ.ಸಾಲುಮನೆ ಕೂಡ್ಲಿಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button