ರಾಷ್ಟ್ರೀಯ ಪವರ್ ಲಿಫ್ಟಿಂಗ್ ಬೆಂಚ್ ಪ್ರೆಸ್ ಸ್ಪರ್ಧೆ – ವಿಜಯನಗರ ಜಿಲ್ಲೆಯಿಂದ 3. ಜನ ಕ್ರೀಡಾಪಟುಗಳು ಆಯ್ಕೆ.
ಹೊಸಪೇಟೆ ನವೆಂಬರ್.23
![](https://i0.wp.com/sknewskannada.in/wp-content/uploads/2023/11/IMG-20231123-WA0016.jpg?resize=682%2C1024&ssl=1)
ಬೆಂಗಳೂರಿನಲ್ಲಿ ನವಂಬರ್ 22 ರಿಂದ 26 ರವರೆಗೆ ನಡೆಯಲಿರುವ ರಾಷ್ಟ್ರೀಯ ಪವರ್ ಲಿಫ್ಟಿಂಗ್ ಬೆಂಚ್ ಪ್ರೆಸ್ ಸ್ಪರ್ಧೆಗೆ ಜಿಲ್ಲೆಯ ಹೊಸಪೇಟೆ ನಗರ ದವರಾದ 3. ಜನ ಕ್ರೀಡಾಪಟುಗಳಾದ ವಾಲಿಭಾಷ, ಗಂಗಾಧರ್, ಮತ್ತು ವಿಜಯವಾಣಿ ಆಯ್ಕೆಯಾಗಿದ್ದರೆಂದು ಕ್ರೀಡಾ ತರಬೇತುದಾರ ವಾಲಿಭಾಷ ತಿಳಿಸಿದರು.
![](https://i0.wp.com/sknewskannada.in/wp-content/uploads/2023/11/IMG-20231123-WA0014.jpg?resize=708%2C944&ssl=1)
ಈ ಸ್ಪರ್ಧೆಗೆ ಆಯ್ಕೆಯಾದ 3 ಜನ ಕ್ರೀಡಾಪಟುಗಳು ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 1 ರವರೆಗೆ ಮಂಗಳೂರಿನಲ್ಲಿ ನಡೆದಂತಹ ರಾಜ್ಯ ಮಟ್ಟದ ಪವರ್ ಲಿಫ್ಟಿಂಗ್ ಬೆಂಜ್ ಟ್ರಸ್ಟ್ ಸ್ಪರ್ಧೆಯಲ್ಲಿ ವಿಜಯನಗರ ಜಿಲ್ಲೆಯಿಂದ 15 ಜನ ಕ್ರೀಡಾಪಟುಗಳು ಭಾಗವಹಿಸಿ ಅದರಲ್ಲಿ 11 ಜನ ಕ್ರೀಡಾಪಟುಗಳು ವಿಜೇತರಾಗಿದ್ದರು.
![](https://i0.wp.com/sknewskannada.in/wp-content/uploads/2023/11/IMG-20231123-WA0015.jpg?resize=420%2C538&ssl=1)
ಅದರಲ್ಲಿ ಮೂರು ಜನ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಆಗಿದ್ದು ಬೆಂಗಳೂರಿನಲ್ಲಿ ನವಂಬರ್ 22.ರಿಂದ ನಾಲ್ಕು ದಿನಗಳ ಕಾಲ ನಡೆಯಲಿರುವ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾದ 74 ಕೆಜಿ ವಿಭಾಗದಲ್ಲಿ ವಾಲಿಭಾಷ, 59 ಕೆಜಿ ವಿಭಾಗದಲ್ಲಿ ಗಂಗಾಧರ್, 76 ಕೆಜಿ ಮಹಿಳೆಯರ ವಿಭಾಗದಲ್ಲಿ ವಿಜಯವಾಣಿ ಈ ಮೂರು ಜನ ಕ್ರೀಡಾಪಟುಗಳು ರಾಷ್ಟ್ರ ಮಟ್ಟದಲ್ಲಿ ಗೆದ್ದು ಕರ್ನಾಟಕಕ್ಕೆ, ಮತ್ತು ಜಿಲ್ಲೆಗೆ ಕೀರ್ತಿ ತರಲೆಂದು ಕ್ರೀಡಾಭಿಮಾನಿಗಳು ಶುಭ ಹಾರೈಸಿದ್ದಾರೆ.
ತಾಲೂಕ ವರದಿಗಾರರು:ಮಾಲತೇಶ್.ಶೆಟ್ಟರ್. ಹೊಸಪೇಟೆ