ಜಯ ಕರ್ನಾಟಕ ಸಂಘಟನೆಯಿಂದ ಸಂವಿಧಾನ ಸಮರ್ಪಣಾ ದಿನಾಚರಣೆ.
ತರೀಕೆರೆ ನವೆಂಬರ್.26
![](https://i0.wp.com/sknewskannada.in/wp-content/uploads/2023/11/IMG-20231126-WA00391.jpg?resize=708%2C398&ssl=1)
ಜನ ಸಾಮಾನ್ಯರ ಸಮಸ್ಯೆಗಳಿಗೆ ಸುಲಭವಾಗಿ ಕೈಗೆ ಸಿಗುವ ಸಂಘಟನೆ ಎಂದರೆ ಜೈ ಕರ್ನಾಟಕ ಎಂದು ಸಂಘಟನೆಯ ಜಿಲ್ಲಾ ಅಧ್ಯಕ್ಷರಾದ ಅನಿಲ್ ರವರು ಹೇಳಿದರು. ಅವರು ಇಂದು ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ಏರ್ಪಡಿಸಿದ್ದ 74ನೇ ಸಂವಿಧಾನ ಸಮರ್ಪಣಾ ದಿನಾಚರಣೆ, ಹಾಗೂ 50.ನೇ ವರ್ಷದ ಕನ್ನಡ ರಾಜ್ಯೋತ್ಸವ, ಮತ್ತು ಹುತಾತ್ಮ ಯೋಧರ ಶ್ರದ್ಧಾಂಜಲಿ ಸಭೆಯನ್ನು ಭಾರತರತ್ನ ಡಾ. ಬಿಆರ್ ಅಂಬೇಡ್ಕರ್ ರವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟನೆ ಮಾಡಿ ಮಾತನಾಡಿದರು. ದೇಶಕ್ಕಾಗಿ ಹುತಾತ್ಮರಾದ ಕ್ಯಾಪ್ಟನ್ ಫ್ರಂಜಲ್ ಹಾಗೂ ಐದು ಜನ ಸೈನಿಕರ ನಿಧನಕ್ಕೆ ಮೌನ ಆಚರಿಸುವ ಮೂಲಕ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು. ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರು ದೇಶಕ್ಕೆ ಸಂವಿಧಾನ ಅರ್ಪಿಸಿದ ಈ ದಿನದಲ್ಲಿ ದಲಿತ ಮುಖಂಡರಾದ ತರೀಕೆರೆ ಎನ್ ವೆಂಕಟೇಶ್ ರವರಿಗೆ ಕರ್ನಾಟಕ ವಿಕಾಸ ರತ್ನ ಪ್ರಶಸ್ತಿಗೆ ಭಾಜನ ರಾಗುತ್ತಿರುವುದರಿಂದ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸುತಿದ್ದೇವೆ ಎಂದು ಅವರಿಗೆ ಗೌರವ ಸನ್ಮಾನ ಮಾಡಿದರು. ರಾಜ್ಯದಲ್ಲಿ ಏಕರೂಪ ಶಿಕ್ಷಣ ನೀತಿಗಾಗಿ ಹೋರಾಟ ಮಾಡಿದ್ದೇವೆ, ಭಾಷೆ ಗಡಿನಾಡು ವಿಚಾರವಾಗಿ ಹೋರಾಟ ಮಾಡಿದ್ದೇವೆ,ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ವಿರೋಧಿಸಿ ಹೋರಾಟ ಮಾಡಿದ್ದೇವೆ, ಕಾವೇರಿಗಾಗಿ ಹೋರಾಟ ಮಾಡಿದ್ದೇವೆ ಎಂದು ಹೇಳಿದರು. ಈ ಸಂದರ್ಭದಲ್ಲಿ ತರೀಕೆರೆ ಪಟ್ಟಣದಲ್ಲಿ ರಸ್ತೆ ಅಗಲೀಕರಣ ಮಾಡಬೇಕು ಮತ್ತು ಕುಡಿಯುವ ನೀರಿನ ಸಮಸ್ಯೆಯನ್ನು ಬಗೆ ಹರಿಸಬೇಕೆಂದು ಸರ್ಕಾರಕ್ಕೆ ಮಾಧ್ಯಮದ ಮೂಲಕ ಮನವಿ ಮಾಡಿದರು. ಲಕ್ಕವಳ್ಳಿ ಹೋಬಳಿ ಅಧ್ಯಕ್ಷರಾಗಿ ರವಿಕುಮಾರ್ ಮತ್ತು ತಾಲೂಕು ಉಪಾಧ್ಯಕ್ಷರಾಗಿ ಬಾವಿಕೆರೆಯ ನಾಗೇಂದ್ರ ಹಾಗೂ ಮಹಿಳಾ ಘಟಕದ ತಾಲೂಕು ಅಧ್ಯಕ್ಷರಾಗಿ ರೂಪ ರವರನ್ನು ಆಯ್ಕೆ ಮಾಡಿ ಘೋಷಿಸಿದರು. ನೇಮಕಾತಿ ಆದೇಶಗಳನ್ನು ನೀಡಿದರು.
![](https://i0.wp.com/sknewskannada.in/wp-content/uploads/2023/11/IMG-20231126-WA00411.jpg?resize=708%2C398&ssl=1)
ತರೀಕೆರೆ ತಾಲೂಕು ಅಧ್ಯಕ್ಷರಾದ ಟಿ ಎನ್ ಜಗದೀಶ್ ಮಾತನಾಡಿ ಜಯ ಕರ್ನಾಟಕ ಸಂಘದ ಸದಸ್ಯರು ನೂರಾರು ಜನ ಗ್ರಾಮ ಪಂಚಾಯಿತಿ ಸದಸ್ಯರಾಗಿ ಸಮಾಜ ಸೇವೆ ಮಾಡುತ್ತಿದ್ದಾರೆ, ಮಹಿಳೆಯರಿಗೆ ಶಕ್ತಿ ತುಂಬಿ ಮಹಿಳಾ ಸಬಲೀಕರಣ ಮಾಡಬೇಕು. ಅರಿವು ಮೂಡಿಸಬೇಕು, ವಿದ್ಯಾರ್ಥಿ ಘಟಕ, ಕಾರ್ಮಿಕರ ಘಟಕ,ಮಾಡೋಣ ಯುವಕರಿಗೆ ಭ್ರಷ್ಟಾಚಾರದ ವಿರುದ್ಧ ಹೋರಾಡಲು ಸಂದೇಶ ನೀಡಬೇಕು. ಈ ಸಂಘಟನೆಯಲ್ಲಿ ಎಲ್ಲಾ ಜಾತಿ, ಧರ್ಮದವರು ಸಹ ಇದ್ದಾರೆ ಎಂದು ಹೇಳಿದರು. ಮಾಜಿ ಪುರಸಭಾ ಅಧ್ಯಕ್ಷರು ಹಾಗೂ ಜಯ ಕರ್ನಾಟಕ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷರಾದ ಪ್ರಕಾಶ್ ವರ್ಮ ಮಾತನಾಡಿ ಈ ದೇಶವು ಅಂಬೇಡ್ಕರ್ ಅವರು ನೀಡಿದ ಸಂವಿಧಾನದ ಆಧಾರದಲ್ಲಿ ನಡೆಯುತ್ತಿದೆ ಸರ್ವರಿಗೂ ಸಮಾನವಾದ ಅವಕಾಶಗಳನ್ನು ಒದಗಿಸಿದೆ. ಜಯ ಕರ್ನಾಟಕ ಸಂಘಟನೆಯಲ್ಲಿ ಕಳೆದ 18 ವರ್ಷಗಳಿಂದ ತೊಡಗಿಸಿ ಕೊಂಡು ಕೆಲಸ ಮಾಡಿದ್ದೇನೆ. ಆದ್ದರಿಂದ ನಾನು ಇಂದು ಪುರಸಭಾ ಸದಸ್ಯರಾಗಿ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ನಗರ ಅಧ್ಯಕ್ಷರಾಗಿ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿದೆ, ಆ ಋಣ ನನ್ನ ಮೇಲಿದೆ ಸಮಾಜ ಸೇವೆ ಮಾಡಿ ತೀರಿಸಬೇಕಾಗಿದೆ, ಅಧಿಕಾರ ಶಾಶ್ವತವಲ್ಲ ನಾವು ಮಾಡುವ ಸೇವೆ ಶಾಶ್ವತವಾಗಿರಬೇಕು ಎಂದು ಹೇಳಿದರು. ಹಿರಿಯ ಪತ್ರಕರ್ತರಾದ ಅನಂತನಾಡಿಗ್ ರವರು ಮಾತನಾಡಿ ಜಯ ಕರ್ನಾಟಕ ಜಗದೀಶ್ ಪತ್ರಕರ್ತರ ಸ್ವಾಭಿಮಾನವನ್ನು ಎತ್ತಿ ಹಿಡಿದವರು ಎಂದು ಹೇಳಿದರು. ಬಾವಿಕೆರೆ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರಾದ ವೆಂಕಟೇಶ್, ಸಂಘದ ಜಿಲ್ಲಾ ಕಾರ್ಯದರ್ಶಿಯಾದ ಐ ಡಿ ಚಂದ್ರಶೇಖರ್,ವಿನಯ್ ಕುಮಾರ್ ಮಾತನಾಡಿದರು ಕಾರ್ಯಕ್ರಮದಲ್ಲಿ ಸಂಘದ ಮುಖಂಡರಾದ ಪದ್ಮಣ್ಣ, ವಕೀಲರಾದ ರವಿ, ದರ್ಶನ್, ಡಿ ಮಂಜು, ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ ಕಾರ್ತಿಕ್, ಆನಂದ್ ಉಪಸ್ಥಿತರಿದ್ದು, ಜಿಲ್ಲಾ ಸಾಂಸ್ಕೃತಿಕ ಘಟಕದ ಅಧ್ಯಕ್ಷರಾದ ಮಲ್ಲಿಗೆ ಸುಧೀರ್ ರವರು ಕನ್ನಡದ ಗೀತೆಗಳನ್ನು ಹಾಡಿದರು.
ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್.ತರೀಕೆರೆ