ಸಂವಿಧಾನವನ್ನು ಅಜ್ಞಾನದ ಮುಚ್ಚಿದ ಕಣ್ಣಿನಿಂದ ನೋಡಬಾರದು. ಸುಜ್ಞಾನದ ತೆರೆದ ಕಣ್ಣಿನಿಂದ ನೋಡಬೇಕು – ಪ್ರೊ. ಎನ್.ಚಿನ್ನಸ್ವಾಮಿ. ಸೋಸಲೆ.

ಹೊಸಪೇಟೆ ನವೆಂಬರ್.27

ಜೈ ಭೀಮ್ ವೃತ್ತಕ್ಕೆ ಆಗಮಿಸಿದ ದಲಿತ ಪರ ಸಂಘಟನೆಗಳು ಪ್ರಗತಿಪರ ಚಿಂತಕರು’ 74.ನೇ ಸಂವಿಧಾನದ ಸಮರ್ಪಣಾ ದಿನ’ಸಂವಿಧಾನ ಜಾಗೃತಿ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದ್ದರು. “ಪ್ರೊ. ಎನ್ ಚಿನ್ನಸ್ವಾಮಿ ಸೋಸಲೆ ಮಾತನಾಡಿದರು”ಎರಡು ಸಾವಿರ ವರ್ಷಗಳಿಂದ ಅಜ್ಞಾನದಿಂದ ಕೆಲವೇ ಕೆಲವು ಬೆರಳೆಣಿಕೆ ಜನರು ತಮ್ಮ ಸ್ವಾರ್ಥ ಸಾಧನೆಗಾಗಿ ಬಹು ಜನರ ಕಣ್ಣನ್ನು ಮುಚ್ಚಿಸಿದ್ದರು. ಇಂತಹ ಬಹು ಜನರ ಕಣ್ಣನ್ನು ಜ್ಞಾನದ ಮೂಲಕ ತೆರಿಸಿದ ಸಂದರ್ಭವೇ ಸಂವಿಧಾನ ಭಾರತಕ್ಕೆ ಸಮರ್ಪಣೆಯಾದ ಸಂದರ್ಭ. ಇಂತಹ ಸಂವಿಧಾನವನ್ನು ನಾವು ಕಣ್ಣಿಗೆ ಕಾಣದ ದೇವರನ್ನು ಕಣ್ಣು ಮುಚ್ಚಿ ಭಕ್ತಿಯಿಂದ ಪೂಜಿಸುವ ಅಜ್ಞಾನದ ಮಾದರಿಯಲ್ಲಿ ನೋಡಬಾರದು. ಬದಲಿಗೆ ತೆರೆದ ಕಣ್ಣಿನ ಸುಜ್ಞಾನದ ಮೂಲಕ ನೋಡಿ ಗ್ರಹಿಸಬೇಕಾಗಿದೆ. ಏಕೆಂದರೆ ಸಂವಿಧಾನ ಮಾತನಾಡುತ್ತದೆ, ಮಾತು ಕಲಿಸುತ್ತದೆ ಹಾಗೆಯೇ ಮುನ್ನಡೆಸುತ್ತದೆ. ಆದರೆ ನಾವು ಮಾತ್ರ ಈ ಜನಮುಖಿ ಸಂವಿಧಾನವನ್ನು ಮಾತನಾಡಿಸಲು ಹೋಗುತ್ತಿಲ್ಲ. ಬದಲಿಗೆ ಇನ್ನೂ ಸಹ ನಮ್ಮ ಕಣ್ಣು ಮುಚ್ಚಿಕೊಂಡೇ ದೇವರ ಹೆಸರಿನ ಅಜ್ಞಾನದಿಂದ ಮಾತನಾಡುತ್ತಿರುವ ಪುರಾಣದ ಸಂವಿಧಾನವನ್ನೇ ಮಾತನಾಡಿಸಲು ಹಂಬಲಿಸುತ್ತಿರುವುದು ನಮ್ಮ ನಡುವಿನ ಬಹುದೊಡ್ಡ ಸಂವಿಧಾನಾತ್ಮಕ ದುರಂತ ಎಂದರು. ಆದರೆ,ಯಾರಿಗೆ ಇಂತಹ ಜನ ಮುಖಿ ಚಿಂತನೆಯ ಸಂವಿಧಾನದ ಅವಶ್ಯಕತೆ ಇರಲಿಲ್ಲವೋ ಅವರು ಸಹ ಸಂದರ್ಭಕ್ಕೆ ಹೊಂದಿಕೊಂಡೆ ಅದನ್ನು ಮಾತನಾಡಿಸುವುದು ಗೊತ್ತು , ಮುಂದುವರೆದು ತಮಗೆ ಸಾಂಸ್ಕೃತಿಕವಾಗಿ ಬೇಕಾದ ಎಲ್ಲವನ್ನು ಸಂವಿಧಾನಾತ್ಮಕವಾಗಿಯೇ ಪಡೆದು ಕೊಳ್ಳುವುದು ಗೊತ್ತು ಎಂದು ಹೇಳಿದರು. ಮಾತಾಡುವ ಸಂವಿಧಾನವನ್ನು ನಾವು ಮಾತನಾಡಿಸ ಬೇಕಾದರೆ ನಮಗೆ ಪ್ರಜ್ಞಾ ಪೂರ್ವಕ ಶಿಕ್ಷಣ ಬಹು ಮುಖ್ಯವಾದದ್ದು. ನಾವು ಪದವಿಗಳ ಮೇಲೆ ಪದವಿಯನ್ನು ಪಡೆದು ಶಿಕ್ಷಣವಂತರಾಗುತ್ತಿದ್ದೇವೆ ಎಂದು ಕೊಂಡರೂ ಸಹ ಅಂತರಾಳದಲ್ಲಿ 2000 ವರ್ಷಗಳಿಂದ ನಮ್ಮ ಮನದಲ್ಲಿ ಅಡಗಿರುವ ಜ್ಞಾನದ ಪಾರಂಪರಿಕ ಶಿಕ್ಷಣವನ್ನೇ ಮೈಗೂಡಿಸಿ ಕೊಂಡಿರುವ ಕಾರಣಕ್ಕಾಗಿ ಏನೇ ಶಿಕ್ಷಣ ಪಡೆದರೂ ಸಹ ಸಂವಿಧಾನಾತ್ಮಕವಾಗಿ ಪ್ರಬುದ್ಧತೆಯ ಶಿಕ್ಷಣವಂತರಾಗುತ್ತಿಲ್ಲ. ಇದು ಇಂದಿನ ಸಂಧರ್ಭದ ಬಹುಜನರ ಬಹುದೊಡ್ಡ ತೊಡಕಾಗಿದೆ. ಇದರಿಂದಾಗಿ ಇವರು ಕಟ್ಟಿ ಕೊಳ್ಳುತ್ತಿರುವ ಸಂಘಟನೆಗಳು ಗಟ್ಟಿಯಾಗುತ್ತಿಲ್ಲ, ಈ ಹಿನ್ನೆಲೆಯ ಹೋರಾಟಗಳೂ ಫಲ ಕೊಡುತ್ತಿಲ್ಲ ಎಂದು ಕನ್ನಡ ವಿಶ್ವವಿದ್ಯಾಲಯದ ಚರಿತ್ರೆ ವಿಭಾಗದ ಪ್ರಾಧ್ಯಾಪಕರು ಹಾಗೂ ಚಿಂತಕರು ಆದ ಪ್ರೊ. ಎನ್ ಚಿನ್ನಸ್ವಾಮಿ ಸೋಸಲೆ ಅವರು ವಿಷಾದ ವ್ಯಕ್ತಪಡಿಸಿದರು. ಅವರು ನವಂಬರ್ 26 ರಂದು ಬಾಬಾಸಾಹೇಬ್ ಅಂಬೇಡ್ಕರ್ ಅವರು ಸ್ವತಂತ್ರ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಪೂರಕವಾದ ಜನಮುಖಿ ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿ ಬರೆದು ಅದರ ಮೂಲ ಕರುಡನ್ನು ರಾಷ್ಟ್ರಪತಿಗಳಿಗೆ ಅರ್ಪಿಸಿದ ದಿನದ ಅಂಗವಾಗಿ ವಿಜಯನಗರ ಜಿಲ್ಲಾ ಬಾಬಾ ಸಾಹೇಬ್ ಡಾ. ಬಿ ಆರ್ ಅಂಬೇಡ್ಕರ್ ಸಂಘ, ಹೊಸಪೇಟೆ ನಗರದ ಜೈ ಭೀಮ್ ವೃತ್ತದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ಮಾತನಾಡಿದರು. ಹೊಸಪೇಟೆಯ ಪ್ರಗತಿಪರ ಚಿಂತಕರಾದ ಶ್ರೀ ಜಂಬಣ್ಣ ನಾಯಕ ಅವರು ಬಾಬಾ ಸಾಹೇಬರು ಭಾರತಕ್ಕಾಗಿ ಅರ್ಪಿಸಿದ ಈ ಸಂವಿಧಾನವೇ ನಮ್ಮೆಲ್ಲರ ಒಡಲು ಹಾಗೂ ಜೀವ ಎಂದು ಹೇಳಿದರು. ಸಾವಿರಾರು ವರ್ಷಗಳಿಂದ ನಮ್ಮ ಮೂಲಭೂತ ಹಕ್ಕುಗಳನ್ನು ಕೆಲವೇ ಕೆಲವು ಮೂಲ ಭೂತವಾದಿಗಳು ಕಸಿದು ಕೊಂಡಿದ್ದನ್ನು ನಮ್ಮ ಮನ ಹಾಗೂ ಮನೆಗೆ ತಲುಪಿಸಿದೆ ಅಂಬೇಡ್ಕರ್ ಅವರು ರಚಿಸಿದ ನಮ್ಮ ದೇಶದ ಸಂವಿಧಾನ ಎಂದು ಹೇಳಿದರು. ಇಂತಹ ಸಂವಿಧಾನವನ್ನು ಪ್ರಪಂಚವೇ ಒಪ್ಪಿಕೊಂಡು ಕೊಂಡಾಡುತ್ತಿರುವಾಗ ನಮ್ಮ ಕೆಲವೇ ಕೆಲವು ಸಂಪ್ರದಾಯವಾದಿ ದೇಶೀಯರು ಏಕೆ ವಿರೋಧಿಸುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು. ವಿಜಯನಗರ ಜಿಲ್ಲೆ ಬಾಬಾಸಾಹೇಬ್ ಡಾ. ಬಿ ಆರ್ ಅಂಬೇಡ್ಕರ್ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಸೋಮಶೇಖರ್ ಬಣ್ಣದಮನೆ ಅವರು ಪ್ರಸ್ತಾವಿಕವಾಗಿ ಮಾತನಾಡಿ ಸಂವಿಧಾನದ ಪೀಠಿಕೆಯನ್ನು ಬೋಧಿಸಿದರು . ಹೊಸಪೇಟೆ ನಗರದ ನೂರಾರು ಪ್ರಗತಿಪರ ಚಿಂತಕರು ಸೇರಿದ್ದ ಈ ಸಮಾರಂಭವು ಸಂವಿಧಾನದ ಪೀಠಿಕೆಯನ್ನು ಸಾಮೂಹಿಕವಾಗಿ ಒಂದೇ ಧ್ವನಿಯಲ್ಲಿ ಓದುವ ಮೂಲಕ ರಾಷ್ಟ್ರದ ಸಾರ್ವಭೌಮತ್ವವನ್ನು ಎತ್ತಿ ಹಿಡಿದರು.ಈ ಕಾರ್ಯಕ್ರಮದಲ್ಲಿ ಜೆ ಶಿವಕುಮಾರ್, ಬಿ ಹನುಮಂತಪ್ಪ, ರಾಮಚಂದ್ರ ಬಾಬು, ಸಣ್ಣ ಮಾರೆಪ್ಪ, ಡಿ ವೆಂಕಟರಮಣ, ಬಿ ಚಂದ್ರಶೇಖರ್, ಕಾರಿಗೆನೂರ್ ರಾಮಕೃಷ್ಣ, ಸಿ ಗೊವಿಂದರಾಜ್, ರಫೀಕ್, ಕಟಿಗಿ ಇರ್ಫಾನ್, ಸಜ್ಜಾದ್ ಖಾನ್, ಸಿ ನೀಲಕಂಟ, ಜೆ ಸಿ ಈರಣ್ಣ, ಸಿ ರಾಜ, ಸಿ ರಾಮಚಂದ್ರ, ತಾಯಪ್ಪ ನಾಯಕ, ಶ್ರೀಮತಿ ಅಂಜಲಿ ಬೆಳಗಲ್, ತಮಾನಳೆಪ್ಪ , ಸಿ ರಮೇಶ್, ಚಂದ್ರ ಮೋಹನ್, ಇನ್ನು ಅನೇಕ ದಲಿತ ಮತ್ತು ಪ್ರಗತಿಪರ ಮುಖಂಡರು ಭಾಗವಹಿಸಿದ್ದರು. ಕೊನೆಯಲ್ಲಿ ವೈ ರಾಮಚಂದ್ರ ಬಾಬು ಮಾತಿನಾಡಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ವರೆಲ್ಲರಿಗೂ ಭೀಮ ವಂದನೆಗಳನ್ನ ತಿಳಿಸಿದರು.

ತಾಲೂಕ ವರದಿಗಾರರು:ಮಾಲತೇಶ್.ಶೆಟ್ಟರ್.ಹೊಸಪೇಟೆ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button