ಸಂವಿಧಾನ ದಿನಾಚರಣೆ ಮರೆತ ಹೊಸಹಳ್ಳಿ ನಾಡ ಕಚೇರಿ.
ಹೊಸಹಳ್ಳಿ ನವೆಂಬರ್.28
ವಿಶ್ವದಲ್ಲೇ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎಂಬ ಹೆಗ್ಗಳಿಕೆ ಭಾರತಕ್ಕಿದೆ. ಈ ಪ್ರಜಾಪ್ರಭುತ್ವದ ಮೂಲಾಧಾರವೇ ಈ ದೇಶದ ಸಂವಿಧಾನ. ಈ ಸಂವಿಧಾನ ನವೆಂಬರ್ 26 ರಚನೆಯಾಗಿ ಅಂಗೀಕಾರಗೊಂಡ ದಿನವೇ ರಾಷ್ಟ್ರೀಯ ಸಂವಿಧಾನ ದಿನವಾಗಿದೆ ಈದಿನ ಆಚರಣೆ ಮಾಡುವುದು ನಮ್ಮೆಲ್ಲರ ಕರ್ತವ್ಯಕೂಡ್ಲಿಗಿ ತಾಲೂಕಿಗೆ ಸೇರಿದ ಹೊಸಳ್ಳಿ ಈ ನಾಡ ಕಚೇರಿಯಲ್ಲಿ ಸಂವಿಧಾನ ದಿನಾಚರಣೆ ದಿನ ಡಾ ಬಿ ಆರ್ ಅಂಬೇಡ್ಕರ್ ಅವರವರ ಭಾವ ಚಿತ್ರ ಇಟ್ಟು ಪೂಜೆ ಮಾಡಿ ಸಂವಿಧಾನ ದಿನಾಚರಣೆಯನ್ನು ಆಚರಣೆ ಮಾಡದೇ ಭಾರತ ಸಂವಿಧಾನಕ್ಕೆ ಅಪಮಾನ ಮಾಡುವ ಕೆಲಸಾ ಹೊಸಳ್ಳಿ ನಾಡ ಕಚೇರಿಯಲ್ಲಿ ಸಿಬ್ಬಂದಿ ಅವಮಾನ ಮಾಡಿದ್ದಾರೆ ಭಾನುವಾರ ಸಂವಿಧಾನ ದಿನಾಚರಣೆ ಕಡ್ಡಾಯವಾಗಿ ಕಚೇರಿಗಳಲ್ಲಿ ಆಚರಣೆ ಮಾಡಬೇಕೆಂದು ಸರ್ಕಾರದ ಆದೇಶ ಇದ್ದರು ಕೂಡ ಹೊಸಳ್ಳಿ ನಾಡ ಕಚೇರಿಯಲ್ಲಿ ಸಂವಿಧಾನದ ದಿನಾಚರಣೆಯನ್ನು ಆಚರಣೆ ಮಾಡಿಲ್ಲ .
ಹೊಸಳ್ಳಿ ನಾಡ ಕಚೇರಿಯ ಕಂದಾಯ ಇಲಾಖೆ ಅಧಿಕಾರಿಗಳನ್ನು ಸಂವಿಧಾನ ದಿನಾಚರಣೆ ಕಚೇರಿಯಲ್ಲಿ ಆಚರಣೆ ಮಾಡಿದೀರಾ ಅಥವಾ ಇಲ್ಲ ಅಂತ ಮಾಧ್ಯಮದವರು ಹೊಸಳ್ಳಿ ಕಂದಾಯ ನಿರೀಕ್ಷಕರಾದ ಮುರುಳಿಕೃಷ್ಣ ರವರನ್ನು ಕೇಳಿದರೆ ಸರ್ ನಮಗೆ ಗೊತ್ತಿಲ್ಲ ನಾನು ಬೇರೆ ಕಡೆ ಇದ್ದೆ ಮೊನ್ನೆ ನಮ್ಮ ಕಚೇರಿಯಲ್ಲಿ ಯಾವುದು ಜಯಂತಿ ಮಾಡಿದ್ದೇವ. ಅಂತ Ri ಮುರಳಿ ಕೃಷ್ಣರವರು ಹೇಳುತ್ತಾರೆ. ನಾಡಕ ಕಚೇರಿಯಲ್ಲಿ ಯಾವ ಜಯಂತಿ ಮಾಡಿದ್ದಾರೆ ಅನ್ನುವ ಜಯಂತಿಯ ಹೆಸರು ಸಹ ಗೊತ್ತಿಲ್ಲಾ. ಇನ್ನೂ ಸಂವಿಧಾನ ದಿನಾಚರಣೆ ಬಗ್ಗೆ ಕೇಳಿದರೆ ಹೊಸಳ್ಳಿ ನಾಡಕ ಚೇರಿಯ ಪ್ರಭಾರಿ ಉಪ ತಹಶೀಲ್ದಾರರಾದ ಕುಮಾರಸ್ವಾಮಿ ಯವರನ್ನು ಮತ್ತು ಸಿಬ್ಬಂದಿಯನ್ನು ಕೇಳುತ್ತೇನೆ ಅಂತ Ri ಮುರಳಿ ಕೃಷ್ಣರವರು ಹಾರಿಕೆ ಉತ್ತರ ಕೊಡುತ್ತಾರೆ ಹೊಸಳ್ಳಿ ನಾಡಕ ಚೇರಿಯಲ್ಲಿ ಸಂವಿಧಾನ ದಿನಾಚರಣೆಯನ್ನು. ಆಚರಣೆ ಮಾಡುವುದಕ್ಕೆ ನಾಡ ಕಚೇರಿಯ ಪ್ರಭಾರಿ ಉಪ ತಹಶೀಲ್ದಾರರಾದ ಕುಮಾರಸ್ವಾಮಿಯವರು ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಸಂವಿಧಾನ ದಿನಾಚರಣೆ ಮಾಡುವುದಕ್ಕೆ ಯಾವೊಬ್ಬ ಅಧಿಕಾರಿಯೂ ಕೂಡ ನಾಡ ಕಚೇರಿ ಕಡೆ ತಿರುಗಿ ನೋಡಿಲ್ಲ ಅಂತಃ ಸ್ಥಳೀಯರು ಸಾರ್ವಜನಿಕರು ಹಾಗೂ ದಲಿತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲಾ ವರದಿಗಾರರು:ರಾಘವೇಂದ್ರ.ಬಿ.ಸಾಲುಮನಿ. ಕೂಡ್ಲಿಗಿ