ಕನಕದಾಸರ ಭಕ್ತಿ ಶ್ರದ್ಧೆ ನಿಷ್ಠೆಗಳನ್ನು ಅಳವಡಿಸಿಕೊಂಡಾಗ ಮನುಷ್ಯ ಪರಿ ಪೂರ್ಣವಾಗಲು ಸಾಧ್ಯ – ಜೆ.ಪಿ. ಚವಡಿಹಾಳ.

ಅರ್ಜುಣಗಿ ಕೆಡಿ ನವೆಂಬರ್.30

ಇಂಡಿ ಕನಕದಾಸರ ಭಕ್ತಿ, ಶ್ರದ್ಧೆ ಮತ್ತು ನಿಷ್ಠೆಗಳನ್ನು ಅಳವಡಿಸಿಕೊಂಡಾಗ ಮನುಷ್ಯ ಪರಿ ಪೂರ್ಣವಾಗಲು ಸಾಧ್ಯ. ನುಡಿಯಲ್ಲಿ ಅವರ ಜೀವನ ಮತ್ತು ಸಾಹಿತ್ಯ ನಮ್ಮ ಬಾಳಿಗೆ ಮಾರ್ಗ ದರ್ಶನದಂತಿದೆ. ಅವರ ಆದರ್ಶಗಳನ್ನು ಪಾಲಿಸುವ ಪ್ರಯತ್ನ ಮಾಡಬೇಕು ಎಂದು ಮುಖ್ಯ ಗುರುಗಳಾದ ಜೆ ಟಿ ಚವಡಿಹಾಳ ಹೇಳಿದರು. ತಾಲೂಕಿನ ಅರ್ಜುಣಗಿ ಕೆಡಿ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ಕನಕದಾಸರ ಜಯಂತಿ ಆಚರಣೆಗೆ ಚಾಲನೆ ನೀಡಿ ಮಾತನಾಡಿದರು. ಕನಕದಾಸರು ಸಮಾಜ ಸುಧಾರಕರಾಗಿದ್ದು, ಅವರ ಜೀವನದ ಪ್ರತಿ ಘಟ್ಟವೂ ಒಂದೊಂದು ತತ್ವಗಳನ್ನು ಆದರ್ಶಿಸುವ ಅಧ್ಯಾಯವಾಗಿದೆ. ಅವರು ಹಾಕಿ ಕೊಟ್ಟ ಮಾರ್ಗ ಎಲ್ಲರ ಬದುಕಿಗೆ ಬುನಾದಿ ಯಾಗಬೇಕು ಎಂದು ಹೇಳಿದರು.ಶಿಕ್ಷಕ ಜಿ ಆರ್ ರಜಪೂತ ಮಾತನಾಡಿ, ಕನಕದಾಸರು ಒಬ್ಬ ಶ್ರೇಷ್ಠ ಸಂತ ಕವಿ. ಅವರ ಸದಾ ಚಾರಗಳನ್ನು ಜೀವನದಲ್ಲಿ ರೂಢಿಸಿ ಕೊಂಡು ಭಕ್ತಿವಂತರಾಗಿ ಬದುಕನ್ನು ಸಾಗಿಸಿದರೆ ಸಮಾಜ ಸಮೃದ್ಧವಾಗಲು ಸಾಧ್ಯವಾಗುತ್ತದೆ ಎಂದು ಹೇಳಿದರು.ಶಾಲಾ ಹಿರಿಯ ಶಿಕ್ಷಕ ಎಸ್ ನಾಯ್ಕೋಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನಕದಾಸರು ಸಂತಕವಿ. ಹರಿದಾಸ ಪರಂಪರೆಯ ಮತ್ತು ದಾಸ ಸಾಹಿತ್ಯದ ಅಶ್ವಿನಿ ದೇವತೆಗಳಲ್ಲಿ ಒಬ್ಬರಾಗಿದ್ದಾರೆ. ಜಾತಿ ಪದ್ಧತಿ ಹೋಗಲಾಡಿಸಲು ಅವಿರತವಾಗಿ ಶ್ರಮಿಸಿದ್ದಾರೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಶಿಕ್ಷಕ ಬಿ ಎಸ್ ಹೊಸುರ,ಅಡುಗೆ ಸಿಬ್ಬಂದಿ ಹಾಗೂ ಮಕ್ಕಳು ಭಾಗವಹಿಸಿದ್ದರು.

ತಾಲೂಕ ವರದಿಗಾರರು: ಶಿವಪ್ಪ.ಬಿ.ಹರಿಜನ.ಇಂಡಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button