ಕನಕ ಜಯಂತಿ ಅಂಗವಾಗಿ ಸಂತ ಶರಣರ ವೇಷ ಧರಿಸಿ ಪ್ರದರ್ಶನ ನೀಡಿದ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದ ಮಕ್ಕಳು.

ಹಗರಿಬೊಮ್ಮನಹಳ್ಳಿ ನವೆಂಬರ್.30

ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಪಟ್ಟಣದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಸಿ.ಬಿ.ಎಸ್.ಇ ಯಲ್ಲಿ ಗುರುವಾರ ರಂದು ಸಂತ ಶರಣರು ಕನಕದಾಸ ಜಯಂತಿಯನ್ನು ಆಚರಿಸಲಾಯಿತು. ಈ ಸಂರ್ಭದಲ್ಲಿ 8.ನೇ ತರಗತಿ ವಿದ್ಯಾರ್ಥಿನಿಯಾದ ಕುಮಾರಿ ಕೊಟ್ರಮ್ಮ ಇವರು ಕನಕದಾಸರ ಕುರಿತು ” ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು, ಮತ್ತು ಪುರಂದರ ದಾಸರೊಂದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿತ್ತವರು. ಕನಕದಾಸರು ಮತ್ತು ಪುರಂದರ ದಾಸರನ್ನು ಕರ್ನಾಟಕ ಕೀರ್ತನ ಸಾಹಿತ್ಯದ ಅಶ್ವಿನಿ ದೇವತೆಗಳೆಂದು ಬಣ್ಣಿಸಲಾಗಿದೆ.

ಕನಕದಾಸರು ದಂಡನಾಯಕರಾಗಿದ್ದು ಯುದ್ಧವೊಂದರಲ್ಲಿ ಸೋತ ಅವರಿಗೆ ಉಪರತಿ/ವೈರಾಗ್ಯ ಉಂಟಾಗಿ ಹರಿ ಭಕ್ತರಾದರು” ಎಂದು ಹೇಳಿದಳು. 6.ಮತ್ತು 7.ನೇ ತರಗತಿಯ ವಿದ್ಯಾರ್ಥಿಗಳು ದಾಸ ಸಾಹಿತ್ಯದ ಕೀರ್ತನೆಗಳನ್ನು ಹೇಳಿದರು. 6.ನೇ ತರಗತಿಯ ವಿದ್ಯಾರ್ಥಿಯಾದ ಕಾರ್ನಿಕ್ ಕನಕದಾಸರ ವೇಷಧಾರಿ ಆಗಿದ್ದನು. ಮನ್ವಿತ್ ಪುರಂದರ ದಾಸರ ವೇಷಧಾರಿ ಯಾಗಿದ್ದನು. ವಿದ್ಯಾರ್ಥಿನಿ ಅಂಕಿತ ಕನಕದಾಸರ ತಾಯಿಯ ವೇಷ ಧರಿಸಿದ್ದಳು, ಬೃಂದಾ ಪುರಂದರ ದಾಸರ ತಾಯಿಯ ವೇಷ ಧರಿಸಿದ್ದಳು, ದೀಕ್ಷಾ ಪುರಂದರ ದಾಸರ ಹೆಂಡತಿಯ ವೇಷ ಧರಿಸಿದ್ದಳು. ಹೀಗೆ ಆರನೇ ತರಗತಿಯ ಮಕ್ಕಳಿಂದ ದಾಸ ಪರಂಪರೆಯ ಛದ್ಮವೇಷ ಪ್ರದರ್ಶನ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಶಾಲೆಯ ಉಪ ಪ್ರಧಾನಾ ಚಾರ್ಯರಾದ ಶ್ರೀಸುವೀರರವರು, ಗುರು ವೃಂದದವರು, ಪಾಲಕರು ಹಾಗೂ ಮಕ್ಕಳು ಉಪಸ್ಥಿತರಿದ್ದರು.

ಜಿಲ್ಲಾ ವರದಿಗಾರರು:ರಾಘವೇಂದ್ರ.ಬಿ.ಸಾಲುಮನೆ. ಕೂಡ್ಲಿಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button