ಮೊಳಕಾಲ್ಮುರು ಪಟ್ಟಣದಲ್ಲಿ ಕನಕದಾಸರ ಜಯಂತಿಯನ್ನು ಎನ್.ವೈ. ಗೋಪಾಲಕೃಷ್ಣ ಶಾಸಕರು ಭಾವ ಚಿತ್ರಕ್ಕೆ ಪುಷ್ಪ ಸಮರ್ಪಣೆ ಮಾಡಿದರು.
ಮೊಳಕಾಲ್ಮುರು ನವೆಂಬರ್.30

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ತಾಲೂಕ ಪಂಚಾಯತಿ ಆವರಣದಲ್ಲಿ ಕನಕದಾಸರ ಜಯಂತಿಯನ್ನು ಇಂದು ಬೆಳ್ಳಿ ರಥದ ಮೇಲೆ ಕನಕದಾಸರ ಭಾವ ಚಿತ್ರವನ್ನು ಇಟ್ಟು ಭಾವ ಚಿತ್ರಕ್ಕೆ ತಹಸೀಲ್ದಾರರಾದ ರೂಪ ಇವರು ಪುಷ್ಪ ಸಮರ್ಪಣೆ ಮಾಡಿ ಮೆರವಣಿಗೆ ಮುಖಾಂತರ ಡೊಳ್ಳು ತಮಟೆ ಕುಣಿತದಿಂದ ಅದ್ದೂರಿಯಾಗಿ ಮೆರವಣಿಗೆ ಮುಖಾಂತರ ಬೀದಿಯಲ್ಲಿ ಸಾಗಿ ಮತ್ತು ತಾಲೂಕು ಪಂಚಾಯಿತಿ ಆವರಣದಲ್ಲಿ ಸಭೆಯನ್ನು ಉದ್ದೇಶಿಸಿ ಕನಕ ಜಯಂತಿ ಭಾವ ಚಿತ್ರಕ್ಕೆ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಮಾನ್ಯ ಎನ್ ವೈ ಗೋಪಾಲಕೃಷ್ಣ ಶಾಸಕರು ಕನಕದಾಸರ ಭಾವ ಚಿತ್ರಕ್ಕೆ ಪುಷ್ಪ ಸಮರ್ಪಣೆ ಮಾಡಿದರು ಮತ್ತು ಈ ಸಂದರ್ಭದಲ್ಲಿ ಮೊಳಕಾಲ್ಮೂರು ತಾಲೂಕಿನಲ್ಲಿ ಇರುವ ಕುರುಬ ಸಮುದಾಯದವರು ಸಭೆಯಲ್ಲಿ ಭಾಗವಹಿಸಿ ಈ ಸಮುದಾಯದ ವಿದ್ಯಾರ್ಥಿಗಳು ಶಾಲೆಗಳಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಶಾಲು ಹಾಕಿ ಸನ್ಮಾನ ಮಾಡಲಾಯಿತು ಕುರುಬ ಸಮುದಾಯದ ತಾಲೂಕಾ ಅಧ್ಯಕ್ಷರಾದ ಜಗದೀಶ್ ವೇದಿಕೆಯಲ್ಲಿ ಮಾತನಾಡಿದರು ನಮ್ಮದೊಂದು ಟಗರು ಮುಂದೆ ಹೋಗಿದೆ ಹಿಂದೆ ಕುರಿಗಳಲ್ಲ ಸಾಲಾಗಿ ಹೋಗುತ್ತವೆ ಎಂದು ಸಭೆಯಲ್ಲಿ ಮಾತನಾಡಿದರು ಮತ್ತು ನಮ್ಮ ಸಮುದಾಯದ ಕನಕದಾಸರ ಪುತ್ತಳಿಯಾಗಲಿ ಅಥವಾ ಭವನವಾಗಲಿ ಸುಮಾರು 10 ವರ್ಷದಿಂದ ನಾನು ಅರ್ಜಿ ಕೊಟ್ಟರು ಯಾರೂ ತಲೆ ಕೆಡಿಸಿ ಕೊಳ್ಳದೆ ನಾನು ಕೊಟ್ಟಂತಹ ಅರ್ಜಿ ರಾಜಕೀಯ ಮುಖಂಡರು ಮತ್ತು ಅಧಿಕಾರಿಗಳು ಮೂಲೆಯಲ್ಲಿ ಒಗಿಯುತ್ತಿದ್ದರು ಈಗ ನಮಗೆ ಬೇಕಾದಂತ ಶಾಸಕರು ಮತ್ತು ನಮ್ಮ ಸಮುದಾಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿ ಯೋಜನೆಗಳು ಸಹ ರೂಪಿಸುವಂತಹ ಶಾಸಕರು ಈ ಮೊಳಕಾಲ್ಮುರು ಕ್ಷೇತ್ರಕ್ಕೆ ಧರೆಗಿಳಿದು ಬಂದ ಕೃಷ್ಣ ಪರಮಾತ್ಮನ ಹಾಗೆ ಬಂದಿದ್ದಾರೆ ಮೊಳಕಾಲ್ಮೂರು ಪಟ್ಟಣದಲ್ಲಿ ಎಲ್ಲಾದರೂ ಗೌರ್ಮೆಂಟ್ ಜಾಗದಲ್ಲಿ ಮಾನ್ಯ ಅಭಿವೃದ್ಧಿ ಹರಿಕಾರರಾದ ಎನ್ ವೈ ಗೋಪಾಲಕೃಷ್ಣ ಶಾಸಕರು ಸಹಾಯ ಮಾಡಿ ಕೊಡಬೇಕೆಂದು ಸಭೆಯಲ್ಲಿ ಜಗದೀಶ್ ಮಾತನಾಡಿದರು ಅದೇ ರೀತಿಯಾಗಿ ಮಾನ್ಯ ಎನ್ ವೈ ಗೋಪಾಲಕೃಷ್ಣ ಶಾಸಕರು ತಿರುಗಿ ಬರುವ ವರ್ಷಕ್ಕೆ ಇಲ್ಲಿ ಕನಕದಾಸರ ಪುತ್ತಳಿ ಮತ್ತು ಭವನ ರೂಪಿಸುತ್ತೇನೆ ಎಂದು ಮಾನ್ಯ ಎನ್ ವೈ ಗೋಪಾಲಕೃಷ್ಣ ಶಾಸಕರು ನೇರವಾಗಿ ಮಾತನಾಡಿದರು ಮತ್ತು ನನಗೆ ಬರುವ ಅನುದಾನದಲ್ಲಿ ಸಹ 10 ಲಕ್ಷ ನಿಮ್ಮ ಕನಕದಾಸರ ಭವನಕ್ಕೆ ಆದೇಶ ಮಾಡಿ ಕೊಡುತ್ತೇನೆ ಎಂದು ಹೇಳಿದರು ಅದೇ ರೀತಿಯಾಗಿ ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕು ಹಿಂದುಳಿದ ತಾಲೂಕಾ ಇಲ್ಲಿ ಬರಿ ಮಳೆ ಆಶ್ರಿತ ಬೆಳೆಯುವ ರೈತರು ಮತ್ತು ಕೂಲಿ ಕೆಲಸ ಮಾಡುವ ನಾಗರಿಕರು ಹೆಚ್ಚಾಗಿ ಕಂಡು ಬರುತ್ತದೆ ಆದಕಾರಣ ಆಡಳಿತ್ಮಾಕವಾಗಿ ನಮ್ಮ ತಾಲೂಕಿಗೆ ವಾಲ್ಮೀಕಿ ಜನಾಂಗ ಬಹಳ ಹೆಚ್ಚು ಜನರಿದ್ದು ಎಸ್ ಟಿ ಮೀಸಲಾತಿಗೆ ಒಳಪಟ್ಟಿರುವ ಅನುದಾನವನ್ನು ಬಿಡುಗಡೆ ಮಾಡಿಸಿ ಈ ಮೊಳಕಾಲ್ಮೂರು ತಾಲೂಕಿಗೆ ಎಲ್ಲಾ ಸಾರ್ವಜನಿಕರಿಗೆ ಬೇಕಾಗುವ ಯೋಜನೆಗಳನ್ನು ಮತ್ತು ಅಭಿವೃದ್ಧಿಗಳನ್ನು ಮಾಡಿಸುತ್ತೇನೆ ಎಂದು ಎಲ್ಲಾ ನಾಗರಿಕರು ಕೈಜೋಡಿಸಿ ಇಂಥ ಯೋಜನೆಗಳು ಅಭಿವೃದ್ಧಿಗಳು ಮಾಡಲಿಕ್ಕೆ ಉಮ್ಮಸ್ಸು ಕೊಟ್ಟರೆ ನಿಮ್ಮ ಮುಂದೆ ನಾನು ವಿಧಾನ ಸೌಧಕ್ಕೆ ಹೋಗಿ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯರ ಹತ್ತಿರ ನನ್ನ ಕ್ಷೇತ್ರ ಬಹಳ ಹಿಂದುಳಿದ ಕ್ಷೇತ್ರವಾಗಿರುವುದರಿಂದ ಹಿಂದೆ ಯಾರೂ ಈ ಕ್ಷೇತ್ರಕ್ಕೆ ಸರಿಯಾದ ಅನುದಾನ ತಂದಿಲ್ಲ ರೈತರಿಗೆ ಬೇಕಾಗುವ ಯೋಜನೆಗಳು ರೂಪಿಸಿಲ್ಲ ಮತ್ತು ಇಲ್ಲಿನ ಮೂಲಭೂತ ಸೌಕರ್ಯಗಳು ಸಹ ಸಾರ್ವಜನಿಕರಿಗೆ ದೊರಕಿರುವುದಿಲ್ಲ ಹಿಂದೆ ನಾನು ಶಾಸಕನಾಗಿದ್ದಾಗ ಮಾತ್ರ ಓಡಾಡುವಂಥ ರಸ್ತೆಗಳು ಶಾಲೆ ಬಿಲ್ಡಿಂಗ್ ಗಳು ಆರೋಗ್ಯಕ್ಕೆ ಬೇಕಾಗುವ ಆಸ್ಪತ್ರೆಗಳು ಮತ್ತು ಹೋಬಳಿಗಳಲ್ಲಿ ಸಹ ಮಿನಿ ಆಸ್ಪತ್ರೆಗಳು ಮೊಳಕಾಲ್ಮೂರು ಪಟ್ಟಣಕ್ಕೆ ರಂಗಯ್ಯನ ದುರ್ಗಾ ಜಲಾಶಯದಿಂದ ಪೈಪ್ ಲೈನ್ ಮುಖಾಂತರ ಫಿಲ್ಟರ್ ಮಾಡಿ ಕುಡಿಯಲಿಕ್ಕೆ ಮೊಳಕಾಲ್ಮುರು ಪಟ್ಟಣಕ್ಕೆ ನೀರು ಹರಿಸಿದ್ದೇನೆ ಮತ್ತು ಬಗರು ಹುಕುಂ ಅರ್ಜಿಗಳು ಜಮೀನು ಇಲ್ಲದಂತ ಬಡ ವರ್ಗದ ಜನಗಳಿಗೆ ಸಹ ಮಂಜೂರು ಮಾಡಿಸಿದ್ದೇನೆ ಮತ್ತು ಗಂಗಾ ಕಲ್ಯಾಣಗಳು ಸಹ ಬಡ ರೈತರಿಗೆ ಮಂಜೂರು ಮಾಡಿಸಿದ್ದೇನೆ.

ಈ ತಾಲೂಕಿನಲ್ಲಿ ಮಳೆ ಆಶ್ರಿತ ಬೆಳೆಯುವುದರಿಂದ ಮಳೆ ಬಾರದೆ ರೈತ ಸಂಕಷ್ಟದಲ್ಲಿ ಇರುತ್ತಾನೆಂದು ಬೆಳೆ ಪರಿಹಾರಗಳು ಇನ್ಸೂರೆನ್ಸ್ ಗಳು ಸಹ ಸರ್ಕಾರದಿಂದ ಮಂಜೂರು ಮಾಡಿಸಿದ್ದೇನೆ ಆಶ್ರಯ ಮನೆಗಳು ಮತ್ತು ಅಂಬೇಡ್ಕರ್ ಮನೆಗಳು ರಾಜೀವ್ ಗಾಂಧಿ ವಸತಿ ಮನೆಗಳು ಸಹ ಮಂಜೂರು ಮಾಡಿಸಿದ್ದೇನೆ ಮತ್ತು ಮೊಳಕಾಲ್ಮೂರು ಪಟ್ಟಣದಲ್ಲಿ ಜೂನಿಯರ್ ಕಾಲೇಜ್ ಎಂಬ ಹೆಸರು ವಾಸಿಯಾಗಿದ್ದ ಕಾಲೇಜ್ ನಾನು ಶಾಸಕನ ಆಗಿರುವ ತನಕ ಅಲ್ಲಿ ಓದುವಂತ ವಿದ್ಯಾರ್ಥಿಗಳು ಇಡೀ ಚಿತ್ರದುರ್ಗ ಜಿಲ್ಲೆಗೆ ನಂಬರ್ ಒನ್ ಅಂಕಗಳು ಪಡಿತಿದ್ದರು ಆಗ ಶಿಕ್ಷಕರು ಆಗಿರುತ್ತಿದ್ದರು ಗುರುವಿನ ಪಾಠ ಕೇಳಿ ವಿದ್ಯಾರ್ಥಿಗಳು ಸಹ ತಂದೆ ತಾಯಿಗೆ ಹೆಸರು ತರುತ್ತಿದ್ದರು ಅಂತಹ ಶಿಕ್ಷಣ ಹಿಂದೆ ನಾನು ಶಾಸಕನಾಗಿದ್ದಾಗ ಕಾಣುತ್ತಿದ್ದೆ ಆದರೆ ಈಗ 10 ವರ್ಷದಿಂದ ಶಿಕ್ಷಣವೆಂಬುದು ಗಾಳಿಗೆ ತೂರಿದಂತಾಗಿದೆ ಸರಿಯಾದ ಶಿಕ್ಷಣ ಕಲಿಸಲು ಶಿಕ್ಷಕ ಇಲ್ಲಾ ವಿದ್ಯಾರ್ಥಿಗಳು ಪಾಠ ಕಲಿಯಲು ಹೇಗೆ ಸಾಧ್ಯವಾಗುತ್ತದೆ ಬುದ್ಧಿ ಕಲಸುವ ತಂದೆ ತಾಯಿಗಳು ಸಹ ದಡ್ಡರಂತೆ ಇರುತ್ತಾರೆ ಇಲ್ಲಿನ ಬೋಧಕರು ಸಹ ಇಲ್ಲದಂತಾಗಿತ್ತು ಆದರೆ ಈಗ ನಾನು ಶಾಸಕನಾಗಿ ಬಂದಾಗ ನನ್ನ ಸ್ವಂತ ಕ್ಷೇತ್ರ ನನ್ನ ಸ್ವಂತ ಕುಟುಂಬ ಇದ್ದಾಗೆ ಇಲ್ಲಿ ಮೊದಲು ಶಿಕ್ಷಣ ಏನು ಎಂಬುದು ಮರೆತು ಹೋಗಿದೆ ನಾವು ಏನಾದರೂ ಮಾಡಿದರು ಶಿಕ್ಷಣದಿಂದಲೇ ಇಡೀ ಮೊಳಕಾಲ್ಮೂರು ತಾಲೂಕಿನ ಪ್ರತಿಯೊಬ್ಬ ಮನೆಯಲ್ಲಿ ಒಬ್ಬ ವಿದ್ಯಾರ್ಥಿ ಓದಿ ಬುದ್ದಿವಂತನಾದರೆ ಮೊಳಕಾಲ್ಮೂರು ತಾಲೂಕಿನ ಪ್ರತಿಯೊಬ್ಬ ಮನೆ ಕುಟುಂಬಗಳು ಸಹ ಬುದ್ಧಿವಂತ ರಾಗಿರುತ್ತಾರೆ ಎಂಬುವುದು ನನ್ನ ಒಂದು ಬಯಕೆ ಶಿಕ್ಷಣಕ್ಕೆ ಏನು ಬೇಕು ಅದನ್ನು ನಾನು ಸರ್ಕಾರದಿಂದ ಮಂಜೂರು ಮಾಡಿಸಿ ಕೊಡುತ್ತೇನೆ ಯಾವುದೇ ಒಬ್ಬ ಬಡ ವಿದ್ಯಾರ್ಥಿ ಶಿಕ್ಷಣಕ್ಕೆ ವಂಚಿತ ರಾಗಬಾರದು ಎಂದು ಮಾನ್ಯ ಶಾಸಕರು ನೇರವಾಗಿ ಸಭೆಯಲ್ಲಿ ಮಾತನಾಡಿದರು ಬೇರೆ ಕ್ಷೇತ್ರಗಳಲ್ಲೆಲ್ಲ ನಾನು ರೈತರಿಗೆ ಬೇಕಾಗುವ ಯೋಜನೆಗಳು ಮತ್ತು ಅಭಿವೃದ್ಧಿಗಳು ಶಿಕ್ಷಣಕ್ಕೆ ಬೇಕಾಗುವ ಶಾಲೆ ಬಿಲ್ಡಿಂಗಗಳು ಗ್ರಾಮಗಳ ಮೂಲಭೂತ ಸೌಕರ್ಯಗಳು ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಳು ಮತ್ತು ತಾಲೂಕಿನ ಎಲ್ಲಾ ಗ್ರಾಮಗಳಿಗೆ ತುಂಗಭದ್ರ ನದಿಯಿಂದ ಕುಡಿಯುವ ನೀರಿನ ಯೋಜನೆ ಸಹ ನಾನು ಯೋಜನೆಗಳನ್ನು ರೂಪಿಸಿದ್ದೇನೆ ನನಗೆ ಸಿಕ್ಕಂತ ಕಾಲಾವಕಾಶ ಕೇವಲ 18 ತಿಂಗಳಗಳಲ್ಲಿ 3000 ಕೋಟಿ ಹೆಚ್ಚು ಅನುದಾನವನ್ನು ತಂದು ಕೂಡ್ಲಿಗಿ ತಾಲೂಕ ಕೊಳಕನ್ನು ತೊಳೆದು ಹಸನು ಮಾಡಿ ಸೌಂದರ್ಯದ ಹಸಿರು ವನದಂತೆ ರೂಪಿಸಿದ್ದೇನೆ ಮತ್ತು ಬಳ್ಳಾರಿ ಗ್ರಾಮೀಣದಲ್ಲಿ ಸಹ ಒಳ್ಳೆ ಒಳ್ಳೆ ಯೋಜನೆಗಳು ಅಭಿವೃದ್ಧಿಗಳು ಓಡಾಡುವಂತ ರಸ್ತೆಗಳಾಗಲಿ ಕುಡಿಯುವ ನೀರಿನ ವ್ಯವಸ್ಥೆಯಾಗಲಿ ಶಾಲೆ ಬಿಲ್ಡಿಂಗ್ ಗಳಾಗಲಿ ಚೆಕ್ ಡ್ಯಾಮ್ ಗಳಾಗಲಿ ರೈತರಿಗೆ ಪಂಪ್ಸೆಟ್ಟುಗಳಿಗೆ ಅಂತರ್ರ್ಜಲ ಹೆಚ್ಚಾಗಿ ಮತ್ತು ಪ್ರಾಣಿ ಪಕ್ಷಿ ದನ ಕರು ನೀರು ಕುಡಿದು ನೀರಿನ ದಾಹ ನೀಗಿಸಲು ಇಂತಹ ಚೆಕ್ ಡ್ಯಾಮ್ ರೂಪಿಸಿದ್ದೇನೆ ಏಕೆಂದರೆ ನನ್ನ ಜೀವನವೇ ಒಂದು ದಾರಿ ದೀಪವಾಗಬೇಕು ಕೊಳಕನ್ನು ತೊಳೆದು ಹಸನ ಮಾಡುವುದೇ ನನ್ನ ಉದ್ದೇಶ ನಾನು ಯಾವತ್ತಿಗೂ ಬಡ ಜನರ ಹಿತಕ್ಕಾಗಿ ರೂಪಿಸುತ್ತೇನೆ ಹೊರತು ನಾನು ಯಾವ ಪ್ರಭಾವಿಗಳಿಗೂ ಶ್ರೀಮಂತರಿಗೂ ದಂದೆ ಕೋರರಿಗೂ ಕಳ್ಳ ಕಾಕರಿಗೂ ತಲೆ ದೂರಿದವನಲ್ಲ ನನ್ನ ಜನ ಒಳ್ಳೆ ಬುದ್ಧಿವಂತರು ನ್ಯಾಯವಂತರು ಅಮಾಯಕರು ಜ್ಞಾನಿಗಳು ನನಗೆ ಸಲ್ಲತಕ್ಕಂಥವರು ಇಂಥವರಿಗೆ ಮಾತ್ರ ನಾನು ಯಾವತ್ತಿಗೂ ಚಿರ ಋಣಿಯಾಗಿ ಬದುಕುತ್ತೇನೆ ಎನ್ ವೈ ಗೋಪಾಲಕೃಷ್ಣ ಶಾಸಕರ ನಿರ್ಧಾರವಾಗಿರುತ್ತದೆ ಎಂದು ವರದಿಯಾಗಿದೆ.
ತಾಲೂಕ ವರದಿಗಾರರು:ತಿಪ್ಪೇಸ್ವಾಮಿ.ಹೊಂಬಾಳೆ. ಮೊಳಕಾಲ್ಮುರು