ನಾಯಕನಹಟ್ಟಿ & ತಳಕು ಹೋಬಳಿಯ ಕಾಂಗ್ರೆಸ್ ಪಕ್ಷದ ಮತದಾರರು ಎನ್.ವೈ.ಗೋಪಾಲಕೃಷ್ಣ ಶಾಸಕರ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.
ನಾಯಕನಹಟ್ಟಿ ಡಿಸೆಂಬರ್.3

ಮೊಳಕಾಲ್ಮೂರು ಕ್ಷೇತ್ರದ ನಾಯಕನಹಟ್ಟಿ ಪಟ್ಟಣದಲ್ಲಿ ತಳಕು ಹಾಗೂ ನಾಯಕನಹಟ್ಟಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಹಾಗೂ ಅಭಿಮಾನಿಗಳ ವತಿಯಿಂದ ಆಯೋಜಿಸಲಾಗಿದ್ದ ಅಭಿನಂದನೆ ಕಾರ್ಯಕ್ರಮದಲ್ಲಿ ಜನಪ್ರಿಯ ಶಾಸಕರಾದ ಸನ್ಮಾನ ಶ್ರೀ ಎನ್ ವೈ ಗೋಪಾಲಕೃಷ್ಣರವರು ಭಾಗವಹಿಸಿ ಸನ್ಮಾನ ಸ್ವೀಕರಿಸಿದರು. ಮೊಳಕಾಲ್ಮೂರು ಕ್ಷೇತ್ರದ ವ್ಯಾಪ್ತಿಗೆ ಬರತಕ್ಕಂತಹ ತಳಕು ಮತ್ತು ನಾಯಕನಹಟ್ಟಿ ಹೋಬಳಿಯ ಕಾಂಗ್ರೆಸ್ ಕಾರ್ಯಕರ್ತರು ಎನ್ ವೈ ಗೋಪಾಲಕೃಷ್ಣ ಶಾಸಕರ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ ಏಕೆಂದರೆ ನಮ್ಮ ಗ್ರಾಮಗಳಿಗೆ ಹಿಂದೆ ಇರುವಂತ ಶಾಸಕರಾಗಲಿ ಸಚಿವರಾಗಲಿ ಕೆಲಸಗಳು ಮಾಡಿಸಿಲ್ಲ ಮೂಲಭೂತ ಸೌಕರ್ಯಗಳು ಓಡಾಡುವ ರಸ್ತೆಗಳಾಗಲಿ ಅಂತರ್ಜಲ ರೈತರಿಗೆ ಅನುಕೂಲವಾಗುವಂತೆ ಮಳೆ ಬಂದು ಹರಿದು ಹೋಗುವ ನೀರನ್ನು ತಡೆದು ನೀರಿನ ಸ್ಟೋರೇಜು ಮಾಡಿದ್ದರೆ ರೈತರಿಗೂ ಮತ್ತು ಕುರಿಗಳು ಪ್ರಾಣಿ ಪಕ್ಷಿಗಳಿಗೂ ಅನುಕೂಲವಾಗುವಂತ್ತೆ. ಆದರೆ ಇಂಥ ಯೋಜನೆಗಳು ಹಿಂದೆ ಇರುವಂತ ಶಾಸಕರಾಗಲಿ ಸಚಿವರಾಗಲಿ ಯಾರು ತಲೆಕೆಡಿಸಿ ಕೊಳ್ಳದೆ ಜನ ಸಾಮಾನ್ಯರ ಮೇಲೆ ಏನು ಕಾಳಜಿ ತೋರದಂತಾಗಿತ್ತು. ಈಗ ನಮಗೆ ನಮ್ಮ ಕ್ಷೇತ್ರದ ಕ್ಷೇತ್ರದವರಾದ ಎನ್ ವೈ ಗೋಪಾಲಕೃಷ್ಣ ಶಾಸಕರು ಎಲ್ಲಾ ಸಾರ್ವಜನಿಕರಿಗೆ ಬೇಕಾಗುವ ಯೋಜನೆಗಳು ಅಭಿವೃದ್ದಿಗಳು ರೂಪಿಸುತ್ತಾರೆ.ಈ ಸಂದರ್ಭದಲ್ಲಿ ಚಳ್ಳಕೆರೆ ಶಾಸಕರಾದ ಟಿ ರಘುಮೂರ್ತಿ ಮತ್ತು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು. ಹಾಗೂ ಕಾರ್ಯಕರ್ತರು. ಅಭಿಮಾನಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಎಂದು ನಮಗೆ ಬಹಳ ಸಂತೋಷವೇನಿಸುತಿದೆ ಎಂದು ಆ ನಾಯಕನಹಟ್ಟಿ ಹೋಬಳಿ ಮತ್ತು ತಳಕು ಹೋಬಳಿಯ ಜನ ಮತದಾರರು ಶಾಸಕರ ಮೇಲೆ ಬಾಳ ಗೌರವ ಇಟ್ಟಿದ್ದಾರೆ ಎಂದು ವರದಿಯಾಗಿದೆ.
ತಾಲೂಕ ವರದಿಗಾರರು:ತಿಪ್ಪೇಸ್ವಾಮಿ.ಹೊಂಬಾಳೆ. ಮೊಳಕಾಲ್ಮುರು