ತಾಲೂಕಾ ಪಂಚಾಯಿತಿಯಲ್ಲಿ ಮೇಲಾಧಿಕಾರಿಗಳ ದೊಂಬರಾಟ..!
ಕೊಟ್ಟೂರು ಡಿಸೆಂಬರ್.4
![](https://i0.wp.com/sknewskannada.in/wp-content/uploads/2023/12/IMG-20231204-WA0021.jpg?resize=364%2C467&ssl=1)
ನಾಟಕೀಯವಾಗಿ ವರ್ಗಾವಣೆ ಆದೇಶ ಹೊರಡಿಸಿದ್ದಾರೆ.ಆದರೆ ಇದು ನೆಪಕ್ಕೆ ಮಾತ್ರ ಎನ್ನುವುದು ಸತ್ಯ ಹೊರ ಬಿದ್ದಿದೆ ವರ್ಗಾವಣೆಯು ಇಲ್ಲಿಯವರೆಗೂ ತಾಲೂಕು ಪಂಚಾಯಿತಿ ಇ.ಓ ಸಾಹೇಬರು ರಿಲೀವ್ ಮಾಡದೆ ಇರುವುದು ರೂಪ ಅವರು ಅಧಿಕಾರಿಗಳನ್ನು ತಮ್ಮ ಹಿಡಿತದಲ್ಲಿ ಇಟ್ಟು ಕೊಂಡಿರುವುದು ಮೇಲ್ನೋಟಕ್ಕೆ ಕಾಣುತ್ತದೆ.! ಇ.ಓ ಸಾಹೇಬ್ರು ತಾಲೂಕಾ ಪಂಚಾಯಿತಿಗೆ ಬಾರದೆ ಕುಂಟು ನೆಪ ಹೇಳಿ ಸಂಘಟನೆಗಳಿಗೆ ಹಾಗೂ ವರದಿಗಾರರಿಗೆ ದಾರಿ ತಪ್ಪಿಸುವ ಕಾರ್ಯ ನಡೆಯುತ್ತಿದೆ. ಎಂದು ಸಾರ್ವಜನಿಕರಲ್ಲಿ ಚರ್ಚೆಗೆ ಗ್ರಾಸವಾಗಿದೆ.ಜಿಲ್ಲಾ ಪಂಚಾಯಿತಿ ಸಿಇಒ ಮತ್ತು ಕಾರ್ಯದರ್ಶಿ ಅವರು ವರ್ಗಾವಣೆಯನ್ನು ನವಂಬರ್ 22.ನೇ ತಾರೀಕಿಗೆ ಆದೇಶ ಹೊರಡಿಸಿದ್ದು.
![](https://i0.wp.com/sknewskannada.in/wp-content/uploads/2023/12/IMG-20231204-WA0018.jpg?resize=708%2C404&ssl=1)
ತಾಲೂಕಾ ಪಂಚಾಯತಿಯ ಇ.ಓ ಸಾಹೇಬರು ರಿಲೀವ್ ಮಾಡಿ ಅಂತಾ ಹೇಳಿದ್ದೀನಿ ಆದರು ಇಂತಹ ಭ್ರಷ್ಟಾಚಾರ ಅಧಿಕಾರಿಗಳ ಪರ ನಾಟಕ ವಾಡುತ್ತಿರುವುದು ಮತ್ತು ಎಲ್ಲಾ ರೀತಿಯಾಗಿ ಸಹಕಾರ ಮೇಲಧಿಕಾರಿಗಳು ನೀಡುತ್ತಿದ್ದಾರೆ.! ಎಂದು ಆರೋಪ ಮಾಡಿತ್ತಿದ್ದಾರೆ.ರಾಜಕಾರಣಿಗಳ ಒತ್ತಡದಿಂದ ಅಧಿಕಾರಿಗಳಿಗೆ ಪ್ರಾಣ ಸಂಕಟ ಆಗಿದೆ ಎಂದು ಇವರುಗಳೆಲ್ಲರೂ ಸೇರಿ ಸಂಘಟನೆಗಾರರಿಗೆ ಹಾಗೂ ಸಾರ್ವಜನಿಕರಿಗೆ ಕಣ್ಣಿಗೆ ಮಣ್ಣು ಹಾಕುತ್ತಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ.ಎಂದು ಹೇಳಿದರು.ವರದಿಗಳಲ್ಲಿ ರೂಪ ಅವರು ಮೇಲಧಿಕಾರಿಗಳನ್ನು ಓವರ್ ಟೆಕ್ ಮಾಡುತ್ತಿರುವುದು.? ಹಾಗೂ ಅಧಿಕಾರಿಗಳನ್ನ ತಮ್ಮ ಹಿಡಿತದಲ್ಲಿಟ್ಟು ಕೊಂಡಿರುವುದು ಈಗ ಜನರಿಗೆ ನಿಜ ಎಂಬುದು ಸತ್ಯ ಹೊರ ಬಿದ್ದಿದೆ.
![](https://i0.wp.com/sknewskannada.in/wp-content/uploads/2023/12/IMG-20231204-WA0019.jpg?resize=708%2C909&ssl=1)
ಅಧಿಕಾರಿಗಳು ನಾಟಕ ಮಾಡುವುದು ಮತ್ತು ರಾಜಕಾರಣಿಗಳು ಹಿಂಭಾಗಲಿನಿಂದ ಸಹಕಾರ ನೀಡುವುದು.? ಇವು ಎಲ್ಲವುಗಳನ್ನು ಯಾಕೆ ಈಗಿನ ಜಿಲ್ಲೆಯ ಜಿಲ್ಲಾಧಿಕಾರಿಗಳು ಗಮನಿಸುತ್ತಿಲ್ಲ.ಈಗಿನ ಜಿಲ್ಲೆಯ ಜಿಲ್ಲಾಧಿಕಾರಿಗಳು ಕ್ರಾಂತಿಕಾರಿಯ ಮಾಡುತ್ತಿರುವುದು ಜಿಲ್ಲೆಯ ಜನರು ಅಭಿಪ್ರಾಯಪಟ್ಟಿದರು ಇಂತಹ ಅಧಿಕಾರಿಗಳಿಗೆ ಮಣಿ ಹಾಕದೆ ಮಾನ್ಯ ಜಿಲ್ಲಾಧಿಕಾರಿಗಳು ಇಂತಹ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ. ಕಮ್ಯುನಿಸ್ಟ್ ಸಿಪಿಐಎಂಎಲ್ ಪಾರ್ಟಿಯ ಕಾರ್ಯದರ್ಶಿ ಜಿ ಮಲ್ಲಿಕಾರ್ಜುನ್ ಹಾಗೂ ಮುಖಂಡರು ಒತ್ತಾಯಿಸಿದ್ದಾರೆ.
ಕೊಟ್ -1ಜಿಲ್ಲಾ ಪಂಚಾಯಿತಿ ಕಾರ್ಯದರ್ಶಿ ಅವರು ವರ್ಗಾವಣೆ ನವಂಬರ್ 22 ಕ್ಕೆ ಮಾಡಲಾಗಿದೆ. ಎಂದು ಪತ್ರಿಕಾ ಮಾಧ್ಯಮದವರಿಗೆ ತಿಳಿಸಿದ ಮೇರೆಗೆ ಪತ್ರಿಕೆಗಳಲ್ಲಿ ವರದಿ ಬಿತ್ತರಿಸಲಾಗಿತ್ತು. ಭ್ರಷ್ಟ ಅಧಿಕಾರಿಗಳನ್ನು ಅಮಾನತ್ತು ಮಾಡಬೇಕೆಂದು ಆಗ್ರಹಿಸಿದ್ದೆವು,ಆದರೆ ಇಲ್ಲಿ ಅಧಿಕಾರಿಗಳ ದೊಂಬರಾಟ ಮಾಡುತ್ತಿರುವುದನ್ನು ಸಂಘಟನೆ ಹಾಗೂ ಸಾರ್ವಜನಿಕರು ಇವುಗಳೆಲ್ಲವನ್ನು ನೋಡಿ ರೊಚ್ಚಿಗೇಳುವುದು ಒಂದೇ ಬಾಕಿ ಇದೆ ಎಂದು ಸಿಪಿಐಎಂಎಲ್ ಪಕ್ಷದವರು ರಾಜ್ಯ ಸದಸ್ಯ ಅಜ್ಜಪ್ಪ. ಪತ್ರಿಕೆಗೆ ತಿಳಿಸಿದರು.
ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.ಸಿ ಕೊಟ್ಟೂರು