ನುಡಿ “ಮುತ್ತು”ಗಳು…..

• ಸಾಧನೆಯು ಪ್ರಾಮಾಣಿಕ ವ್ಯಕ್ತಿಗೆ ಮಾತ್ರ
ದೊರೆಯುವುದು ಅಪ್ರಾಮಾಣಿಕ ವ್ಯಕ್ತಿಗೆ ಅಲ್ಲ.•
ಸಾಧನೆಯ ಸಿಹಿ ಗಾಳಿ ನಮ್ಮ ಬದುಕಿನಲ್ಲಿ
ಬರಬೇಕಾದರೆ, ಬಿರುಗಾಳಿ
ಸುಂಟರಗಾಳಿಯನ್ನು ಎದುರಿಸಲೇಬೇಕು.•
ಸಾಧನೆಯ ಶಿಖರವನ್ನು ಏರಬೇಕಾದರೆ
ಪರಿಶ್ರಮದ ಮೆಟ್ಟಿಲುಗಳನ್ನು ಹತ್ತಲೇಬೇಕು.•
ನಿಜವಾದ ಸಾಧಕನಿಗೆ ಗುರಿ ಮತ್ತು
ಉದ್ದೇಶಗಳು ಸ್ಪಷ್ಟವಾಗಿದ್ದರೆ ಸಾಧನೆ
ಕಷ್ಟವೇನಲ್ಲ.•
ಸಾಧಿಸುವ ಹಂಬಲ ನಿನ್ನಲ್ಲಿ ಇದ್ದರೆ
ಸಾಧನೆಯ ದಾರಿ ಹೂವಿನಂತಾಗುತ್ತದೆ.•
ಸಾಧನೆ ಎಂಬುದು ನೂರು ಮೀಟರ್, ಎರಡು
ನೂರು ಮೀಟರ್ ಓಟವಲ್ಲ ಅದು
ಮ್ಯಾರಥಾನ್ ಓಟವಿದ್ದಂತೆ ಪರಿಶ್ರಮ ಬೇಕೆ
ಬೇಕು.•
ಸಾಧನೆಯ ಬೆನ್ನತ್ತ ಬೇಡಿ ಪರಿಶ್ರಮದ ಬೆನ್ನತ್ತಿ,
ಸಾಧನೆ ನಿಮ್ಮದಾಗುವುದರಲ್ಲಿ ಯಾವುದೇ
ಸಂದೇಹವಿಲ್ಲ.•
ಸಾವಿರಾರು ಸೋಲುಗಳಾದರೂ ಆತ್ಮವಿಶ್ವಾಸ
ಕಳೆದುಕೊಳ್ಳಬೇಡಿ, ಸಾಧನೆ ಮಾಡಿದ
ಮೇಲೆಯೇ ಸಾವಿಗೆ ಶರಣಾಗಿ•
ಸಾವು ಒಂದಲ್ಲ ಒಂದು ದಿನ ಎಲ್ಲರಿಗೂ
ಬಂದೇ ಬರುತ್ತೆ, ಸಾಧನೆ ಇಲ್ಲದೆ ಸತ್ತರೆ ಅದು
ಸಾವಿಗೆ ಅವಮಾನ ನೆನಪಿರಲಿ.•
ನಮ್ಮ ಸಾಧನೆ ಹೇಗಿರಬೇಕೆಂದರೆ ಸಾವು
ಕೂಡ ನಮ್ಮ ಬಳಿ ಬರಲು
ಹೆದರುವಂತಿರಬೇಕು.•
ಸಾಧಿಸುವ ಮನಸ್ಸು ಹುಮ್ಮಸ್ಸು ನಮ್ಮ ಬಳಿ
ಇದ್ದರೆ ಸಾಧನೆ ಅಷ್ಟೊಂದು ದೊಡ್ಡ
ಮಾತೇನಲ್ಲ.
ಶ್ರೀ ಮುತ್ತು.ಯ.ವಡ್ಡರ
( ಶಿಕ್ಷಕರು, ಹಿರೇಮಾಗಿ )
ಬಾಗಲಕೋಟ
Mob-9845568484