ಕಾತ್ರಿಕೆಹಟ್ಟಿ ಗ್ರಾಮದಲ್ಲಿ ಶ್ರೀ ಗಾದ್ರಿಪಾಲನಾಯಕ ದೇವರಿಗೆ ದೀವಳಗಿ ಹಬ್ಬ.
ಕಾತ್ರಿಕೆಹಟ್ಟಿ ಡಿಸೆಂಬರ್.7

ಕೂಡ್ಲಿಗಿ ತಾಲೂಕಿನ ಗಡಿ ಗ್ರಾಮವಾದ ಕಾತ್ರಿಕೆಹಟ್ಟಿ ಗ್ರಾಮದಲ್ಲಿ ಪ್ರತಿ ವರ್ಷದ ಸಂಪ್ರದಾಯದಂತೆ ಮ್ಯಾಸನಾಯಕರ ಸಾಂಸ್ಕೃತಿಕ ವೀರ ಶ್ರೀ ಗಾದ್ರಿಪಾಲನಾಯಕ ಅವರ ಸನ್ನಿಧಿಯಲ್ಲಿ ದೀವಳಗಿ ಹಬ್ಬವನ್ನು ಆಚರಿಸಲಾಯಿತು. ಆದಿಮ ಮೂಲ ದೀವಳಗಿ ಹಬ್ಬವೂ ವರ್ತಮಾನದಲ್ಲಿ ದೀಪಾವಳಿಯಾಗಿ ಕಾಣಿಸಿ ಕೊಂಡಿದೆ. ಪ್ರತಿ ವರ್ಷ ಒಳ್ಳೆಯ ಮಳೆ ಬೆಳೆ ಬಂದು ಸಮೃದ್ಧಿ ಕಂಡು ಬಂದರೇ ದೀವಳಗಿ ಹಬ್ಬವನ್ನು ಮ್ಯಾಸನಾಯಕರ ಹಟ್ಟಿಗಳಲ್ಲಿ ಆಚರಿಸುವುದನ್ನು ಕಾಣುತ್ತೇವೆ. ದೇವರ ಎತ್ತುಗಳು ಮತ್ತು ಮುತ್ತಯ್ಯ( ದೇವರುಗಳು )ಗಳ ಪೂಜೆಗೆ ಸಿರಿ ಧಾನ್ಯಗಳನ್ನು ಅರ್ಪಿಸಲಾಯಿತು. ಬರಗಾಲ ನಡುವೆ ಅವರವರ ಹೊಲದಲ್ಲಿ ಬೆಳೆದು ತಂದಿರುವ ರಾಗಿ, ಜೋಳ, ಸಜ್ಜೆ, ಹುರುಳಿ, ಶೇಂಗಾ, ಹೂವು, ಹಣ್ಣು, ಕಾಯಿ ಇತ್ಯಾದಿಯಾಗಿ ದೇವರಿಗೆ ಅರ್ಪಿಸಿ ಪೂಜೆ ಸಲ್ಲಿಸಿದರು. ದೀವಳಗಿ ಹಬ್ಬ ಆಚರಣೆ ಇಲ್ಲಿ ವಿಶಿಷ್ಟವೆನಿಸಿತು.

ಮ್ಯಾಸನಾಯಕರ ಬುಡಕಟ್ಟು ಸಂಸ್ಕೃತಿಯ ಆಚರಣೆಯಂತೆ ಮಂಗಳವಾರ ದೇವರ ಎತ್ತುಗಳನ್ನ ಗ್ರಾಮಕ್ಕೆ ಕರೆ ತಂದು ಶ್ರೀ ಗಾದ್ರಿಪಾಲನಾಯಕ ಸ್ವಾಮಿಯ ದೀವಳಿಗೆ ಹಬ್ಬ ಪ್ರಯುಕ್ತ ವಿಶೇಷವಾಗಿ ದೇವಸ್ಥಾನದಲ್ಲಿ ಶ್ರೀ ಗಾದಿ ಪಾಲನಾಯಕ ಸ್ವಾಮಿಯ ಪೂಜಾ ಕೈ ಕಾರ್ಯಗಳನ್ನ ನೆರವೇರಿಸಿ ನಂತರ ದೇವರಿಗೆ ಕಾಸು ಮೀಸಲು, ಆವರಣದಲ್ಲಿ ದೇವರ ಎತ್ತುಗಳನ್ನು ಓಡಿಸಲಾಯಿತು ಮಣಿವು ಸಂಪ್ರದಾಯಗಳು ಕಾಣಿಸಿ ಕೊಂಡವು. ಮ್ಯಾಸನಾಯಕರ ದೇವರ ಗುಡಿ, ದೇವರ ಎತ್ತುಗಳು, ಕಿಲಾರಿಗಳು, ದಾಸಯ್ಯನವರು ಮತ್ತು ಮುತ್ತಯ್ಯನವರು ಸೇರಿ ತಂಗಡಿ ಸೊಪ್ಪು ಮೂಲಕ ಬೆಂಕಿ ಹಾಕಿದರೆ ಅದೇ ದೀಪಾವಳಿ ಅನಿಸಿ ಕೊಳ್ಳುತ್ತದೆ. ನನ್ನಿವಾಳ ಗ್ರಾಮದಲ್ಲಿ ಬೆಳಗಿನ ಜಾವ ಚಂದ್ರ ಉದಯಿಸುವ ಸಮಯದಲ್ಲಿ ಪೂಜೆಗಳು ಪ್ರಾರಂಭ ಗೊಂಡು ಮಧ್ಯಾಹ್ನ ಸಮಯದಲ್ಲಿ ಕೊನೆ ಗೊಳ್ಳುತ್ತವೆ. ಇಲ್ಲಿನ ದೀವಳಗಿ ಹಬ್ಬದಲ್ಲಿ ಹಾಲು, ತುಪ್ಪ ಮತ್ತು ಸಿರಿ ಧಾನ್ಯಗಳನ್ನು ಒಳಗೊಂಡಂತೆ ವಿಶೇಷವಾದ ಪೂಜೆ ಕಾರ್ಯ ಕ್ರಮಗಳನ್ನು ಕಾಣಬಹುದು. ಇನ್ನೂ ದೀವಳಗಿ ಹಬ್ಬವನ್ನು ಪ್ರಾದೇಶಿಕವಾಗಿ ಮೊಳಕಾಲ್ಮೂರು ತಾಲೂಕಿನ ಕಂಪಳ ದೇವರಹಟ್ಟಿ ಹಾಗೂ ಕೂಡ್ಲಿಗಿ ತಾಲೂಕಿನ ದೇವರಹಟ್ಟಿ, ಚಳ್ಳಕೆರೆ ತಾಲ್ಲೂಕಿನ ನನ್ನಿವಾಳದಲ್ಲಿ ಆಚರಿಸಲಾಗುತ್ತದೆ. ಈ ದೀವಳಗಿ ಹಬ್ಬಕ್ಕೆ ಕಾತ್ರಿಕೆಹಟ್ಟಿ ಮತ್ತು ಇನ್ನಿತರ ಸುತ್ತ ಮುತ್ತಲಿನ ಗ್ರಾಮಗಳ ಜನರು ಭಾಗವಹಿಸಿದ್ದರು.
ಹೋಬಳಿ ವರದಿಗಾರರು:ಕೆ.ಎಸ್.ವೀರೇಶ್.ಕಾನಾ ಹೊಸಹಳ್ಳಿ