ಬಸ್ ವ್ಯವಸ್ಥೆ ಕಲ್ಪಿಸುವಂತೆ ಡಿ.ವಿ.ಪಿ ಸಂಘಟನೆಯಿಂದ ಮನವಿ.

ಹಂಜಗಿ ಡಿಸೆಂಬರ್.8

ದಲಿತ ವಿದ್ಯಾರ್ಥಿ ಪರಿಷತ್ ಇಂಡಿ ಹಾಗೂ ಪ್ರಗತಿಪರ ಸಂಘಟನೆಗಳ ವತಿಯಿಂದ ಹಂಜಗಿ ಹಾಗೂ ನಿಂಬಾಳ ಗ್ರಾಮಕ್ಕೆ ಸರಿಯಾದ ಸಮಯಕ್ಕೆ ಬಸ್ ಬರದೇ ಇರುವ ಕಾರಣಕ್ಕಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆ ಆಗಿರುವದರಿಂದ ಬಸ್ ತಡೆದು ಹಂಜಗಿ ಗ್ರಾಮ ಇಂದ ಸುಮಾರು 7 ಕಿ.ಮೀ ವರೆಗೆ ನಡೆಯುವ ಮೂಲಕ ಬಸ್ ಡಿಪೋ ವರೆಗೆ ಪ್ರತಿಭಟನೆ ಮಾಡಿ ಬಸ್ ಡಿಪೋ ಮ್ಯಾನೇಜರ್ ಅವರಿಗೆ ಡಿ.ವಿ.ಪಿ ಹಾಗೂ ಇತರೆ ಸಂಘಟನೆಗಳಿಂದ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಡಿವಿಪಿ ಸಂಘಟನೆಯ ತಾಲೂಕಾ ಅಧ್ಯಕ್ಷರಾದ ವಿನೋದ ಕಾಳೆಯವರು ಮಾತನಾಡಿ ಎರಡು ದಿನದೊಳಗಾಗಿ ಸರಿಯಾದ ಸಮಯಕ್ಕೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬಸ್ ವ್ಯವಸ್ಥೆ ಮಾಡಬೇಕು.ಒಂದು ವೇಳೆ ವಿಳಂಬ ನೀತಿ ಅನುಸರಿಸಿದರೆ ,ತಾಲೂಕಿನ ಕೇಂದ್ರ ಸ್ಥಾನದಲ್ಲಿ ಬಸ್ ಗಳನ್ನು ತಡೆದು ಉಗ್ರವಾದ ಪ್ರತಿಭಟನೆ ಮಾಡುವುದು ಅನಿವಾಯ೯ ವಾಗುತ್ತದೆ ಎಂದು ಮುನ್ನೆಚ್ಚರಿಕೆ ಮಾತು ಹೇಳಿದರು.ಈ ಪ್ರತಿಭಟನೆಯಲ್ಲಿ DVP ಅಧ್ಯಕ್ಷರಾದ ಶ್ರೀ ವಿನೋದ ಕಾಳೆ, ರಾಮ ಕಾಂಬಳೆ JDS ಮುಖಂಡರಾದ ಶ್ರೀ B D ಪಾಟೀಲ್, ಸೋಮು ಅಂಜುಟಗಿ,ಸೋಹೇಲ್ ಕುಣಬಿ,ತೌಶಿಫ್ ಕರೋಶಿ,ಸಾಗರ್ ಕಟ್ಟಿಮನಿ,ಖಾಷಿಮ್ ವಾಲಿಕಾರ,ಅಪ್ರಾನ ಬಿರಾದಾರ್ಪೂಜಾ ರಾಠೋಡ್, ವೈಷ್ಣವಿ ಕಮಲಾಕರ್, ಪ್ರೀತಿ ಬಗಲಿ, ಹಾಗೂ ವಿದ್ಯಾರ್ಥಿಗಳ ಸಮೂಹ ಉಪಸ್ಥಿತರಿದ್ದರು.

ತಾಲೂಕ ವರದಿಗಾರರು:ಶಿವಪ್ಪ.ಬಿ.ಹರಿಜನ.ಇಂಡಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button