ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುತ್ತಿರುವ ತಾಲೂಕ ಪಂಚಾಯಿತಿಯ ಮೇಲಾಧಿಕಾರಿಗಳು..?
ಕೊಟ್ಟೂರು ಡಿಸೆಂಬರ್.8

ತಾಲೂಕಾ ಪಂಚಾಯಿತಿಗೆ ಇತ್ತೀಚಿಗೆ ಭ್ರಷ್ಟಾಚಾರದ ಆರೋಪಗಳು ಕೇಳಿ ಬಂದಿದ್ದರೂ ಕೂಡ ಮೇಲಾಧಿಕಾರಿಗಳು ವರ್ಗಾವಣೆ ಮಾಡಿರುವುದಾಗಿ ಹೇಳಿ, ಸಂಘಟನೆಯವರಿಗೆ, ಸಾರ್ವಜನಿಕರಿಗೆ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ್ದಾರೆ. ತಾಲೂಕಾ ಪಂಚಾಯಿತಿಯಲ್ಲಿ ಗ್ರೇಡ್-೧ ಕಾರ್ಯದರ್ಶಿಯಾಗಿದ್ದ ರೂಪಾ ಹಾಗೂ ಡಾಟಾ ಎಂಟ್ರಿ ಆಪರೇಟರ್ ಮೋಹನ್ ಇವರ ಮೇಲೆ ಅನೇಕ ಭ್ರಷ್ಟಾಚಾರದ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ದಿನ ಪತ್ರಿಕೆಗಳ ನಿರಂತರ ವರದಿಯಿಂದ, ಶಾಸಕರ ಸಭೆಯ ಬಗ್ಗೆ ಎಚ್ಚೆತ್ತ ಜಿಲ್ಲಾ ಪಂಚಾಯಿತಿ ರೂಪಾ ರವರನ್ನು ಅವರ ಮೂ ಲಸ್ಥಾನವಾದ ಕೆ.ಅಯ್ಯನಹಳ್ಳಿ ಗ್ರಾ.ಪಂ.ಗೆ ಕಾರ್ಯದರ್ಶಿಯಾಗಿ ಹಾಗೂ ಮೋಹನ್ ಇವರನ್ನು ಕೂಡ್ಲಿಗಿ ತಾ.ಪಂ. ಕಛೇರಿಗೆ ವರ್ಗಾವಣೆ ಮಾಡಿತ್ತು. ಆದರೆ ವರ್ಗಾವಣೆ ಮಾಡಿದರೂ ಸಹ ಕಛೇರಿಯ ಕರ್ತವ್ಯದಿಂದ ಬಿಡುಗಡೆ ಯಾಗಿಲ್ಲ. ಇದನ್ನೆಲ್ಲ ನೋಡಿದರೆ ತಾಲೂಕಾ ಪಂಚಾಯಿತಿಯ ಮೇಲಾಧಿಕಾರಿಗಳು ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುತ್ತಿರುವುದು ಕಾಣುತ್ತಿದೆ. ಒಬ್ಬರ ಮೇಲೆ ಒಬ್ಬರು ಕಾರಣ ಹೇಳಿ ತಪ್ಪಿಸಿ ಕೊಳ್ಳುವ ಚಾಣಾಕ್ಷತನವನ್ನು ತೋರಿಸುತ್ತಿದ್ದಾರೆ. ವರ್ಗಾವಣೆಯಾಗಿದ್ದರೂ ಸಹ ಕಛೇರಿ ಕರ್ತವ್ಯದಿಂದ ಬಿಡುಗಡೆ ಯಾವಾಗ ಎಂದು ಕೇಳಿದರೆ, ಇಂದು ನಾಳೆ ಎಂದು ದಿನಗಳನ್ನು ದೂಡುತ್ತ ಸಬೂಬುಗಳನ್ನು ಹೇಳುತ್ತಿದ್ದಾರೆ. ಕಛೇರಿಗೆ ಬರುತ್ತಿರುವ ಸಾರ್ವಜನಿಕರ ಸಮಸ್ಯೆಗಳು ಸಮಸ್ಯೆಗಳಾಗಿಯೇ ಉಳಿಯುತ್ತಿವೆ. ಇಂತಹ ಭ್ರಷ್ಟಾಚಾರ ಮಾಡುತ್ತಿರುವ ಅಧಿಕಾರಿಗಳ ವರ್ಗಾವಣೆಗೆ ಏಳೆಂಟು ಸಂಘಟನೆಗಳು ಭ್ರಷ್ಟಾಚಾರ ಆರೋಪ ಕೇಳಿ ಬಂದಿರುವ ರೂಪಾ ಇವರನ್ನು ಅಮಾನತ್ತು ಮಾಡುವಂತೆ ಹಾಗೂ ಮೋಹನ್ರವರನ್ನು ಕೆಲಸದಿಂದ ವಜಾ ಮಾಡುವಂತೆ ತಾಲೂಕಾ ಪಂಚಾಯಿತಿ ಕಛೇರಿಯ ಆವರಣದಲ್ಲಿ ಅನಿರ್ಧಿಷ್ಟಾವಧಿ ಧರಣಿ ಕೂರಲು ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಗಿದೆ. ಆಡಳಿತ ಹಿತ ದೃಷ್ಟಿಯಿಂದ ಈ ವಿಷಯದ ಬಗ್ಗೆ ಕಠಿಣ ಕ್ರಮ ಕೈಗೊಳ್ಳದಿದ್ದರೆ ಲೋಕಾಯುಕ್ತಕ್ಕೆ ತಾಲೂಕಾ ಪಂಚಾಯಿತಿಯ ಭ್ರಷ್ಟಾಚಾರದ ಬಗ್ಗೆ ಪ್ರಕರಣ ದಾಖಲು ಮಾಡಲಾಗುವುದು. ಈ ವಿಷಯದ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೂ ತರಲಾಗಿದೆ ಎಂದು ಸಿಪಿಎಂಐಲ್ ಲಿಬರೇಷನ್ ಪಕ್ಷದ ತಾಲ್ಲೂಕು ಕಾರ್ಯದರ್ಶಿ ಜಿ.ಮಲ್ಲಿಕಾರ್ಜುನ ಪತ್ರಿಕೆಗೆ ತಿಳಿಸಿದರು.
ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.ಸಿ ಕೊಟ್ಟೂರು