ಸಂವಿಧಾನ ಈ ದೇಶದ ಪವಿತ್ರವಾದ ಗ್ರಂಥ ಎಲ್ಲರೂ ಅದನ್ನು ಓದಿರಬೇಕು – ಶಿವಾನಂದ ಗೋಗೇರಿ.
ನರೇಗಲ್ಲ ಜು .28

ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನರೇಗಲ್ಲ ಪಟ್ಟಣದ ಸ್ಥಳೀಯ ಕೆ.ಎಸ್.ಎಸ್ ಪಿ.ಯು.ಸಿ ಕಾಲೇಜಿನಲ್ಲಿ ನಡೆದ ಗೃಹ ರಕ್ಷಕ ದಳದವರಿಂದ ಸಂವಿಧಾನ ಓದು ಅಭಿಯಾನ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಭಾಗವಹಿಸಿ ಮಾತನಾಡಿದರು ನಮ್ಮ ದೇಶದ ಮೂಲಭೂತ ಹಕ್ಕುಗಳ ಕರ್ತವ್ಯಗಳನ್ನು ಸರಿಯಾಗಿ ಪ್ರತಿಯೊಬ್ಬರೂ ಮನೆಯಲ್ಲಿ ಮಕ್ಕಳಿಗೆ ತಿಳಿಸುವುದರ ಜೊತೆಗೆ ಈ ದೇಶದ ಹಕ್ಕುಗಳನ್ನು ಸರಿಯಾಗಿ ಪಾಲಿಸಿ ಕೊಂಡು ಹೋಗಬೇಕು ಅಂದಾಗ ಮಾತ್ರ ಸರ್ಕಾರ ದಿಂದ ಬರತಕ್ಕಂತಹ ಸೌಲತ್ತುಗಳನ್ನು ನಮ್ಮ ಸಂವಿಧಾನದ ಪ್ರಕಾರ ಪ್ರತಿಯೊಬ್ಬರು ಪಡೆದು ಕೊಳ್ಳಬೇಕೆಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ ಶಿಕ್ಷಕ ಸುರೇಶ ಹಳ್ಳಿಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು ಹಾಗೂ ಉಳಿದ ಎಲ್ಲಾ ಗ್ರಹರಕ್ಷಕ ದಳದ ಸಿಬ್ಬಂದಿಯವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಶಿವಾನಂದ.ಎಫ್.ಗೋಗೇರಿ.ತೋಟಗಂಟಿ