ಪಠ್ಯ ಆಧಾರಿತ ನಾಟಕ ಪ್ರದರ್ಶನ.

ಇಂಡಿ ಡಿಸೆಂಬರ್.11

ಪಟ್ಟಣದ ಹೊರವಲಯ ದಲ್ಲಿರುವ ಅಮರ್ ಮಂಗಲ ಕಾರ್ಯಾಲಯದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಕಲ್ಪುರ ಸಂಸ್ಕೃತಿಕ ಕಲಾ ಸಂಘ ಕಲ್ಲೂರು ಸಹಯೋಗದಲ್ಲಿ ಪಿಯುಸಿ ಪ್ರಥಮ ಹಾಗೂ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಕನ್ನಡ ವಿಷಯದಲ್ಲಿ ಬರುವ ಜ್ಞಾನಪೀಠ ಪ್ರಶಸ್ತಿ ವಿಜೇತರಾದ ಡಾಕ್ಟರ್ ಚಂದ್ರಶೇಖರ್ ಕಂಬಾರರ ಬೋಳೇಶಂಕರ ನಾಟಕ ಹಾಗೂ ರಾಷ್ಟ್ರಕವಿ ಕುವೆಂಪು ಅವರ ಮಗನಾದ ಪೂರ್ಣಚಂದ್ರ ತೇಜಸ್ವಿಯವರು ಬರೆದಿರುವ ದೀರ್ಘಗದ್ಯ ಕೃಷ್ಣೆಗೌಡನ ಆನೆ ಎಂಬ ಪಠ್ಯಾಧರಿತ ನಾಟಕವನ್ನು ಪ್ರದರ್ಶನ ಇಂಡಿ ತಾಲೂಕಿನ ಪದವಿ ಪೂರ್ವ ಕಾಲೇಜುಗಳ ಕನ್ನಡ ಉಪನ್ಯಾಸಕ ಉಪನ್ಯಾಸಕಿಯರು ಹಾಗೂ ಶ್ರೀಧರ ಗೌಡ ಬಿರಾದರ, ಎಸ್.ಎಸ್.ಈರಣ್ಣ ಕೇರಿ, ವಿಜಯಕುಮಾರ ರಾಠೋಡ, ಮಲ್ಲಿಕಾರ್ಜುನ ಕಳ್ಳಿಮನಿ, ಎಮ್.ಕೆ.ಪಾಟಿಲ, ಉಪನ್ಯಾಸಕಿಯರದ ಶಖೀನಾ ಪಟೇಲ್,ಎಸ್.ಎಸ್ ಹೂಗಾರ , ಶ್ವೇತಾ ಮೇಡಮ್ ಎಲ್ಲಾರೂ ತಮಟೆ ಬಾರಿಸುವುದರ ಮೂಲಕ ಉದ್ಘಾಟಿಸಿದರು. ಪ್ರಾಸ್ತಾವಿಕವಾಗಿ ನಾಟಕದ ವಸ್ತು ವಿಷಯ ಕುರಿತು ಉಪನ್ಯಾಸಕ ಸದಾನಂದ ಎಸ್ ಈರಣ್ಣ ಕೇರಿಯವರು ಮಾತನಾಡುತ್ತಾ ಇಂದಿನ ವಿದ್ಯಾರ್ಥಿ – ವಿದ್ಯಾರ್ಥಿನಿಯರಿಗೆ ಪಠ್ಯ ಆಧಾರಿತ ನಾಟಕಗಳು ಅತ್ಯಂತ ಪರಿಣಾಮ ಬೀರುವುದರಿಂದ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಲಿಕ್ಕೆ ಸಾಧ್ಯ ಹಾಗೂ ಚಿತ್ರಗಳನ್ನು ನೋಡಿದಾಗ ಅಚ್ಚಳಿಯದೆ ನಮ್ಮ ಸ್ಮೃತಿಪಟಲದಲ್ಲಿ ಉಳಿಯುತ್ತವೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಉಪನ್ಯಾಸಕಿ ಪಟೇಲ್ ಮಾತನಾಡಿ ನಾಟಕ ಪ್ರದರ್ಶನ ಚೆನ್ನಾಗಿ ಮಾಡಿದರು ಮಕ್ಕಳು ನಾಟಕ ವೀಕ್ಷಣೆ ಮಾಡುವುದರ ಮೂಲಕ ಅತ್ಯಂತ ಖುಷಿಯಿಂದ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳು ಪಡೆದು ಕೊಳ್ಳಲಿಕ್ಕೆ ಸಾಧ್ಯ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಇಂಡಿ ನಗರದ ಎಲ್ಲಾ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರು ಸುಮಾರು ೫೦೦ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ತಾಲೂಕ ವರದಿಗಾರರು:ಶಿವಪ್ಪ.ಬಿ.ಹರಿಜನ.ಇಂಡಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button