ಕಾಂಗ್ರೇಸ್ ಗ್ಯಾರಂಟಿ ಜಾಗೃತ ಸಭೆ.
ದೇವರ ಹಿಪ್ಪರಗಿ ಫೆಬ್ರುವರಿ.28

ದೇವರ ಹಿಪ್ಪರಗಿ ಪಟ್ಟಣದ 1008 ಜಗದ್ಗುರು ಕಲ್ಯಾಣ ಮಂಟಪದಲ್ಲಿ ಕಾಂಗ್ರೆಸ್ ಸರಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳ ಜಾಗೃತ ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ರಾಜು ಆಲಗೂರ ಅವರ ಕರ್ನಾಟಕದಲ್ಲಿ ನಮ್ಮ ಕಾಂಗ್ರೆಸ್ ಸರಕಾರ ನುಡಿದಂತೆ ಎಲ್ಲಾ ಗ್ಯಾರಂಟಿ ಯೋಜನೆಯನ್ನು ಜಾರಿಗೆ ಮಾಡಿದ್ದೇವೆ, ಆದರೆ ಕೇಂದ್ರ ದಲ್ಲಿ ಬಿಜೆಪಿ ಸರಕಾರ ಸುಳ್ಳು ಭರವಸೆ ನೀಡುತ್ತದೆ. ಅಡಿಗೆ ಅನಿಲ, ಡೀಸಲ್, ಪೆಟ್ರೋಲ್, ಗಗನಕ್ಕೆ ಏರಿಕೆ ಅಗಿದೆ ಈ ಇವುಗಳನ್ನು ಪ್ರತಿ ದಿನ ಬಡವರು ಬಳಸುವಂತೆ ವಸ್ತುಗಳ ಇದರ ಬಗ್ಗೆ ಬಿಜೆಪಿ ಯವರು ಗಮನ ಹರಿಸಲು ಕರ್ನಾಟಕದ ಹಳ್ಳಿಯ ಮಹಿಳೆಯರು ಮನೆ ಹೊಲದಲ್ಲಿ ಕೆಲಸವನ್ನು ಬಿಟ್ಟರೆ ಬೇರೆ ಊರು ನೋಡುತ್ತಿರಲಿಲ್ಲ.

ಆದರೆ ಈಗ ಮಹಿಳೆಯರು ಕರ್ನಾಟಕದ ಮೂಲೆ ಮೂಲೆಗಳಲ್ಲಿ ಉಚಿತವಾಗಿ ಪ್ರಯಾಣ ಮಾಡುತ್ತಾರೆ ಅವರಿಗೆ ಪ್ರತಿ ತಿಂಗಳ ಎರಡು ಸಾವಿರ ನೀಡುತ್ತವೆ, ಯುವನಿಧಿ ಹಲವಾರು ಯೋಜನೆಯನ್ನು ನೀಡಿದ ನಮ್ಮ ಹೆಮ್ಮೆಯ ಕಾಂಗ್ರೆಸ್, ಸರಕಾರ ಎಂದು ಮಾತನಾಡಿದರು, ಈ ಕಾರ್ಯಕ್ರಮದ ನೇತೃತ್ವವನ್ನು ವಹಿಸಿದ ಮಾಜಿ ಶಾಸಕರಾದ ಶರಣಪ್ಪ ಸುಣಗಾರ ಅವರು ಹಾಗೂ ಕಾಂಗ್ರೆಸ್ ಮುಖಂಡರಾದ ಸಂತೋಷ ದೊಡ್ಡಮನಿ ಪ್ರಕಾಶ ಗುಡಿಮನಿ ಹುಸೇನ್ ಕೊಕಟನೂರ ಪರಸುರಾಮ ದಿಂಡವಾರ, ಅನಿಲ್ ಕನಮಡಿ ಹಾಗೂ ಮತಕ್ಷೇತ್ರದ ಮುಖಂಡರು ಎಲ್ಲಾ ಹಳ್ಳಿಯ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ