ವಿಶ್ವ ಚೇತನ ಪಬ್ಲಿಕ್ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮ.
ಕಂದಗಲ್ಲ ಫೆಬ್ರುವರಿ.25

ಇಳಕಲ್ಲ ತಾಲೂಕಿನ ಕಂದಗಲ್ಲ ಗ್ರಾಮದ ವಿಶ್ವ ಚೇತನ ಪಬ್ಲಿಕ ಶಾಲೆಯ 14 ನೆ ವಾರ್ಷಿಕ ಸ್ನೇಹ ಸಮ್ಮೇಳನ, ದಿ 25/2/2024 ರವಿವಾರ ದಂದು ಶಾಲೆಯ ಆವರಣದಲ್ಲಿ ಬೆಳಿಗ್ಗೆ 10-30 ಕ್ಕೆ ನಡೆಯಲಿದೆ, ಸಮ್ಮೇಳನದ ಅಂಗವಾಗಿ ನೂತನವಾಗಿ ನಿರ್ಮಿಸಿದ ಶ್ರೀ ವಿಜಯ ಮಹಾಂತ ರಂಗ ಮಂದಿರ ಉದ್ಘಾಟನೆ, ಉಚಿತ ಅರೋಗ್ಯ ತಪಾಸಣೆ ಶಿಬಿರ, ಪ್ರಶಸ್ತಿ ಪತ್ರ ವಿತರಣೆ,ಸನ್ಮಾನ ಸಮಾರಂಭ ಜರುಗಲಿದ್ದು ಈ ಎಲ್ಲ ಕಾರ್ಯಕ್ರಮಗಳ ದಿವ್ಯ ಸಾನಿಧ್ಯ ವನ್ನು ಪೂಜ್ಯ ಶ್ರೀ ಗುರುಮಹಾಂತ ಸ್ವಾಮಿಗಳು ಚಿತ್ತರಗಿ ಸಂಸ್ಥಾನಮಠ ಇಲಕಲ್ಲ ಪೂಜ್ಯ ಶ್ರೀ ಮ ನಿ ಪ್ರ ಡಾ ಬಸವಲಿಂಗ ಮಹಾಸ್ವಾಮಿಗಳು ಮಹಾಂತ ತೀರ್ಥ ಶಿರೂರ ಉದ್ಘಾಟಕರಾಗಿ ರಾಹುಲ ಧಣಿ ಚ, ನಾಡಗೌಡ್ರ, ವಿಜಯಕುಮಾರ ಎಸ್ ಪಾಟೀಲ, ವೈದ್ಯರಾದ್ ಮಹಮ್ಮದ ಅರ್ಷಾದ್ ಬಾಗವಾನ, ಸೈಯಾದ ಸಾದಿಯ ಇರಮ, ಭಾಗವಹಿಸಲಿದ್ದಾರೆ.ಮಹಾಂತೇಶ್ ಕಡಿವಾಲ್ ಪಂಪಣ್ಣ ಸಜ್ಜನ ಶ್ರೀ ಮತಿ ಜಾಸ್ಮಿನ್ ಕಿಲ್ಲೆದಾರ ಎನ್ ಎಚ್ ಮುಕ್ಕಣ್ಣನವರ ಜ್ಯೋತಿ ಬೆಳಗಿಸಲಿದ್ದಾರೆ ಸಂಸ್ಥೆಯ ಮುಖ್ಯಸ್ಥರಾದ ಸಂಗಣ್ಣ ಹವಾಲ್ದಾರ್ ಶ್ರೀ ಮತಿ ಕೆ ಎಲ್ ಮನಹಳ್ಳಿ ಅಧ್ಯಕ್ಷತೆ ವಹಿಸಲಿದ್ದು ಅತಿಥಿಗಳಾಗಿ ಗ್ರಾಮದ ಮುಖಂಡರು ಪತ್ರಕರ್ತರು ಶಾಲಾ ಗುರು ಬಳಗ ಪಾಲಕರು ಸುತ್ತ ಮುತ್ತಲಿನ ಗ್ರಾಮಸ್ಥರು ಭಾಗವಹಿಸಲಿದ್ದಾರೆ ಎಂದು ಶಾಲೆಯ ಮುಖ್ಯ ಗುರುಗಳಾದ ರೇಷ್ಮ ಟಿ ಗಾವಡಿ ತಿಳಿಸಿದ್ದಾರೆ.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರತಾಪ್.ವಾಯ್.ಕಿಳ್ಳಿ.ಇಲಕಲ್ಲ