ಪದ್ಮಶ್ರೀ ಪ್ರಶಸ್ತಿ ಪಡೆದ ಮೊದಲ ಮಂಗಳಮುಖಿ ಜೋಗುತಿ ಮಂಜಮ್ಮನವರ ಜೀವನ ಚರಿತ್ರೆ.

ಬಳ್ಳಾರಿ ಜಿಲ್ಲೆಯ ತಗ್ಗಿನಮಠ ಎಂಬ ಊರಿನಲ್ಲಿ ಜನಿಸಿದ ಮಂಜಮ್ಮ ಕಲಾ ಲೋಕಕ್ಕೆ ಚಿರ ಪರಿಚಿತರು ಹನುಮಂತಯ್ಯ ಮತ್ತು ಜಯಲಕ್ಷ್ಮಿ ದಂಪತಿಯ ಸುಪುತ್ರರಾಗಿ ಜನ್ಮನಾಮ,ಬಿ ಮಂಜುನಾಥ ಶೆಟ್ಟಿ ಪಡೆದು ಕೊಂಡಿದ್ದರು ಎಲ್ಲಾ ಮಕ್ಕಳಂತೆ ಓದು ಆಡು ಕುಣಿತದ ಸಡಗರದ ಬಾಲ್ಯ ಹೊಂದಿದ್ದರು ಆದರೆ ಏಳನೇ ತರಗತಿಯ ವೇಳೆಗೆ ಶರೀರದಲ್ಲಿ, ವಿಚಿತ್ರ ಏರು ಪೇರು ದೇಹದಲ್ಲಿ ದಿಢೀರಾಗಿ ಹೆಣ್ಣಿನ ಲಕ್ಷ್ಣಗಳು, ಗೋಚರಿಸಿದಾಗ, ಹೆಣ್ಣಾಗಿ ಬದುಕ ಬೇಕೆಂಬ ಹಂಬಲ ಸಹಜವಾಗಿ ಮೂಡಿದೆಆದರೆ ಲೋಕಕ್ಕೆ ಅಸಹಜವಾದ ಸ್ಥಿತಿ ಹಾಗೂ ಕೌಟುಂಬಿಕ ಸಾಮಾಜಿಕ ಬಹಿಷ್ಕಾರದ ಬರ ಸಿಡಿಲು ಎದುರಿಸ ಬೇಕಾಯಿತು ಆತ್ಮಹತ್ಯೆಗೂ ಯತ್ನಿಸಿಯೂ ಬದುಕಿ ಕೊಂಡ ಮೇಲೆ ಬದುಕು ಭಾವವೆರಡು ಸಮಾಜ ಮುಖಿಯಾಗಲು ದೃಢ ತೀರ್ಮಾನ ಕೈಗೊಳ್ಳುವಂತೆ ಮಾಡಿತುಮಂಜುನಾಥ ಶೆಟ್ಟಿ ಮಂಜಮ್ಮಳಾಗಿ, ರೂಪಾಂತರ ಆ ಹಂತದಲ್ಲಿಯೇ ದೊರೆತ ಕಾಳವ್ವ ಜೋಗುತಿಯೇ ಗುರು ತಾಯಿ ಮಾರ್ಗದರ್ಶಕಿ ದಿಕ್ಕು ದೆಸೆ ಎಲ್ಲವೂ 1985,ರಲ್ಲಿ ಹೊಸಪೇಟೆ ತಾಲೂಕಿನ ಹುಲಿಗಿ ಗ್ರಾಮದ ಹುಲಿಗೆಮ್ಮ ದೇಗುಲದಲ್ಲಿ ಜೋಗುತಿಯಾಗಿ ದೀಕ್ಷೆ ಸ್ವೀಕಾರ ಮುಂದೆ ಬದುಕು ಸೇವೆಗೆ ಮುಡಿಪು ಕಾಳವ್ವ ಜೋಗುತಿ ಅವರಿಂದ ಜಾನಪದ ನೃತ್ಯ ಹಾಡುಗಾರಿಕೆ ಮತ್ತು ಇತರೆ ಕಲೆಗಳೆಲ್ಲದರಲ್ಲೂ ತರಬೇತಿ ಕಲಾ ವಿದೆಯಾಗಿ ಬದಲಾದ ಮಂಗಳಮುಖಿ, ತುಮಕೂರಿನಲ್ಲಿ ನಡೆದ ಅಖಿಲ ಕರ್ನಾಟಕ ಮಹಿಳಾ ಜಾನಪದ ಸಮ್ಮೇಳನದಲ್ಲಿ ಕಲಾ ಪ್ರದರ್ಶನ ನೀಡುವುದ ರೊಂದಿಗೆಕಲಾಯಾನಕ್ಕೆ ಮುನ್ನುಡಿ, ಅನಂತರದ್ದು ಕಲೆಯೇ ಸಾಧನ ಪಥಹಲವು ಪಾತ್ರಗಳಲ್ಲಿ ಮಿಂಚಿದ ರಂಗ ಕಲಾವಿದೆ ಶ್ರೀ ರೇಣುಕಾ ಚರಿತ್ರೆ ನಾಟಕದ ಮುಖ್ಯ ಹಾಡುಗಾರ್ತಿ ಗೌಡಶಾನಿ ಕಾಮಧೇನು ಪರಶುರಾಮ ಸೇರಿ7, ಪಾತ್ರಗಳ ನಿರ್ವಹಣೆ ಸಾವಿರಾರು ಕಲಾ ಪ್ರದರ್ಶನದಲ್ಲಿ ಕಲಾ ಪ್ರೇಮಿಗಳ ಹೃನ್ಮಾನ ಸೆಳೆದ ಕಲಾವಂತಿಕೆ ಕಾಳವ್ವ ಜೋಗುತಿಯವರ ಅಗಲಿಕೆಯ ನಂತರ ರೇಣುಕಾ ದೇವಿಯ ಪಾತ್ರದಲ್ಲೂ ಬೆಳಗುವಿಕೆ ಮರಿಯಮ್ಮನಹಳ್ಳಿ ಯಲ್ಲಿ,ಮಾರುಕಲಾ ರಂಗದ ಬಯಲಾಟಗಳಲ್ಲಿ ನರ್ತಕಿಯಾಗಿ ಜನ ಜನಿತ ಮೋಹಿನಿ ಭಸ್ಮಾಸುರ ಹೇಮರೆಡ್ಡಿ ಮಲ್ಲಮ್ಮ ಮೋಹನ್ ಲಾಲ್ ಮುಂತಾದ ಪಾತ್ರಗಳಲ್ಲಿ ಮಿಂಚಿದ ರಂಗ ಕಲಾವಿದೆ,ವಾದ್ಯಗಾರ್ತಿಯಾಗಿಯೂ, ಮೋಡಿ ಮಾಡಿದ ಕಲಾ ನೈಪುಣೆ ಹಂಪಿ ಉತ್ಸವ ಬೀದರ್ ಉತ್ಸವ ಜಾನಪದ ಲೋಕೋತ್ಸವ ವಿಶ್ವ ಗೋ ಸಮ್ಮೇಳನ ಜಾನಪದ ಜಾತ್ರೆ ಮುಂತಾದ ನಾಡಿನೆಲ್ಲಾ ಪ್ರಮುಖ ಉತ್ಸವಗಳಲ್ಲಿ ಹಾಗೂ ನಾಡಿ ನಾಚೆಯ ಸಾಂಸ್ಕೃತಿಕ ಉತ್ಸವಗಳಲ್ಲೂ ಕಲಾ ಪ್ರದರ್ಶನ ಸಾವಿರಾರು ಕಾರ್ಯಕ್ರಮಗಳು ಎಲ್ಲೆಡೆ ಮೆಚ್ಚುಗೆಯ ಕರಡಾತನ ತೃತೀಯ ಲಿಂಗಿಗಳ ಪಾಲಿಗೆ ಸ್ಪೂರ್ತಿಯ ಚೇತನ ಸತತ ನಾಲ್ಕು ದಶಕಗಳಿಂದಲೂ ನಿರಂತರ ಕಲಾ ಸೇವೆಗೈದಿರುವ ಮಂಜಮ್ಮ ಜೋಗುತಿ ಆಶಕ್ತ ಹೆಣ್ಣು ಮಕ್ಕಳು ದಿಕ್ಕೆ ಕಾಣದ ತೃತೀಯ ಲಿಂಗಿಗಳ ಪಾಲಿಗೆ ಸ್ಪೂರ್ತಿಯ ಚೇತನ ವಾಗಿದ್ದು ವಿಶೇಷ ನಿತ್ಯ ಬದುಕಿನ ಹೋರಾಟ ಸಮಾಜದ ಕುಹಕ ಮಾತುಗಳ ಮಧ್ಯೆ ತಮ್ಮದೇ ಪ್ರತ್ಯೇಕ ಅಸ್ತಿತ್ವದ ಅಸ್ಮಿತೆ ಕಂಡು ಕೊಂಡು ಮಂಜಮ್ಮ ಅರಳಿನಿಂತ ಬಗೆಯೇ ಬೆರಗಿನ ಕಥನ, ಕರ್ನಾಟಕ ಜಾನಪದ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಜಾನಪದ ಶ್ರೀ ಪ್ರಶಸ್ತಿ ಜಾನಪದ ಲೋಕ ಪ್ರಶಸ್ತಿ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿಗಳು ಮತ್ತಿತರ ಗೌರವಗಳೆಲ್ಲವೂ ಕಲೆಯ ಕೈ ಹಿಡಿದು ಗೆದ್ದ ಮಂಜಮ್ಮ ಅವರ ಸೇವೆಗೆ ಸಂದ ಸತ್ಪಲಗಳು, ಕರ್ನಾಟಕ ಜಾನಪದ ಅಕಾಡೆಮಿಯ ಸದಸ್ಯೆಯಾಗಿ ಕಲಾ ಸಂಘಟನೆಗೆ ಕಾಣಿಕೆ ನೀಡಿದ ಮಂಜಮ್ಮ ಜೋಗುತಿ ಪ್ರಸ್ತುತ ಜಾನಪದ ಅಕಾಡೆಮಿಯ ಅಧ್ಯಕ್ಷೆಯಾಗಿ ಜಾನಪದ ಪೋಷಣೆ ಮತ್ತು ರಕ್ಷಣೆ ಕಾರ್ಯದಲ್ಲಿ ತಲ್ಲೀನರು ಛಲ ಪರಿಶ್ರಮ ಬದ್ದತೆಗಳು ಬದುಕನ್ನು ನಳ ನಳಿಸಿ ಗೆಲ್ಲಿಸಿ ಗೌರವಿಸಬಲ್ಲ ದೆಂಬ ಲೋಕ ನುಡಿಗೆ ಮಂಜಮ್ಮ ಜೋಗುತಿ ಅವರ ಈ ಕಲಾ ಪೂರ್ಣ ಬದುಕೇ ತಾಜಾ ಉದಾಹರಣೆ ಗೆ ಮಾತ್ರವಲ್ಲ ಸಾಧನ ಹಂಬಲಿಗರಿಗೆ ಪ್ರೇರಣೆಯೂ ಕೂಡ

ಹೆಚ್ ಲಿಂಗಮ್ಮ ಲೇಖಕಿ ✍️ ಬಳ್ಳಾರಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button