ವಿದ್ಯುತ್ ಕಳ್ಳತನ ಮಾಡಿದರೆ ಕಾನೂನು ಪ್ರಕಾರ ಸೂಕ್ತ ಕ್ರಮ – ಶ್ರೀ ಉಮೇಶ ಸೊಲ್ಲಾಪುರ ಎಚ್ಚರಿಕೆ.

ಇಂಡಿ ಡಿಸೆಂಬರ್.20

ರಾತ್ರಿ ಸಮಯದಲ್ಲಿ ವಿದ್ಯುತ್ ಕಂಬಗಳ ಮೂಲಕ ನೇರವಾಗಿ ವಾಯರ್ ಮೂಲಕ ಕದ್ದು ,ಹುಕ್ಕು ಹಾಕಿ, ವಿದ್ಯುತ್ ಕಳ್ಳತನ ಮಾಡುತ್ತಿರುವುದೂ ಮಹಾ ಅಪರಾಧವಾಗಿದೆ ಎಂದು ಹೆಸ್ಕಾಂ ನಾದ ಗ್ರಾಮೀಣ ಶಾಖೆಯ ಶಾಖಾಧಿಕಾರಿಗಳಾದ ಶ್ರೀ ಉಮೇಶ ಸೊಲ್ಲಾಪುರ ಸಾರ್ವಜನಿಕರಿಗೆ ಅರಿವು ಮೂಡಿಸಿದರು.ಅವರು ತಾಲೂಕಿನ ಅಜು೯ಣಗಿ ಬಿಕೆ ಹಾಗೂ ಅಜು೯ಣಗಿ ಕೆಡಿ ಗ್ರಾಮಗಳಿಗೆ ತೆರಳಿ ವಿದ್ಯುತ್ ಬಾಕಿ ವಸೂಲಿ ಹಾಗೂ ಅನಧಿಕೃತ ವಿದ್ಯುತ್ ಕಾರ್ಯ ಚರಣೆಯಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯ ಕ್ರಮದಲ್ಲಿ ಮಾತನಾಡಿದರು.ಕಳ್ಳತನದಿಂದಾಗಿ ವಿದ್ಯುತ್ ಪೋಲಾಗಿ ನಮ್ಮ ಇಲಾಖೆಗೆ ಹೆಚ್ಚಿನ ಹೊರೆ ಬೀಳುತ್ತಿರುವುದರಿಂದ ವಿದ್ಯುತ್ ಕಳ್ಳತನ ಮಾಡಬಾರದು. ಒಂದು ವೇಳೆ ವಾಮ ಮಾರ್ಗದಿಂದ ವಿದ್ಯುತ್ ಬಳಕೆ ಮಾಡಿದರೆ ಸೂಕ್ತ ಕಾನೂನು ಕ್ರಮ ಕೈಗೊಂಡು ಭಾರಿ ದಂಡ ವಿಧಿಸಲಾಗುವುದು. ಆದ್ದರಿಂದ ದಯವಿಟ್ಟು ಯಾರು ವಿದ್ಯುತ್ ಕಳ್ಳತನ ಮಾಡಲು ಮುಂದಾಗಬಾರದು ಎಂದರು.ಈ ವೇಳೆ ಅನಧಿಕೃತವಾಗಿ ಬಳಕೆ ಮಾಡುತ್ತಿದ್ದ ವಾಟರ್ ಹೀಟರ್ ಹಾಗೂ ವಾಯರ್ ವಶ ಪಡಿಕೊಂಡರು. ಇದರ ಜೊತೆಯಲ್ಲಿ ಗ್ರಾಮೀಣ ಭಾಗದ ಜನರಿಗೆ ವಿದ್ಯುತ್ ಬಳಕೆ ಕುರಿತು ಅರಿವು ಮೂಡಿಸಿದರು.ಕಾರ್ಯ ಚರಣೆಯಲ್ಲಿ ನಾದ ಶಾಖೆಯ ಶಾಖಾಧಿಕಾರಿಗಳಾದ ಶ್ರೀ ಉಮೇಶ ಸೊಲ್ಲಾಪುರ.ಮಹಾಂತೇಶ ಇಂಡಿ.ಬೊಗೇಶ ಶಿರಶ್ಯಾಡ.ಆರೀಫ ಇನಾಮದಾರ.ಶಿವಲಿಂಗ ತೆಗ್ಗೆಳ್ಳಿ.ಸಂತೋಷ ರಾವೂರ.ಶರಣು ಹೊಸೂರ.ಸಾಹೇಬಗೌಡ ತಾವರಖೇಡ.ಅವಿನಾಶ ಗೊಂದಳಿ.ಸಂತೋಷ ಬಡಿಗೇರ.ಗೌಡಪ್ಪ ಬಿರಾದಾರ ಹಾಗೂ ಇತರೆ ಸಿಬ್ಬಂದಿಗಳು ಈ ಕಾಯಾ೯ ಚರಣೆಯಲ್ಲಿ ಭಾಗವಹಿಸಿದ್ದರು.

ತಾಲೂಕ ವರದಿಗಾರರು:ಶಿವಪ್ಪ.ಬಿ.ಹರಿಜನ.ಇಂಡಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Your email address will not be published. Required fields are marked *

Back to top button