ಬಾಲಕಿಯರಿಗೆ ಅಪರಾಧ ತಡೆ ಅರಿವು ಮೂಡಿಸುವ ಕಾರ್ಯಕ್ರಮ.
ಕಮಲಾಪುರ ಡಿಸೆಂಬರ್.20

ಹೊಸಪೇಟೆ ವ್ಯಾಪ್ತಿಗೆ ಬರುವ ಕಮಲಾಪುರದ ಬಾಲಕಿಯರ ಪ್ರೌಢ ಶಾಲೆಯಲ್ಲಿ ಮತ್ತು ಅಪರಾಧ ತಡೆ ಮಾಸಾಚರಣೆ ಅಂಗವಾಗಿ ಬಸ್ ನಿಲ್ದಾಣದ, ಅಂಬೇಡ್ಕರ್ ಸರ್ಕಲ್, ಮತ್ತು ಶ್ರೀ ಕೃಷ್ಣ ದೇವರ ಸರ್ಕಲ್ ನಲ್ಲಿ ಅಪರಾಧಗಳ ಬಗ್ಗೆ ಅರಿವು ಮೂಡಿಸಲಾಯಿತು.ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢ ಶಾಲೆಯಲ್ಲಿ ಈ ಕುರಿತು ಪಿಎಸ್ಐ ಜಯಲಕ್ಷ್ಮಿ ಮಾತನಾಡಿ ಪ್ರತಿಯೊಂದು ಅಪರಾಧಗಳನ್ನು ಪೊಲೀಸರೇ ತಡೆ ಗಟ್ಟಲು ಆಗುವುದಿಲ್ಲ, ನಮ್ಮ ಜೊತೆಗೆ ಸಾರ್ವಜನಿಕರು ಕೈಜೋಡಿಸಿ ಸಹಕಾರ ನೀಡಬೇಕು ಎಂದು ಮನವಿ ಮಾಡುತ್ತಾ ಯಾವುದೇ ಆಮಿಷಗಳಿಗೆ ಬಲಿಯಾಗದೆ ಜಾಗೃತರಾಗಬೇಕು.ಅನುಮಾನ ಬಂದಲ್ಲಿ 112 (ERSS )ಗೆ ಕರೆ ಮಾಡಬೇಕು ಅಥವಾ ನೇರವಾಗಿ ಪೊಲೀಸ್ ಸ್ಟೇಷನ್ ಗೆ ಬಂದು ತಿಳಿಸಬೇಕು. ಮುಖ್ಯವಾಗಿ ಶಾಲಾ ವಿದ್ಯಾರ್ಥಿನಿಯರಿಗೆ ಯಾರಾದರೂ ಅಪರಿಚಿತರು ಚಾಕ್ಲೇಟ್ ಕೊಟ್ಟರೆ ತಿನ್ನಬಾರದು, ಹಾಗೂ ಯಾವುದಾದರೂ ತಿನ್ನುವ ಆಹಾರ ಕೊಟ್ಟರೂ ಕೂಡ ತಿನ್ನಬಾರದು. ಇದಲ್ಲದೆ ಎಲ್ಲಿಯಾದರೂ ಪ್ರಯಾಣಿಸುವಾಗ ನಿಮ್ಮ ಒಡವೆಗಳನ್ನು ಮೈಯಲ್ಲಿ ಹಾಕಿ ಕೊಳ್ಳಬೇಕು ಅದನ್ನು ಬಿಟ್ಟು ವೆನಿಟಿ ಬ್ಯಾಗ್ ನಲ್ಲಿ ಇಟ್ಟು ಕೊಂಡರೆ ಕಳ್ಳತನ ಆಗುವ ಸಂಭವ ಇರುತ್ತದೆ. ಇನ್ನು ನಿಮ್ಮ ಸಂಬಂಧಿಕರು ಚಿಕ್ಕ ವಯಸ್ಸಿನಲ್ಲೇ ಮದುವೆಗೆ ಒತ್ತಾಯಿಸಿದರೆ ಕೂಡಲೆ ನಮಗೆ ತಿಳಿಸಬೇಕು ಎಂದರು. ಕಾರಣ ಹೆಣ್ಣಿಗೆ 18 ರ ನಂತರ ಗರ್ಭಕೋಶ ಬೆಳೆಯುತ್ತದೆ ಆಗ ಮದುವೆ ಯಾಗುವುದು ಸೂಕ್ತ ಎಂದು ಸಲಹೆ ನೀಡಿದರು.ಈ ಸಂದರ್ಭದಲ್ಲಿ ಕಮಲಾಪುರ ಪೊಲೀಸ್ ಠಾಣೆಯ ಪಿಎಸ್ಐ ಜಯಲಕ್ಷ್ಮಿ, ಎಎಸ್ಐ ಜಿ ತಿಪ್ಪೇಸ್ವಾಮಿ, ಪೊಲೀಸ್ ಠಾಣೆ ಸಿಬ್ಬಂದಿಗಳು ಹಾಗೂ ಆಟೋ ಚಾಲಕರ ಸಂಘದ ಅಧ್ಯಕ್ಷರಾದ ಕೃಷ್ಣ ಇತರರಿದ್ದರು.
ತಾಲೂಕ ವರದಿಗಾರರು:ಮಾಲತೇಶ್.ಶೆಟ್ಟರ್.ಹೊಸಪೇಟೆ