ಗೊಂಧಳಿಪುರಕ್ಕೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿದ – ಶಾಸಕ ಹೆಚ್.ಆರ್.ಗವಿಯಪ್ಪ.
ಹೊಸಪೇಟೆ ಡಿಸೆಂಬರ್.20

ನಗರದ 23ನೇ ವಾರ್ಡ್ ಕಾರಿಗನೂರಿಗೆ ಸಂಬಂಧಿಸಿದ ಸರ್ವೇ ನಂಬರ್ 37 ರಲ್ಲಿ ಗೊಂಧಳಿ ಸಮಾಜದ 100 ಮನೆಗಳಿಗೆ ಉಚಿತ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆಗೆ ವೈಯಕ್ತಿಕ ಹಣ ಖರ್ಚು ಮಾಡಿ ಮಾನವೀಯತೆ ಮೆರೆದ ಶಾಸಕ ಹೆಚ್ ಆರ್ ಗವಿಯಪ್ಪ. 23.ನೇ ವಾರ್ಡ್ಗೆ ಸಂಬಂಧವಿರುವ ಮಲಪನ ಗುಡಿ ಮತ್ತು ಕಾರಿಗನೂರಿಗೆ ಮಧ್ಯೆ ಇರುವ ಗೊಂಧಳಿ ಸಮಾಜದ 100 ಮನೆಗಳಿದ್ದು. ಇಲ್ಲಿ ವಾಸವಾಗಿದ್ದು ಸುಮಾರು ವರ್ಷಗಳ ಕಾಲ ವಿದ್ಯುತ್ ಮತ್ತು ನೀರಿನ ಕೊರತೆಯಿಂದ ಬಳಲುತ್ತಿದ್ದ ಸಮಾಜಕ್ಕೆ, ಆಲಮಟ್ಟಿ ಡ್ಯಾಮ್ ನಿಂದ ಜಿಂದಾಲ್ ಕಂಪನಿಗೆ ಈ ರಸ್ತೆಯಲ್ಲಿ ಹಾದು ಹೋಗಿರುವ ನೀರಿನ ಪೈಪ್ ನಲ್ಲಿ ನೀರು ಕೊಡಲು ಜಿಂದಾಲ್ ಕಂಪನಿಯ ಆಡಳಿತ ವರ್ಗದವರ ಜೊತೆ ಮಾತನಾಡಿ ಈ ಸಮಾಜಕ್ಕೆ ನೀರಿನ ಕೊರತೆಯನ್ನು ನೀಗಿಸಿದ್ದಾರೆ. ಇನ್ನೂ ಗೊಂಧಳಿ ಸಮಾಜ ವಾಸಿಸುವ ಸ್ಥಳಕ್ಕೆ ಗೊಂಧಳಿಪುರ ಎಂದು ಹೊಸದಾಗಿ ನಾಮಕರಣ ಮಾಡಿದರು.ಸಂಜೆಯ ಈ ಕಾರ್ಯಕ್ರಮಕ್ಕೆ ಡೊಳ್ಳು, ಗೊಂಧಳಿ ಪದ, ಇನ್ನಿತರ ಕಲಾ ತಂಡದೊಂದಿಗೆ ಶಾಸಕರನ್ನು ಬರ ಮಾಡಿಕೊಂಡರು.ಈ ಕುರಿತು ಶಾಸಕ ಗವಿಯಪ್ಪ ಮಾತನಾಡಿ ಗೊಂಧಳಿ ಹಾಡು ಬಹುತೇಕ ರಾಜ್ಯಗಳಲ್ಲಿ ಇದ್ದು ಇದು ಸಂಸ್ಕೃತಿಯನ್ನು ಎತ್ತಿ ಹಿಡಿಯುತ್ತದೆ ಈ ಹಾಡಿನ ಮೂಲಕ ಸಮಾಜಕ್ಕೆ ಸಂಸ್ಕಾರದ ನಡೆ ತೋರಿಸುತ್ತದೆ. ಗೊಂಧಳಿ ಕಲೆ ದೇವಿಯ ಸ್ವರೂಪವೇ ಹೊರತು ಮತ್ತೇನು ಅಲ್ಲ ಇದರ ಜೊತೆಗೆ ಸಮಾಜದವರು ಶಿಕ್ಷಣಕ್ಕೆ ಒತ್ತು ಕೊಡಬೇಕು ಆಗ ಮಾತ್ರ ಅಭಿವೃದ್ಧಿ ಸಾಧ್ಯ ಎಂದರು. ನಿಮ್ಮ ಜೊತೆಗೆ ನಾವು ಮತ್ತು ನಮ್ಮ ಕಾಂಗ್ರೆಸ್ ಸರ್ಕಾರ ಸದಾ ಇರುತ್ತದೆ ನಿಮ್ಮಲ್ಲಿರುವ ಈ ಸಂತೋಷ ಒಗ್ಗಟ್ಟು ನೋಡಿ ನನಗಿರುವ ಒತ್ತಡ ಅದೆಷ್ಟೋ ಕಡಿಮೆಯಾಗಿದೆ ಮತ್ತು ಖುಷಿ ಕೊಟ್ಟಿದೆ ಎಂದು ಹೇಳಿದರು. ಇದೇ ರೀತಿಯಾಗಿ ಹೊಸಪೇಟೆ ತಾಲೂಕಿನ ಪ್ರತಿ ಹಳ್ಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕೆಂದು ಈಗಾಗಲೇ ನಾವು ನಿರ್ಧರಿಸಿದ್ದೇವೆ. ನಮ್ಮ ಮಾತಿಗೆ ಬೆಲೆ ಕೊಟ್ಟು ಕಾರ್ಯ ನಿರ್ವಹಿಸಿದ ಜಿಲ್ಲಾಧಿಕಾರಿ ಎಂ ಎಸ್ ದಿವಾಕರ್ ಅವರಿಗೆ ಅಭಿನಂದನೆಗಳನ್ನು ತಿಳಿಸುವ ಮೂಲಕ ನಾನು ನಿಮ್ಮಲ್ಲಿ ಮನವಿ ಮಾಡಿ ಕೊಳ್ಳುವುದೇನೆಂದರೆ, ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನೀಡಿರುವ ಗ್ಯಾರಂಟಿಗಳನ್ನು ಸರಿಯಾಗಿ ಬಳಸಿಕೊಳ್ಳಿ ಎಂದು ಸಲಹೆ ನೀಡಿದರು. ಈ ಸಂಬಂಧ ಶ್ರೀ ಧರ್ಮಸ್ಥಳ ಮಂಜುನಾಥ ಸಂಸ್ಥೆಯ ಅಧಿಕಾರಿ ಉಪೇಂದ್ರ ಕುಡಿಯುವ ನೀರಿನ ವ್ಯವಸ್ಥೆ ಇರುವ ಇಲ್ಲಿಗೆ ಶುದ್ಧ ನೀರಿನ ಘಟಕ ನಿರ್ಮಿಸಿ ಒಂದು ಉದ್ಯೋಗವನ್ನು ಕಲ್ಪಿಸಿ ಕೊಡುತ್ತೇವೆ ಎಂದು ಭರವಸೆ ಕೊಟ್ಟರು.ಈ ಸಂದರ್ಭದಲ್ಲಿ ನಗರಸಭೆ ಆಯುಕ್ತರಾದ ಬಂಡಿ ವಡ್ಡರ್,ಸಮಾಜದ ಗೌಡ ನಾರಾಯಣ ಭರತ್ ಪಾಟೀಲ್, ದುರೇಂದ್ರ ಪಾಯಕ್, ಕೃಷ್ಣಾ ಬೋಲ್ಕ,ನಗರಸಭೆ ಅಧಿಕಾರಿಗಳು, ಮಾಳಗಿ ನರಸಪ್ಪ ಇಂಗಳಗಿ,ಸಂಕ್ಲಾಪುರ ಶಂಕರಣ್ಣ,ಮರಿಸ್ವಾಮಿ,ನಗರ ಸಭೆ ಎ ಇ ಇ ಸತೀಶ್,ಬಾಬು ಸಾಬ್, ಜಗದೀಶ್ ಮಲಪನಗುಡಿ, ಇತರರು ಇದ್ದರು.
ತಾಲೂಕ ವರದಿಗಾರರು:ಮಾಲತೇಶ್.ಶೆಟ್ಟರ್.ಹೊಸಪೇಟೆ