ಇಂದು ಧನ್ನೂರು ಗ್ರಾಮ ಪಂಚಾಯಿತಿ ನೂತನ ಕಟ್ಟಡ ಹಾಗೂ ಸಮುದಾಯ ಭವನ ಉದ್ಘಾಟನೆ.
ಧನ್ನೂರು ಡಿಸೆಂಬರ್.20

ಹುನಗುಂದ ತಾಲೂಕಿನ ಸಮೀಪದ ಧನ್ನೂರ ಗ್ರಾಮದಲ್ಲಿ ಡಿ.೨೧ ರಂದು ಗುರುವಾರ ಬೆಳಿಗ್ಗೆ ೧೧.ಗಂಟೆಗೆ ಗ್ರಾಮ ಪಂಚಾಯತ ನೂತನ ಕಟ್ಟಡ ಹಾಗೂ ಸಮುದಾಯ ಭವನ ಉದ್ಘಾಟನೆ ಸಮಾರಂಭ ಜರುಗಲಿದೆ.ಕೂಡಲ ಸಂಗಮದ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳು ಮತ್ತು ಬಿಲ್ ಕೆರೂರದ ಸಿದ್ದಲಿಂಗ ಶಿವಾಚಾರ್ಯರು ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಲಿದ್ದಾರೆ.ಶಾಸಕ ವಿಜಯಾನಂದ ಕಾಶಪ್ಪನವರ ಅಧ್ಯಕ್ಷತೆಯನ್ನು ವಹಿಸಿಕೊಂಡು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು.ಬಾಗಲಕೋಟ ಉಸ್ತುವಾರಿ ಹಾಗೂ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪೂರ ಜ್ಯೋತಿ ಬೆಳಗಿಸಲಿದ್ದು.ಗ್ರಾಂ.ಪಂ ಅಧ್ಯಕ್ಷೆ ಸಂಗಮ್ಮ ಶಿರಹಟ್ಟಿ ಉಪಸ್ಥಿತಿಯನ್ನು ವಹಿಸಲಿದ್ದಾರೆ.ಸಂಸದ ಪಿ.ಸಿ.ಗದ್ದಿಗೌಡರ,ವಿಧಾನ ಪರಿಷತ್ ಸದಸ್ಯರಾದ ಸುನೀಲಗೌಡ ಪಾಟೀಲ,ಪಿ.ಎಚ್.ಪೂಜಾರಿ,ಹನಮಂತ ನಿರಾಣ ,ಪ್ರಕಾಶ ಹುಕ್ಕೇರಿ,ಗ್ರಾ.ಪಂ ಉಪಾಧ್ಯಕ್ಷ ಎನ್.ಕೆ.ಮುಲ್ಲಾ,ಜಿಲ್ಲಾ ಉಸ್ತುವಾರಿ ಕಾರ್ಯದರ್ಶೀ ಮೊಹಮ್ಮೊದ ಮೊಹಿಸಿನ್,ಜಿಲ್ಲಾಧಿಕಾರಿ ಜಾನಕಿ,ಕೆ.ಎಂ..ಜಿ.ಪಂ ಸಿಇಓ ಶಶಿಧರ ಕುರೇರ,ಎಸ್.ಪಿ ಅಮರನಾಥರಡ್ಡಿ,ವಾಯ್,ಜಿ.ಪಂ ಉಪ ಕಾರ್ಯದರ್ಶಿ ಅಮರೇಶ ನಾಯಕ,ಮುಖ್ಯ ಯೋಜನಾಧಿಕಾರಿ ಪುನಿತ್.ಬಿ.ಆರ್.ತಾ.ಪಂ ಇ.ಓ ಮುರಳೀಧರ್ ದೇಶಪಾಂಡೆ,ತಾ.ಪಂ ಎಡಿ ಮಹಾಂತೇಶ ಕೋಟಿ ಹಾಗೂ ಗ್ರಾ.ಪಂ ಸರ್ವ ಸದಸ್ಯರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ ಹುನಗುಂದ