ಮರೋಳ ಜಾಕ್ ವೆಲ್ ನಲ್ಲಿ ಬಟನ್ ಒತ್ತು ಮೂಲಕ ಕಾಲುವೆಗೆ ನೀರು ಹರಿಸಿದ – ಶಾಸಕ ಕಾಶಪ್ಪನವರ
ಹುನಗುಂದ ಡಿಸೆಂಬರ್.20

ರಾಮಥಾಳ ಮರೋಳ ಏತ ನೀರಾವರಿಯ ಕಾಲುವೆಗೆ ನೀರು ಹರಿಸುವಂತೆ ಒತ್ತಾಯಿಸಿ ಕಳೆದ ಒಂದು ವಾರದಿಂದ ನಡೆಸುತ್ತಿದ್ದು ರೈತರ ಹೋರಾಟಕ್ಕೆ ಕೊನೆಗೂ ಸರ್ಕಾರ ಸ್ಪಂದಿಸಿ ಡಿ.೨೦ ರಿಂದ ಡಿ.೨೪ ರವರಗೆ ೫ ದಿನಗಳ ಕಾಲ ರೈತರ ಜಮೀನಗಳಿಗೆ ನೀರು ಹರಿಸಲು ಆದೇಶ ಮಾಡಿದ ಬೆನ್ನಲ್ಲೆ ಬುಧವಾರ ಶಾಸಕ ವಿಜಯಾನಂದ ಕಾಶಪ್ಪನವರ ಮರೋಳ ಸಮೀಪದ ಜಾಕ್ವೆಲ್ನಲ್ಲಿ ಬಟನ್ ಒತ್ತುವ ಮೂಲಕ ರೈತರ ಜಮೀನಿಗೆ ನೀರು ಹರಿಸಿದರು.ಇದೇ ವೇಳೆ ಶಾಸಕ ವಿಜಯಾನಂದ ಕಾಶಪ್ಪನವರ ಸುದ್ದಿಗಾರರೊಂದಿಗೆ ಮಾತನಾಡಿ ಹುನಗುಂದ ತಾಲೂಕಿನ ಬಹತೇಕ ಭೂಮಿಗಳು ಒಣ ಬೇಸಾಯವನ್ನು ಹೊಂದಿದ್ದರಿಂದ ನನ್ನ ತಂದೆಯವರಾದ ದಿ.ಎಸ್.ಆರ್.ಕಾಶಪ್ಪನವರ ಕಾಲಾವಧಿಯಲ್ಲಿ ರಾಮಥಾಳ ಮರೋಳ ಏತ ನೀರಾವರಿಯ ಮೊದಲ ಹಂತದಲ್ಲಿ ೧೪,೫೦೦ ಹೆಕ್ಟೇರ್ ಪ್ರದೇಶಕ್ಕೆ ಕಾಲುವೆ ನೀರಾವರಿ ಮತ್ತು ಕಳೆದ ನನ್ನ ಅವಧಿಯಲ್ಲಿ ೬೦ ಸಾವಿರ ಹೆಕ್ಟೇರ್ ಪ್ರದೇಶಕ್ಕೆ ಹನಿ ನೀರಾವರಿ ಯೋಜನೆಯ ಮೂಲಕ ನೀರಾವರಿ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು.ಸಧ್ಯ ಮಳೆಯ ಕೊರತೆಯಿಂದ ಕಾಲುವೆ ನೀರು ಹರಿಸುವುದ್ದನ್ನು ಬಂದ್ ಮಾಡಿದ್ದರಿಂದ ರೈತರ ಹಲವಾರು ಬೆಳೆಗಳು ಒಣಗುತ್ತವೆ ರೈತರ ಜಮೀನಗಳಿಗೆ ಕಾಲುವೆಯ ಮೂಲಕ ನೀರು ಹರಿಸುವಂತೆ ರೈತ ಸಂಘದಿಂದ ಮನವಿ ಒತ್ತಡ ಮಾಡಿದ್ದರಿಂದ ನಾನು ಕೂಡಾ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮತ್ತು ಡಿಸಿಎಂ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ ಅವರಲ್ಲಿ ರೈತರ ಅನೇಕ ಬೆಳೆಗಳು ಒಣಗುತ್ತಿವೆ ರೈತರ ನೆರವಿಗೆ ಬರುವಂತೆ ಒತ್ತಾಯಿಸಿದರಿಂದ ರೈತರ ಹಿತ ದೃಷ್ಟಿಯಿಂದ ನಮ್ಮ ಸರ್ಕಾರ ಇನ್ನೂ ಎರಡು ಬಾರಿ ರೈತರಿಗೆ ಕಾಲುವೆ ಮೂಲಕ ನೀರು ಹರಿಸಬೇಕೆಂದು ಆದೇಶ ಮಾಡಿದ್ದು ಡಿ.೨೦ ರಿಂದ ೨೪ ರವರಗೆ ಕಾಲುವೆಗೆ ನೀರು ಹರಿಸಲಾಗುತ್ತದೆ.ಈಗಾಗಲೇ ಕಾಲುವೆಗಳು ಸಂಪೂರ್ಣ ಶಿಥಿಲ ಗೊಂಡಿದ್ದು ಅವುಗಳ ದುರಸ್ಥಿ ಪಡಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.ಇನ್ನೂ ಕೊಪ್ಪಳ ಏತ ನೀರಾವರಿಯಲ್ಲಿ ೮೫೦೦ ಹೆಕ್ಟೇರ್ ಪ್ರದೇಶಕ್ಕೆ ಮತ್ತು ನಂದವಾಡಗಿ ಏತ ನೀರಾವರಿ ೨೬ ಗ್ರಾಮಗಳ ರೈತರ ಜಮೀನಗಳಿಗೆ ನೀರು ಒದಗಿಸುವಂತೆ ಸರ್ಕಾರದ ಮೇಲೆ ಪದೇ ಪದೇ ಒತ್ತಡ ಏರುತ್ತಾ ಬಂದಿದ್ದರಿಂದ ಸಧ್ಯ ಕಾಮಗಾರಿ ಪ್ರಗತಿಯಲ್ಲಿವೆ.ಹನಿ ನೀರಾವರಿ ಯಶಸ್ವಿ ಯಾಗಿದ್ದರೂ ಕೂಡ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಹನಿ ನೀರಾವರಿ ಕಾಮಗಾರಿ ಕಳಪೆ ಯಾಗಿದೆ ಎಂದು ರೈತರಲ್ಲದವರನ್ನು ಕರೆದು ಕೊಂಡು ಬಂದು ಪ್ರತಿಭಟನೆ ಮಾಡಿಸಿ ತನಿಖೆ ಮಾಡಿದರೂ ಯಾವದೇ ಪ್ರಯೋಜನವಾಗಲಿಲ್ಲ.ಇನ್ನೂ ಕಾಲುವೆಯಲ್ಲಿ ಬೆಳದ ಕಂಠಿ ಮತ್ತು ಹೂಳು ಎತ್ತಲು ಅನುದಾನ ಕೊಡಲಿಲ್ಲ ಎಂದು ಆರೋಪಿದರು. ಕಾಲುವೆಗೆ ಎರಡು ಬಾರಿ ನೀರು ಹರಿಸವಂತೆ ಸರ್ಕಾರ ಆದೇಶಿಸಿದ್ದನ್ನು ಸ್ವಾಗತಿಸಿದ ರೈತ ಸಂಘದ ಮುಖಂಡರಾದ ಗುರು ಗಾಣಗೇರ ಮತ್ತು ಬಸವರಾಜ ಪೈಲ ಸರ್ಕಾರ ಮತ್ತು ಶಾಸಕರಿಗೆ ಅಭಿನಂದನೆಯನ್ನು ಸಲ್ಲಿಸದರು.ಮುಖಂಡರಾದ ಶಿವಾನಂದ ಕಂಠಿ,ಮಹಾಂತೇಶ ಕಾಶಪ್ಪನವರ,ಸಂಗಣ್ಣ ಗಂಜೀಹಾಳ,ವಿರೇಶ ಹುಲ್ಲಳ್ಳಿ,ಯಲಗೂರದಪ್ಪ ಗೌಡರ,ಹನಮಗೌಡ ಗೌಡರ,ಮಲ್ಲಪ್ಪ ಅಂಬಿಗೇರ,ರಮೇಶ ರಕ್ಕಸಗಿ,ಬಸವನಗೌಡ ಪೊಲೀಸ್ಪಾಟೀಲ,ಸಂಗನಬಸಪ್ಪ ಶಿವಮೂರ್ತಿಮಠ,ಶಿವಪ್ಪ ಕಟಗಿ,ಸಂಗಪ್ಪ ಗಾಳಿ,ಗುರಲಿಂಗಪ್ಪ ಸೊಂಠಿ,ವಿಜಯ ಮಹಾಂತೇಶ ಗದ್ದನಕೇರಿ,ಅಮರೇಶ ನಾಗೂರ,ಕೃಷ್ಣ ಜಲ ಭಾಗ್ಯ ನಿಗಮದ ಎಇಇ ಕಿತ್ತೂರ ಹಾಗೂ ಸಿಬ್ಬಂದಿಗಳು ಸೇರಿದ್ದಂತೆ ಅನೇಕರು ಇದ್ದರು.
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ ಹುನಗುಂದ