ಹದ್ದು ಮೀರಿದ ಪಿ.ಡ್ಬ್ಲ್ಯ.ಡಿ ಎ.ಇ.ಇ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದ ವಿರುದ್ದ ಶಾಸಕರು ಕ್ರಮ ಜರುಗಿಸುವರೋ….?

ಹನುಮನಹಳ್ಳಿ ಡಿಸೆಂಬರ್.21

ವಿಜಯನಗರ ಜಿಲ್ಲೆಯ ಕೂಡ್ಲಿಗಿ ಕ್ಷೇತ್ರದ ಕೊಟ್ಟೂರು ಹೊಸ ತಾಲೂಕಾ ವ್ಯಾಪ್ತಿಗೆ ಬರುವ ಹನುಮನಹಳ್ಳಿ ಗ್ರಾಮದಿಂದ ಕೊಟ್ಟೂರಿನವರೆಗೆ ‘ ರಸ್ತೆ ಪ್ಯಾಚ್ ವರ್ಕ್ ‘ ಕಳಪೆ ಕಾಮಗಾರಿ ನಡೆದಿದೆ.ಇದರ ಬಗ್ಗೆ ಸಾವ೯ಜನಿಕರು ಪಿಡಬ್ಲ್ಯೂಡಿ ಅಧಿಕಾರಿ ವೆಂಕಟರಮಣ ರವರಿಗೆ ಸಾವ೯ಜನಿಕರು ಪೋನ್ ಕರೆಯ ಮೂಲಕ ಸಾವ೯ಜನಿಕರು ತಿಳಿಸಿದರೆ, ಆ ಭಾಗಕ್ಕೆ ಸಂಬಂಧಿಸಿದ ನಾಗೇಶ್ ಇಂಜಿನೀಯರ್ ಮತ್ತು ಸಹಾಯಕ ಕಾಯ೯ ನಿವಾ೯ಹಕ ಅಭಿಯಂತರರು ಅಧಿಕಾರಿ ವೆಂಕಟರಮಣ ‘ಕ್ಯಾರೆ’ ಅನ್ನುತ್ತಿಲ್ಲವಂತೆ.ನೀವು “ದುಡ್ಡಿಗಾಗಿ ಈಗೆಲ್ಲಾ ಮಾಡುತೀರಂತೆ” ಅಲ್ಲಿನ ಜನಗಳೇ ‘ಸರಿ’ ಇಲ್ಲ ಎಂದು ನನಗೆ ನಾಗೇಶ್ ರವರು ಹೇಳಿದರು ಅಲ್ಲಿನ ಗುತ್ತಿಗೆದಾರರಾದ ಕಮಾರ್ ನಾಯಕ ರವರು ಹೇಳಿರುವರಂತೆ.ಇದಕ್ಕೆ ಅವರಿಗೆ ಏನು ತೋಚದೆ ಮಾಧ್ಯಮದವರಿಗೆ ತಿಳಿಸಿದರು.ನಾಗೇಶ್ ಇಂಜಿನೀಯರ್ ಅದು ಯಾವ ಘಳಿಗೆಯಲ್ಲಿ ಪಿಡಬ್ಲ್ಯೂಡಿ ಗೆ ಕಾಲ್ಲಿಟರೋ ಅಲ್ಲಿಂದ ಶನಿ ವಕ್ರದೃಷ್ಟಿ ಇವರ ಮೇಲೆ ಬಿದ್ದಿದೆ ಎಂದರೆ ತಪ್ಪಾಗಲಾರದು.

ಇವರು ಸುಮ್ಮ ಸುಮ್ಮನೆ ಇವರ ಮಾತಿನ ಶೈಲಿಯಿಂದ, “ದಾರಿಯಲ್ಲಿ ಹೋಗುವ ಧೂಳನ್ನು ಮೈ ಮೇಲೆ ಹಾಕಿ ಕೊಳ್ಳುವ ಹಾಗೆ” “ಸುಮ್ಮ ಸುಮ್ಮನೆ ಮೈಯೆಲ್ಲಾ ಪರಚಿ ಕೊಂಡವರಂತೆ” ಎಲ್ಲಾ ಸಮಸ್ಯೆಗಳನ್ನು ಅವರೇ ಸೃಷ್ಠಿ ಮಾಡಿ ಕೊಳ್ಳುವರಂತೆ. ಆ ಸಮಸ್ಯೆಗಳನ್ನು ಬಗೆ ಹರಿಸುವಲ್ಲಿ ಇವರು ಕೆಲವು ‘ಬುಡು ಬುಡಿಕೆ ‘ ಮಾತುಗಳನ್ನು ಮಾತನಾಡುತ್ತ, ಜನರನ್ನು ಮರಳು ಮಾಡುವರಂತೆ ಈ ಆಸ್ಸಾಮಿ. ಸಾವ೯ಜನಿಕರು ಏನೇ ಕೇಳಿದರೂ ದುಡ್ಡಿಗೆ ನಿರೀಕ್ಷೆ ಮಾಡುವರು ಎಂದು ಸಿಬ್ಬಂದಿಗಳ ಹತ್ತಿರ ಬಹಳ ಒಳ್ಳೆಯವರ ತರ ನಟನೆ ಮಾಡುತ್ತಾ, ಅವರು , ಇವರಿಗೆ ‘ ಫಿಟಿಂಗ್ ‘ ಮಾಡುತ್ತಾ ‘ಶಭಾಷ್’ ಎಂದು ತನ್ನಷ್ಟಕ್ಕೆ ತಾನೆ ಬೆನ್ನೂ ‘ಚಪ್ಪರಿಸಿ’ ಕೊಳ್ಳುತ್ತಾ ಬಹಳ ಒಳ್ಳೆಯವರಾಗೆ ತೋರಿಸಿ ಕೊಳ್ಳುವರಂತೆ ಎಂದು ಇವರ ವತ೯ನೆ ನೋಡಿದ ಕೆಲವರು ದಾರಿ ಹೋಕರು ತಮ್ಮ ಅಷ್ಟಕ್ಕೆ ತಾವೇ ಮಾತನಾಡಿ ಕೊಳ್ಳುತ್ತಾ ಹೋಗುವವರಂತೆ. ಸಾವ೯ಜನಿಕರು ಕಾಮಗಾರಿಗಳ ಬಗ್ಗೆ ಏನೇ ಕೇಳಿದರೂ, ನಮಗೆ ಏನು ಗೊತ್ತಿಲ್ಲ ನಾನು ಮೊನ್ನೆನ್ ಬಂದಿದ್ದೇನೆ ಕಳಪೆ ಕಾಮಗಾರಿ ಇದ್ದರೆ, ಕೆಲಸವನ್ನು ನಿಲ್ಲಿಸಿ ಎಂದು ಸಾವ೯ಜನಿಕರಿಗೆ ಹೇಳಿ “ನಾನು ಇದರಲ್ಲಿ ಒಂದು ರೂಪಾಯಿ ತಿಂದಿಲ್ಲ,” ನನಗೆ ಬಹಳ ಬೇಸರವಾಗಿದೆ ಎಂದು ಸಾವ೯ಜನಿಕರಿಗೆ ‘ನಾಮ ಹಚ್ಚುತ್ತಾ’ ಹೇಳಿ, ಗುತ್ತಿಗೆದಾರರಿಗೆ,ಇವರಿಂದ “ನನಗೆ ಸಾಕಾಗಿದೆ ನೀವು ಆದರೂ ಬುದ್ಧಿ ಕಲಿಸಿ “ಎಂದು ಗುತ್ತಿಗೆದಾರರ ಹತ್ತಿರ ತಮ್ಮ ‘ಬುರುಡೆ’ ಮಾತುಗಳಿಂದ ಬುರುಡೆ ಬಿಡುತ್ತಾ, ಗುತ್ತಿಗೆದಾರರಿಗೆ ಮತ್ತು ಸಾವ೯ಜನಿಕರಿಗೆ ಜಗಳ ಬಿಟ್ಟು, ನೋಡಿ ನಗುವುದರಲ್ಲಿ ನೀಸ್ಸಿಮ್ ರಂತೆ ಇವರು. ಒದೊಂದು ಸಲ ತಮ್ಮ ಬಣ್ಣದ ಮಾತುಗಳಿಂದ ‘ ಮಾಧ್ಯಮ ‘ ದರವರನ್ನು ಕೂಡ ಮರುಳು ಮಾಡುವರಂತೆ ಎಂದು ಇವರನ್ನು ನೋಡಿದ ಸಿಬ್ಬಂದಿಗಳು ಸಾವ೯ಜನಿಕರ ಹತ್ತಿರ ಮಾತನಾಡಿ ಕೊಳ್ಳುವರಂತೆ.

ಈ ಆಸ್ಸಾಮಿ ತಾನು ಮಾಡಬೇಕಾದ ಕೆಲಸವನ್ನು ನೆಟ್ಟಗೆ ಮಾಡದೇ ರಸ್ತೆ ‘ಪ್ಯಾಚಿಂಗ್’ ಡಾಂಬರೀಕರಣವನ್ನು ಪರಿಶೀಲನೆ ಮಾಡಲು ಈಗ ತಾನೇ ‘ಡ್ಯೂಟಿ’ಗೆ ಸೇರಿ ಕೊಡಿರುವ ಇಂಜಿನೀಯರ್ ನಾಗಜು೯ನ ನಾಯ್ಕರವರನ್ನು ಉದ್ದೇಶ ಪೂವ೯ಕವಾಗಿ ಕಳುಹಿಸಿ ಸಾವ೯ಜನಿಕರ ಹತ್ತಿರ ‘ಬಲಿಪಶು’ ಮಾಡಿರುವರಂತೆ. ಇವರಿಗೆ ‘ನೆಟ್ಟಗೆ’ಎಂ.ಬಿ ಬರೆಯಲು ಬರದಿದ್ದರೂ,ಬಹಳ ಚಾಣಾಕ್ಷತನ ದಿಂದ ತನ್ನ ಕೆಲಸವನ್ನು ಗಿಟ್ಟೀಸಿ ಕೊಳ್ಳುವುದರಲ್ಲಿ ಎತ್ತಿದ ಕೈಯಂತೆ. ಇವರು ತಮ್ಮ ಬಣ್ಣದ ಮಾತುಗಳಿಂದ ಯಾರನ್ನು ಬೇಕಾದರೂ ಮರಳು ಮಾಡುವರಂತೆ ಇವರು. ಈ ವರದಿಯನ್ನು ನೋಡಿದ ಮೇಲು ಶಾಸಕರಾದ ಶ್ರೀನಿವಾಸ್ ಎನ್.ಟಿ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಇಂತಹಾ ಅಧಿಕಾರಿಗಳು’ ಪಾಪ ‘ ಎಂದು ಸುಮ್ಮನಿರುವರೋ ಅಥವಾ ಕಾನೂನು ಕ್ರಮ ಜರುಗಿಸುವರೋ ಕಾದು ನೋಡೋಣ!

ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.ಸಿ ಕೊಟ್ಟೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button