ಸ್ವಕುಳಸಾಳಿ ಸಮಾಜದ ಬಗ್ಗೆ ಅತ್ಯಂತ ಅಭಿಮಾನ ಗೌರವ ಇಟ್ಟುಕೊಂಡ ಶಾಸಕರು.
ಮೊಳಕಾಲ್ಮುರು ಡಿಸೆಂಬರ್.21
![](https://i0.wp.com/sknewskannada.in/wp-content/uploads/2023/12/IMG-20231218-WA0030.jpg?resize=708%2C398&ssl=1)
ಮೊಳಕಾಲ್ಮುರು ಪಟ್ಟಣದಲ್ಲಿ ಜನಪ್ರಿಯ ಶಾಸಕರಾದ ಶ್ರೀ ಎನ್ ವೈ ಗೋಪಾಲಕೃಷ್ಣ ರವರು ಸ್ವಕುಳಸಾಳಿ ಸಮಾಜದ ವತಿಯಿಂದ ಆಯೋಜಿಸಲಾಗಿದ್ದ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಷಷ್ಠಿ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ಮಾನ್ಯ ಶಾಸಕರು ಸ್ವಕುಳಸಾಳಿ ಸಮಾಜದ ಜನರು ಬಾಳ ಬಡವರ ಇದ್ದಾರೆ ಯಾರೋ ವಿದ್ಯಾವಂತರು ಆಗಿರುವಂತವರು ಮಾತ್ರ ಒಬ್ಬರು ಮತ್ತು ಇಬ್ಬರ ಮೂವರು ವೈದ್ಯಧಿಕಾರಿಯಾಗಿ ನೌಕರಿಯಲ್ಲಿ ಇರುತ್ತಾರೆಂಬದು ನನಗೆ ಕಂಡು ಬರುತ್ತದೆ ಆದರೆ ಈ ಸಮಾಜದ ಕೂಲಿ ಕಾರ್ಮಿಕರ ಹೆಚ್ಚಾಗಿದ್ದು ನನಗೆ ಕಂಡು ಬರುತ್ತದೆ.
![](https://i0.wp.com/sknewskannada.in/wp-content/uploads/2023/12/IMG-20231218-WA0029.jpg?resize=708%2C398&ssl=1)
ನನ್ನ ಹತ್ತಿರ ಯಾರೇ ಆಗಲಿ ವೈಯಕ್ತಿಕವಾಗಿ ಕೆಲಸ ಕೇಳಲು ಬರುವುದಿಲ್ಲ ಆದರೂ ಇವರ ಒಳ್ಳೆ ಮನಸ್ಸುಗಳನ್ನು ನಾನು ನೋಡಿ ಈ ಸಮುದಾಯದ ಪರವಾಗಿ ಕೆಲಸ ಕೇಳದಿದ್ದರೆ ಕೂಡ ನನ್ನ ಸ್ವಂತ ಮನಸ್ಸಿನಿಂದ ಒಪ್ಪಿ ಹತ್ತು ಲಕ್ಷ ನನ್ನ ಸ್ವಂತ ಅನುದಾನದಲ್ಲಿ ಸ್ವಕಳಿಸಾಳಿ ಸಮಾಜದ ಬಾಂಧವರಿಗೆ ಭವನ ಮಾಡಿಸಲು ಬಿಸಿಎಂ ಇಲಾಖೆಯಲ್ಲಿ ಅಧಿಕಾರಿಗಳಿಗೆ ಹೇಳುತ್ತೇನೆ ಎಂದು ಶಾಸಕರು ಮಾತನಾಡಿದರು ಇಂತಹ ಒಳ್ಳೆ ಸಮಾಜದ ಜನರಿಗೆ ಅನುಕೂಲ ಮಾಡಿ ಕೊಡಬೇಕೆಂದು ನನ್ನ ಮನಸ್ಸು ಇರುತ್ತದೆ ಎಂದು ಎನ್ ವೈ ಗೋಪಾಲಕೃಷ್ಣ ಶಾಸಕರು ನೇರ ನುಡಿಯಾಗಿ ಮಾತನಾಡಿದರು ಈ ಸಂದರ್ಭದಲ್ಲಿ ಸಮಾಜದ ಮುಖಂಡರು ಮೊದಲಾದವರು ಉಪಸ್ಥಿತರಿದ್ದರು. ಎಂದು ವರದಿಯಾಗಿದೆ.
ತಾಲೂಕ ವರದಿಗಾರರು:ತಿಪ್ಪೇಸ್ವಾಮಿ.ಹೊಂಬಾಳೆ. ಮೊಳಕಾಲ್ಮುರು