ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮ.
ಇಂಡಿ ಡಿಸೆಂಬರ್.22

ಸಮಾಜದಲ್ಲಿ ಸಾಕಷ್ಟು ಅಪರಾಧಗಳು ನಡೆಯುತ್ತವೆ. ನಮ್ಮ ಘನ ಸರ್ಕಾರ ಅಪರಾಧಗಳನ್ನು ತಡೆಗಟ್ಟಲು ಕಾನೂನನ್ನು ಮಾಡಿದೆ. ಸರ್ಕಾರ ವಿಧಾನಸಭೆ ಮತ್ತು ಲೋಕಸಭೆ ಗಳಲ್ಲಿ ಕಾನೂನು ಮಾಡುವ ಅಧಿಕಾರ ಹೊಂದಿದೆ ಮಾಡಿದಂತ ಕಾನೂನನ್ನು ಜಾರಿಗೆ ತರ್ತಕಂತದ್ದು ನಮ್ಮ ನಾಗರಿಕ ಸಮಾಜದ ಕಾರ್ಯಾಂಗ ವ್ಯವಸ್ಥೆ. ಸಿವಿಲ್ ಲಾ, ಇರಬಹುದು ಕ್ರಿಮಿನಲ್ ಲಾ, ಇರಬಹುದು ಸಣ್ಣ ಕಾನೂನು ಇಂದ ದೊಡ್ಡ ಕಾನೂನು ರವರಿಗೆ ಸಣ್ಣ ಅಪರಾಧ ಹಿಡಿದು ದೊಡ್ಡ ಅಪರಾಧದವರಿಗೆ ಮುಖ್ಯವಾದ ಕೆಲವೊಂದು ಅಂಶಗಳ ಬಗ್ಗೆ ಹೇಳುತ್ತೇನೆಂದು . ಶ್ರೀ.ಜಗದೀಶ ಹೆಚ್.ಎಸ್. ಪೋಲಿಸ್ ಉಪಾಧಿಕ್ಷಕರು, ಇಂಡಿ, ಇವರು ನಗರದ ಪ್ರತಿಷ್ಠಿತ ಸಂಸ್ಥೆಯಾದ ಶ್ರೀ ಶಾಂತೇಶ್ವರ ವಿದ್ಯಾವರ್ಧಕ ಸಂಘದ ಶ್ರೀ ಶಾಂತೇಶ್ವರ ಪದವಿ ಪೂರ್ವ ಕಾಲೇಜು, ಹಾಗೂ ಶ್ರೀಮತಿ ಶಾಲಿನಿ ಮಾಣಿಚಂದ್ ದೋಶಿ ಮಹಿಳಾ ಪದವಿ ಪೂರ್ವ ಕಾಲೇಜು ಇಂಡಿ, ಪೊಲೀಸ್ ಇಲಾಖೆ ಇಂಡಿ, ಇವರ ಸಂಯುಕ್ತ ಆಶ್ರಯದಲ್ಲಿ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ.

ರಸ್ತೆ ಸುರಕ್ಷಾ ನಿಯಮಗಳು, ಸಾಮಾಜಿಕ ಜಾಲ ತಾಣಗಳಾದ , ವ್ಯಾಟ್ಸಪ್, ಫೇಸ್ಬುಕ್ , ಟ್ವಿಟ್ಟರ್ ಇರಬಹುದು ಸಾಮಾಜಿಕ ಜಾಲ ತಾಣಗಳಲ್ಲಿ ಸಂಬಂಧಪಡದ ಪೋಸ್ಟುಗಳಿಗೆ ಕಮೆಂಟ್ ಮಾಡುವುದಾಗಲಿ, ಅನಗತ್ಯ ಪೋಸ್ಟ್ಗಳು ಮಾಡೋದಾಗಲಿ ಇದೆ ಎಲ್ಲವೂ ಅಪರಾಧ. ಮೊಬೈಲ್ ನಲ್ಲಿ ಬರುವಂತಹ ಜಾಹೀರಾತುಗಳು, ಮೇಲ್ , ಆನ್ಲೈನ್ ಹಣಕಾಸಿನ ವಂಚಿನ ಬಗ್ಗೆ ಜಾಗೃತರಾಗಿ ಇರಬೇಕೆಂದು, ಹಾಗೂ ಎಟಿಎಂ ಕಾರ್ಡುಗಳ ವಂಚನೆ ಬಗ್ಗೆ , ಸಾರ್ವಜನಿಕ ಸ್ಥಳಗಳಲ್ಲಿ ಅವಶ್ಯಕ್ಕಿಂತ ಹೆಚ್ಚಿನ ಚಿನ್ನಾಭರಣ ಧರಿಸ ಬಾರದೆಂದು ಸರಗಳ್ಳತನ, ವಿದ್ಯಾರ್ಥಿಗಳಿಗೆ ರ್ಯಾಗಿಂಗ್ ಕಾಯ್ದೆ ಜಾರಿಯಲ್ಲಿರುವ ಬಗ್ಗೆ. ಪ್ರಮುಖವಾಗಿ ಮಾದಕ ವಸ್ತುಗಳೆಂದರೆ ನಮ್ಮನ್ನು ಮಾನಸಿಕವಾಗಿ ದೈಹಿಕವಾಗಿ ನಮ್ಮ ಸ್ಥಿಮತೆಯನ್ನು ಹಾಳು ಮಾಡುವ ಎಲ್ಲ ವಸ್ತುಗಳು ಮಾದಕ ವಸ್ತುಗಳು ಅವುಗಳಿಂದ ದೂರ ವಿರಬೇಕೆಂದು. ವಿದ್ಯಾರ್ಥಿಗಳಿಗೆ ಮೊದಲು ಮಾನವನಾಗು ಬೇಕು ನೀವೆಲ್ಲರೂ ಎಲ್ಲಾ ದುಶ್ಚಟಗಳಿಂದ ದೂರವಿರಿ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀ ಎಸ್.ಎಂ.ಎಮ್ಮೆ. ಪ್ರಾಚಾರ್ಯರು ಮಾತನಾಡಿ ವಿದ್ಯಾರ್ಥಿಗಳು ಯುವಕರು ಮಾದಕ ವ್ಯಸನಗಳಿಂದ ದೂರ ಇರಬೇಕು ಮಹಾ ವಿದ್ಯಾಲಯದಲ್ಲಿ ಇರುವಂತಹ ವಿದ್ಯಾರ್ಥಿಗಳು ತಾರುಣ್ಯಾವಸ್ಥೆಯಲ್ಲಿ ಇರುವರಿಂದ ಅವರಿಗೆ ದೈಹಿಕ ಬದಲಾವಣೆಗಳು ಮಾನಸಿಕವಾಗಿ ಸ್ಥಿರತೆಯನ್ನು ಹೊಂದಿರುವುದಿಲ್ಲ ಹಾಗಾಗಿ ಅವರು ಮಾದಕ ವ್ಯಸನದಿಂದ , ಲಿವರ್ ಗಳಿಗೆ ತೊಂದರೆಯಾಗಿ ಹೆಚ್ಚಿನ ಯುವಕರು ಬಲಿಯಾಗುವ ಸಾಧ್ಯತೆ ಹೆಚ್ಚಿದೆ.

ದೇಶ ವಿದೇಶಿ ಮಟ್ಟದ ಕ್ರೀಡಾಪಟುಗಳು ಸ್ಪೋರ್ಟ್ಸ್ ಗಳಲ್ಲಿ ಮಾದಕ ವ್ಯಸನಗಳನ್ನು ಮಾಡಿ ಆಟ ಆಡಿದರೆ ತಪಾಸಣೆಯಲ್ಲಿ ಕಂಡು ಹಿಡಿದು ನಂತರ ಅವರ ಪದಕಗಳನ್ನು ವಾಪಸ್ ಪಡೆದು ಕೊಳ್ಳವಂತಹ ಘಟನೆಗಳು ಹೆಚ್ಚಾಗುತ್ತಿವೆ. ಅದರಿಂದ ಮಾದಕ ವಸ್ತುಗಳಿಂದ ದೂರ ಇರಬೇಕೆಂದು ವಿದ್ಯಾರ್ಥಿಗಳಿಗೆ ಹೇಳಿದರು. ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಎ .ಬಿ .ಪಾಟೀಲ್ ಪ್ರಾಚಾರ್ಯರು , ಪಿ ಎಂ ಪಾಟೀಲ್, ಆರ್ ಎಸ್ ಬಿರಾದರ್,ಬಿ. ಆರ್.ದೆವಕತೆ .ವೇದಿಕೆ ಮೇಲೆ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶ್ರೀಧರ್ ಗೌಡ್ ಬಿರಾದಾರ, ಸುನಿಲ್ ಗಡಗಂಟಿ, ಎಂ.ಜಿ .ಹಿರೇಮಠ,ಎಂ ಕೆ ಪಾಟೀಲ್, ಆರ್.ಜಿ .ಪೂಜಾರಿ, ವಿಜು ರಾಠೋಡ ಎಂ ಜಿ ಮಠ, ಆರ್ ವಿ ಅಂಗಡಿ,ಎರಡು ಕಾಲೇಜಿನ ಉಪನ್ಯಾಸಕರು ಸಿಬ್ಬಂದಿ ವರ್ಗ ಎಮ್.ಜಿ.ಸಾವಳೆ ಪೋಲಿಸ್ ಸಿಬ್ಬಂದಿ, ಹಾಗೂ ಸುಮಾರು 600 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.ಕಾರ್ಯಕ್ರಮದ ನಿರೂಪಣೆಯನ್ನುಶ್ರೀ ಎಸ್. ವಿ .ಪಂಡಿತ, ಸ್ವಾಗತವನ್ನು ಎಸ್.ಎಸ್. ಈರಣ್ಣಕೆರಿ, ವಂದನಾರ್ಪಣೆಯನ್ನು ಎಸ್.ಎಸ್.ಡಬ್ಬಿಗರ ನಿರ್ವಹಿಸಿದರು.
ತಾಲೂಕ ವರದಿಗಾರರು:ಶಿವಪ್ಪ.ಬಿ.ಹರಿಜನ.ಇಂಡಿ