ನೀರು ಇಲ್ಲದೇ ಬಾಡುತ್ತಿರುವ ಬೆಳೆಗಳು – ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ ರೈತರಿಗೆ ನೀರು ಹರಿಸಲು ಆಗ್ರಹ.

ಹುನಗುಂದ ಡಿಸೆಂಬರ್.27

ಮರೋಳ (ರಾಮಥಾಳ) ಏತ ನೀರಾವರಿ ಎರಡನೆಯ ಹಂತದ ಹನಿ ನೀರಾವರಿ ಪ್ರದೇಶಗಳಿಗೆ ನೀರು ಹರಿಸುವಂತೆ ಆಗ್ರಹಿಸಿ ರೈತರ ಹಕ್ಕು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ವತಿಯಿಂದ ತಹಶೀಲ್ದಾರ್ ನಿಂಗಪ್ಪ ಬಿರಾದಾರ ಅವರ ಮೂಲಕ ಜಿಲ್ಲಾಧಿಕಾರಿ ಅವರಿಗೆ ಮಂಗಳವಾರ ರೈತ ಮುಖಂಡರು ಮನವಿ ಸಲ್ಲಿಸಿದರು.ಈ ವೇಳೆ ರೈತರ ಹಕ್ಕು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಕಾರ್ಯದರ್ಶಿ ಸದಾಶಿವಯ್ಯ ಅರಕೇರಿಮಠ ಮಾತನಾಡಿ ಮಳೆಯಿಲ್ಲದೇ ಹಿಂಗಾರು ಹಂಗಾಮಿನಲ್ಲಿ ಬಿತ್ತನೆ ಯಾಗಿರುವ ಬೆಳೆಗಳು ಒಣಗುತ್ತಿವೆ ತಾಲ್ಲೂಕಿನ ಕಾಲುವೆ ಮತ್ತು ಹನಿ ನೀರಾವರಿ ಪ್ರದೇಶಗಳಿಗೆ ನೀರು ಹರಿಸುವಂತೆ ಕೆಬಿಜೆಎನ್‌ಎಲ್ ಅಧಿಕಾರಿಗಳಿಗೆ ಮನವಿ ಮಾಡಲಾಗಿತ್ತು.ಆದರೆ ಕಾಲುವೆಗಳಿಗೆ ನೀರು ಹರಿಸಲಾಗಿದ್ದು,ಆದರೆ ಹನಿ ನೀರಾವರಿ ಪ್ರದೇಶಕ್ಕೆ ನೀರು ಹರಸಿಲ್ಲ.ಈ ಬಾರಿ ಮಳೆಯು ಕೈ ಕೊಟ್ಟಿದ್ದರಿಂದ ಹನಿ ನೀರಾವರಿ ಹೊಂದಿರುವ ರೈತರು ಹನಿ ನೀರಾವರಿ ನೀರನ್ನೇ ನಂಬಿ ಮೆಣಸಿನಕಾಯಿ,ಕಡಲೆ, ಬಿಳಿ ಜೋಳ ಸೇರಿದಂತೆ ಇತರೆ ಬೆಳೆಗಳು ಬಿತ್ತನೆ ಮಾಡಿ ಸಧ್ಯ ಮಳೆಯು ಇಲ್ಲ ಇತ್ತ ಹನಿ ನೀರಾವರಿ ನೀರು ಇಲ್ಲದೇ ರೈತರ ಬೆಳೆಗಳು ಬಾಡುತ್ತಿವೆ,ಈ ಹಿನ್ನಲೆಯಲ್ಲಿ ಹನಿ ನೀರಾವರಿ ಪ್ರದೇಶಕ್ಕೆ ನೀರು ಹರಿಸಿ ಸಂಕಷ್ಟದಲ್ಲಿರುವ ರೈತರಿಗೆ ಅನುಕೂಲ ಮಾಡಿ ಕೊಡಬೇಕು ಎಂದರು.ಸಂಘಟನೆಯ ಜಿಲ್ಲಾಧ್ಯಕ್ಷ ಈರಣ್ಣ ಬಡಿಗೇರ, ತಾಲ್ಲೂಕಾಧ್ಯಕ್ಷ ವೀರಣ್ಣ ಕಮ್ಮಾರ, ರೈತ ಮುಖಂಡರಾದ ಪರಸಪ್ಪ ಆಲೂರ, ಎಸ್.ಎಸ್. ಬೆಳ್ಳಿಹಾಳ, ಭರಮಪ್ಪ ಕುರಿ, ಸಕ್ರಪ್ಪ ಆಲೂರ, ಎಂ.ಎಚ್ .ಅಂಟರಠಾಣ, ಚಂದಪ್ಪ ಕುರಿ, ಬಿ.ಎನ್. ಮುಕ್ಕಣ್ಣವರ,ಎ.ಬಿ. ಕುರಿ, ರುದ್ರಯ್ಯ ಪೂಜಾರಿ, ಎಞಂ.ಎಸ್. ಹಳಗುಂಡಿ, ಬಸಪ್ಪ ಹುನ್ನಳ್ಳಿ, ಬಿ.ಎಸ್. ಕುರಿ, ಎಂ.ವೈ. ಪರಮನಹಟ್ಟಿ ಇತರರಿದ್ದರು.**** ಬಾಕ್ಸ್ ಸುದ್ದಿ***ಸಕ್ಕರೆ ಮತ್ತು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರು ಬೆಳಗಾವಿ ಜಿಲ್ಲೆ ಅಥಣಿ ತಾಲ್ಲೂಕಿನ ಸುಟ್ಟಟ್ಟಿ ಗ್ರಾಮದಲ್ಲಿ ಇತ್ತೀಚಿಗೆ ನಡೆದ ಕಾರ್ಯಕ್ರಮ ಒಂದರಲ್ಲಿ ಮಾತನಾಡುತ್ತಾ ಮಾತಿನ ಭರದಲ್ಲಿ, ಸಾಲ ಮನ್ನಾಕ್ಕಾಗಿ ರೈತರು ಬರಗಾಲವನ್ನು ನಿರೀಕ್ಷಿಸುತ್ತಿದ್ದಾರೆ ಎಂದು ಸಚಿವರ ಮಾತು ರೈತರ ಭಾವನೆ ಮತ್ತು ಹಕ್ಕುಗಳಿಗೆ ದಕ್ಕೆ ತಂದಿದ್ದು,ದೇಶಕ್ಕೆ ಅನ್ನ ಹಾಕುವ ಅನ್ನದಾತನ ಬಗ್ಗೆ ಹಗುರವಾಗಿ ಮಾತನಾಡಿದ ಸಚಿವರ ಮೇಲೆ ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ರೈತರ ಬಗ್ಗೆ ಸಚಿವರು ನೀಡಿರುವ ಹೇಳಿಕೆಯನ್ನು ನಮ್ಮ ಸಂಘಟನೆ ಬಲವಾಗಿ ಖಂಡಿಸುತ್ತದೆ.ಸದಾಶಿವಯ್ಯ ಅರಕೇರಿಮ್ಮಠ.ರಾಜ್ಯ ಕಾರ್ಯದರ್ಶಿ ರೈತರ ಹಕ್ಕು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಆಗ್ರಹಿಸಿದರು.

ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ ಹುನಗುಂದ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button