ಗೋಡಂಬಿ ಒಣ ಪ್ರದೇಶಕ್ಕೆ ಸೂಕ್ತ ಬೆಳೆ – ಶಾಸಕ ಡಾ. ಎನ್.ಟಿ ಶ್ರೀ ನಿವಾಸ್
ಹುರುಳಿಹಾಳ್ ಡಿಸೆಂಬರ್.28
ರೈತರು ಕಡಿಮೆ ನೀರಿನಲ್ಲಿ ವೈಜ್ಞಾನಿಕ ಪದ್ಧತಿಯಲ್ಲಿ ಗೋಡಂಬಿ ಬೆಳೆಯುವುದರ ಮೂಲಕ ಆರ್ಥಿಕ ಮಟ್ಟವನ್ನು ಉತ್ತಮ ಪಡಿಸಿ ಕೊಳ್ಳಬೇಕು ಎಂದು ಕೂಡ್ಲಿಗಿ ಶಾಸಕ ಡಾ.ಎನ್.ಟಿ ಶ್ರೀನಿವಾಸ್ ಹೇಳಿದರು. ತಾಲೂಕಿನ ಹುರುಳಿಹಾಳ್ ಗ್ರಾಮದಲ್ಲಿ ಆಯೋಜಿಸಿದ ಕೃಷಿ ವಿಜ್ಞಾನಗಳ ವಿಶ್ವ ವಿದ್ಯಾಲಯ, ರಾಯಚೂರು ಹಾಗೂ ಗೋಡಂಬಿ ಮತ್ತು ಕೊಕೊ ಅಭಿವೃದ್ಧಿ ನಿರ್ದೇಶನಾಲಯ, ಕೃಷಿ ಹಾಗೂ ರೈತರ ಕಲ್ಯಾಣ ಮಂತ್ರಾಲಯ, ಭಾರತ ಸರ್ಕಾರ, ಕೊಚ್ಚಿನ್, ಕೇರಳ ಕೃಷಿ ವಿಸ್ತರಣಾ ಕೇಂದ್ರ ಹೂವಿನಹಡಗಲಿ, ವಿಜಯನಗರ ಜಿಲ್ಲೆಯ ಇವರ ಸಹಯೋಗದಲ್ಲಿ ಆಯೋಜಿಸಿದ್ದ ಗೋಡಂಬಿ ಬೆಳೆಯ ಉತ್ಪಾದನಾ ತಾಂತ್ರಿಕತೆಗಳು ಹಾಗೂ ಸಂರಕ್ಷಣೆ ಎಂಬ ವಿಚಾರ ಸಂಕೀರ್ಣವನ್ನು ಉದ್ಘಾಟಿಸಿ ಮಾತನಾಡಿದರು. ರೈತರು ಕಡಿಮೆ ನೀರಿನ ಪ್ರದೇಶದಲ್ಲಿ ಮೂರು ವರ್ಷದಲ್ಲಿ ಗೋಡಂಬಿ ಬೆಳೆದು ಆರ್ಥಿಕವಾಗಿ ಸಬಲೀಕರಣ ಹೊಂದಲು ಸಾಧ್ಯವಿದೆ.

ಗೋಡಂಬಿ ಒಣ ಪ್ರದೇಶಕ್ಕೆ ಸೂಕ್ತವಾದ ಬೆಳೆ. ಇದು ಯಾವುದೇ ಮಣ್ಣಿಗೆ ಹೊಂದಿ ಕೊಂಡು ಬೆಳೆಯ ಬಲ್ಲದು. ಯಾವುದೇ ವಾತಾವರಣಕ್ಕೆ ಹೊಂದಿ ಕೊಳ್ಳುವ ಗುಣ ಪಡೆದಿದೆ. ಹೆಚ್ಚು ಲಾಭ ತರುವ ಬೆಳೆ ಯಾಗಿರುವುದರಿಂದ ನಮ್ಮ ಬಯಲು ಸೀಮೆಯ ಪ್ರದೇಶದಲ್ಲಿ ಬೆಳೆಯ ಬಹುದಾಗಿದೆ ಎಂದು ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಕಾರ್ಯಕ್ರಮದ ಅಧ್ಯಕ್ಷತೆ ಡಾ ಎಂ ಹನುಮಂತಪ್ಪ ಗೌರವಾನ್ವಿತ ಕುಲ ಪತಿಗಳು ಕೃಷಿ ವಿಜ್ಞಾನಿಗಳ ವಿಶ್ವ ವಿದ್ಯಾಲಯ ರಾಯಚೂರು ವಹಿಸಿದರು. ಈ ವೇಳೆ ಡಾ ಎಚ್.ಜಿ ಸಣ್ಣ ತಿಮ್ಮಪ್ಪ ಪ್ರಾಧ್ಯಾಪಕರು ಗೋಡಂಬಿ ಬೆಳೆಯ ಬೇಸಾಯ ಕ್ರಮಗಳ ಕುರಿತು ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಡಾ. ಎಸ್.ಬಿ ಗೌಡಪ್ಪ ವಿಸ್ತರಣಾ ನಿರ್ದೇಶಕರು ಮಾತನಾಡಿ ದೇಶದಾದ್ಯಂತ ಇದರ ಸಂಸ್ಕರಣ ಘಟಕಗಳಿವೆ. ಬೀಜವನ್ನು ದಾಸ್ತಾನು ಮಾಡಿ ಲಾಭದಾಯಕ ಬೆಲೆ ಬಂದಾಗ ಮಾರಾಟ ಮಾಡ ಬಹುದಾಗಿದೆ.
ದೇಶ, ವಿದೇಶಗಳಲ್ಲಿ ಇದಕ್ಕೆ ಬೇಡಿಕೆ ಇದೆ. ಇದು ಪೌಷ್ಟಿಕ ಆಹಾರ. ರುಚಿಗೆ ಹೆಸರಾಗಿದೆ. ಇದನ್ನು ಬಳಸಿ ದುಬಾರಿ ಬೆಲೆಯ ತಿಂಡಿ ತಿನಿಸು ತಯಾರಿಸಲಾಗುತ್ತಿದೆ ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಡಾ ಎಂ ಆರ್ ಕುರುಬರ್ ಸಹ ವಿಸ್ತೀರ್ಣ ನಿರ್ದೇಶಕರು, ಡಾ ವೆಂಕಟೇಶ್ ಎನ್ ಹುಬ್ಬಳ್ಳಿ ತಾಂತ್ರಿಕ ಸಲಹೆಗಾರರು ಹಾಗೂ ನಿವೃತ್ತ ನಿರ್ದೇಶಕರು, ಡಾ ದಾದಾ ಸಾಹೇಬ್ ದೇಸಾಯಿ ನಿರ್ದೇಶಕರು, ಶರಣಪ್ಪ ಮುದುಗಲ್ ಜಂಟಿ ಕೃಷಿ ನಿರ್ದೇಶಕರು ವಿಜಯನಗರ, ಚಿದಾನಂದಪ್ಪ ಪಿ.ಜಿ ತೋಟಗಾರಿಕೆ ಉಪ ನಿರ್ದೇಶಕರು ವಿಜಯನಗರ, ರಮೇಶ್ ಕೆಎಂ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಕೂಡ್ಲಿಗಿ, ಸುನಿಲ್ ಸಹಾಯಕ ಕೃಷಿ ನಿರ್ದೇಶಕರು ಕೂಡ್ಲಿಗಿ, ಡಾ ಎನ್ ಹೆಚ್ ಸುನಿತಾ, ಡಾ ಮಂಜುನಾಥ ಭಾನುವಳ್ಳಿ ಸೇರಿದಂತೆ ತಾಲೂಕಿನ ರೈತರು, ಮುಖಂಡರು ಉಪಸ್ಥಿತರಿದ್ದರು.ಹೋಬಳಿ ವರದಿಗಾರರು:ಕೆ.ಎಸ್.ವೀರೇಶ್.ಕಾನಾ ಹೊಸಹಳ್ಳಿ