ಕರಕುಶಲ ಕಲೆಯಲ್ಲಿ ಪಾoಡಿತ್ಯ ಮೆರೆದ – ನಗರದ ಪಾಂಡುರಂಗ ಮಾನಪಡೆ.

ರೋಣ ಜ.28

ಪಟ್ಟಣದ ಶ್ರೀನಗರದ ನಿವಾಸಿ ಪಾಂಡುರಂಗ ಮಾನ್ನಡೆ ಅವರು ವೃತ್ತಿಯಲ್ಲಿ ಕೃಷಿಕ. ಓದಿರುವುದು 5 ನೇ. ತರಗತಿವರೆಗೆ ಆದರೆ, ಇವರ ಸೂಕ್ಷ್ಮ ಕೆತ್ತನೆಯ ಕಾರ್ಯ ಎಲ್ಲರೂ ಹುಬ್ಬೇರಿಸುವಂತೆ ಮಾಡುತ್ತದೆ. ಈ ಹಿಂದೆ ಗೌಂಡಿ ಕೆಲಸ ಮಾಡುತ್ತಿದ್ದ ಅವರು ಬಹಳ ದಿನಗಳ ವರೆಗೆ ಅದಕ್ಕೆ ಒಗ್ಗಲಿಲ್ಲ. ಹೀಗಾಗಿ ತಮ್ಮ ನಾಲ್ಕೂವರೆ ಎಕರೆ ಜಮೀನಿನಲ್ಲಿ ಕುಟುಂಬದವ ರೊಂದಿಗೆ ಕೃಷಿ ಚಟುವಟಿಕೆಯಲ್ಲಿ ತೊಡಗಿ ಕೊಂಡೇ ದಶಕಗಳಿಂದ ಪುಟ್ಟ ಮಾದರಿಯ ಕೃಷಿ ಪರಿಕರಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದಾರೆ.ಅವರೊಬ್ಬ ಅಪ್ಪಟ ಕೃಷಿಕ. ಇರುವ ಸ್ವಲ್ಪ ಭೂಮಿಯಲ್ಲೇ ಉಳುಮೆ ಮಾಡಿ ಕೃಷಿಯಲ್ಲಿ ಖುಷಿ ಕಂಡವರು. ಆದರೆ, ಅವರ ಪ್ರವೃತ್ತಿ ಮಾತ್ರ ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದೆ. ಕೃಷಿಕನ ಕೈಯಲ್ಲಿ ಅರಳಿದ ಕಲಾ ಕೃತಿಗಳು ಮನಸೂರೆ ಗೊಳ್ಳುತ್ತಿವೆ.ಸಾಮಾನ್ಯ ಕುಟುಂಬಕ್ಕೆ ಸೇರಿದ ಪಾಂಡುರಂಗ ಮಾನ್ನಡೆ ಅವರ ಆರ್ಥಿಕ ಪರಿಸ್ಥಿತಿ ಅಷ್ಟಕ್ಕಷ್ಟೆ. ಇವರು ತಯಾರಿಸುವ ಪುಟ್ಟ ಮಾದರಿಯ ಕೃಷಿ ಪರಿಕರಗಳಿಗೆ ಭಾರಿ ಬೇಡಿಕೆ ಇದೆ. ಹೆಚ್ಚಿನ ಬಂಡವಾಳ ತೊಡಗಿಸಿ ಹೆಚ್ಚೆಚ್ಚು ಸಾಮಗ್ರಿಗಳನ್ನು ತಯಾರಿಸುವ ಸಾಮರ್ಥ್ಯ ಇವರಿಗಿಲ್ಲ. ಇವರಲ್ಲಿನ ಕಲೆಯನ್ನು ಸದ್ಬಳಕೆ ಮಾಡಲು ಉದ್ದಿಮೆದಾರ ರೊಬ್ಬರು ಮುಂದೆ ಬಂದರೆ, ಇವರ ಪ್ರತಿಭೆಗೆ ಅವಕಾಶ ದೊರೆ ತಂತಾಗುತ್ತದೆ.ನಿರುಪಯುಕ್ತ ಹಳೆಯ ಸಾಗವಾನಿ, ತೇಗ, ಬೇವಿನ ಕಟ್ಟಿಗೆ, ಕಬ್ಬಿಣಗಳನ್ನೇ ಬಳಸಿಕೊಂಡು ಅದರಲ್ಲಿಯೇ ಕೃಷಿ ಕಲಾಕೃತಿ ರಚಿಸಿದ್ದಾರೆ. ಚಕ್ಕಡಿ, ಕೂರಿಗೆ, ಕುಂಟೆ, ನೇಗಿಲು, ತತ್ರಾಣಿ, ಕೊಡಲಿ ಗುದ್ದಲಿ, ಸಲಿಕೆ, ಎತ್ತಿನಗಾಡಿ, ಶಹನಾಯಿ, ಎಣ್ಣೆ ತಯಾರಿಸುವ ಗಾಣ ಸೇರಿದಂತೆ ವಿವಿಧ ಕಲಾ ಕೃತಿಗಳ ದೃಶ್ಯ ವೈಭವ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತವೆ.

ಶಹನಾಯಿ ಮಾಂತ್ರಿಕ ಉಸ್ತಾದ್ ಬಿಸ್ಮಿಲ್ಲಾ ಖಾನ್ ಅವರು ಬಳಕೆ ಮಾಡುತ್ತಿದ್ದ ಶಹನಾಯಿ ರೋಣ ನಗರದ ನಿವಾಸಿ ಮಾನಪಡೆ ಯವರ ಕೊಡುಗೆ ಎನ್ನುವುದು ವಿಶೇಷ. ಮಾನಪಡೆ ಯವರು ಕೆತ್ತನೆ ಮಾಡಿರುವ ಹಲವು ಕಲಾ ಕೃತಿಗಳು ರಾಜ್ಯದಾದ್ಯಂತ ಸದ್ದು ಮಾಡಿವೆ. ಇವರ ಈ ಸೇವೆಗೆ ಕನ್ನಡ ಸಾಹಿತ್ಯ ಪರಿಷತ್ ಗದಗ ರವರು ಸುವರ್ಣ ಸಿರಿ ಪ್ರಶಸ್ತಿ ಯನ್ನು ಕೊಟ್ಟು ಸನ್ಮಾನ ಮಾಡಲಾಗಿದೆ.ತಮ್ಮ ಈ ನಿಸ್ವಾರ್ಥ ಸೇವೆಗಳನ್ನು ನಮ್ಮ ರಾಷ್ಟ್ರಕ್ರಾಂತಿ ಚಾನೆಲ್ ಮೂಲಕ ಪಾಂಡುರಂಗ ರವರು ತಮ್ಮ ಅಭಿಪ್ರಾಯಗಳನ್ನು ಹಂಚಿ ಕೊಂಡಿದ್ದಾರೆ. ಇವರ ಈ ಕರ ಕುಶಲ ಸೇವೆಯನ್ನು ಮೆಚ್ಚಿ ಸರಕಾರ ದವರು ಇವರತ್ತ ಗಮನ ವಹಿಸಬೇಕು ಹಾಗೂ ಇವರು ಈಗಾಗಲೇ ಕಲಾವಿದರ ಮಾಶಾಸನಕ್ಕೆ ಅರ್ಜಿ ಸಲ್ಲಿಸಿರುತ್ತಾರೆ ಅವರ ಆ ಅರ್ಜಿ ಸ್ವೀಕಾರ ಗೊಂಡು ಬೇಗನೆ ಅವರ ಅವರ ಮಾಶಾಸನ ಕೈ ಸೇರಲು ನಮ್ಮ ರಾಷ್ಟ್ರಕ್ರಾಂತಿ ಚಾನೆಲ್ ಅವರಿಗೆ ಸಹಾಯ ಮಾಡುತ್ತದೆ. ಎಲ್ಲಾ ಕರ್ನಾಟಕದ ಜನತೆಗೆ ನಮ್ಮ ರಾಷ್ಟ್ರಕ್ರಾಂತಿ ಚಾನೆಲ್ ಮನವಿ ಏನೆಂದರೆ ಇಂತಹ ಕಲಾವಿದರನ್ನು ಗುರುತಿಸಿ ಅವರನ್ನು ಬೆಳಕಿಗೆ ತರಬೇಕು ಸರ್ಕಾರ ಅವರತ್ತ ಗಮನ ಹರಿಸಿ ಅವರ ಆರ್ಥಿಕ ಸಹಾಯಕ್ಕೆ ಯಾವಾಗಲೂ ಸಹಕಾರ ನೀಡಬೇಕು ಎಂಬುದು ನಮ್ಮ ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್ ಆಶಯವಾಗಿದೆ.

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ ರೋಣ ಗದಗ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button