ಪ್ರತಿಮಾ ಹಾಸನ್ ಗೆ ಕುವೆಂಪು ವಿಶ್ವ ಮಾನವ ಕನ್ನಡ ರತ್ನ ಪ್ರಶಸ್ತಿ.
ಹಾಸನ ಡಿಸೆಂಬರ್.30

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು,ಮೈಸೂರು. ಮತ್ತು ಶ್ರೀ ಕೊಟ್ಟೂರು ಬಸವೇಶ್ವರ ಸೇವಾ ಟ್ರಸ್ಟ್, ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರುವ. ರಾಷ್ಟ್ರಕವಿ ಕುವೆಂಪುರವರ ಜನ್ಮದಿನದ ಆಚರಣೆ. ಮತ್ತು ಕವಿಗೋಷ್ಠಿಯನ್ನು ಏರ್ಪಡಿಸಿದ್ದು.31:12:2023 ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ವಿದ್ದು. ಇಲ್ಲಿ ಕೊಡ ಮಾಡುವ ಕುವೆಂಪು ವಿಶ್ವಮಾನವ ಕನ್ನಡ ರಾಜ್ಯ ಪ್ರಶಸ್ತಿಗೆ. ಹಾಸನ ನಗರದ ಶ್ರೀಮತಿ ಹೆಚ್. ಎಸ್. ಪ್ರತಿಮಾ ಹಾಸನ್ ರವರನ್ನು ಆಯ್ಕೆ ಮಾಡಿದ್ದು. ಇವರು ಶಿಕ್ಷಕಿಯಾಗಿದ್ದು, ಪ್ರತಿಮಾ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷರಾಗಿದ್ದು. ಚುಟುಕು ಸಾಹಿತ್ಯ ಪರಿಷತ್ತಿನಲ್ಲಿ ಹಾಸನದ ಜಿಲ್ಲಾ ಸಾಂಸ್ಕೃತಿಕ ಕಾರ್ಯದರ್ಶಿಯಾಗಿದ್ದು. ಅಖಿಲ ಕರ್ನಾಟಕ ಡಾ. ರಾಜಕುಮಾರ್ ಅಭಿಮಾನಿಗಳ ಸಂಘಗಳ ಒಕ್ಕೂಟ. ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘ, ಪುನೀತ್ ರಾಜಕುಮಾರ್ ಅಭಿಮಾನಿ ಸಂಘದ ಹಾಸನದ ಜಿಲ್ಲಾಧ್ಯಕ್ಷರಾಗಿದ್ದು.ಸಮಾಜ ಸೇವಕಿಯಾಗಿ,ಮಾನವ ಹಕ್ಕುಗಳ ಜನ ಸೇವಾ ಸಮಿತಿಯ ಹಾಸನದ ಜಿಲ್ಲಾಧ್ಯಕ್ಷರು,

ಕರ್ನಾಟಕ ಮುಕ್ತಕ ಕವಿಪರಿಷತ್ತಿನ ಹಾಸನ ಜಿಲ್ಲಾಧ್ಯಕ್ಷರು , ರಾಜ್ಯ ಒಕ್ಕಲಿಗರ ಕೆಂಪೇಗೌಡರ ಯುವ ಸೇನೆಯ ರಾಜ್ಯ ಮಹಿಳಾ ಸಂಘಟನಾ ಕಾರ್ಯದರ್ಶಿ, ವಾತ್ಸಲ್ಯ ಫೌಂಡೇಶನ್ ವೃದ್ಧ ಆಶ್ರಮದ ಕಾರ್ಯಕರ್ತೆಯಾದ,ಇನ್ನೂ ಹಲವು ಸಂಸ್ಥೆ ಗಳ ಸದಸ್ಯರು ಆದ ಬಹುಮುಖ ಪ್ರತಿಭೆಯಾದ, ಸದಾ ಕ್ರಿಯಾಶೀಲರಾದ ಶ್ರೀಮತಿ ಹೆಚ್, ಎಸ್, ಪ್ರತಿಮಾ ಹಾಸನ್ ರವರಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮೈಸೂರ್ ಇಲ್ಲಿ ” ವಿಶ್ವಮಾನವ ಕನ್ನಡ ರತ್ನ ಪ್ರಶಸ್ತಿ “ನೀಡಿ ಸನ್ಮಾನಿಸಲಾಗುವುದು . ಪ್ರಶಸ್ತಿಯನ್ನು ಇವರ ಸಾಮಾಜಿಕ, ಶೈಕ್ಷಣಿಕ, ಸಾಹಿತ್ಯ, ಸಾಂಸ್ಕೃತಿಕ, ಇವರ ಎಲ್ಲ ಕ್ಷೇತ್ರದ ಕಾರ್ಯದ ಕ್ರಿಯಾಶೀಲತೆಯನ್ನು ಗಮನಿಸಿ ಮತ್ತು , ಪತ್ರಕರ್ತೆಯಾಗಿ , ಅಂಕಣಗಾರ್ತಿಯಾಗಿ, ಸಾಮಾಜಿಕ ಚಿಂತಕಿಯಾಗಿ, ತನ್ನದೇ ಆದಂತಹ ಸಮಾಜ ಸೇವೆಯನ್ನು ಸಲ್ಲಿಸುತ್ತಿರುವುದನ್ನು ಗಮನಿಸಿ. ಆಯ್ಕೆ ಮಾಡಲಾಗಿದೆ . ಎಂದು ಕಾರ್ಯಕ್ರಮದ ಸಂಯೋಜಕರಾದಂತಹ ಶಿವಕುಮಾರ್ ರವರು ಪತ್ರಿಕಾ ವರದಿಯಲ್ಲಿ ತಿಳಿಸಿದ್ದಾರೆ