ಧಿಡೀರನೆ ಶಾಲೆಗೆ ಭೇಟಿ ನೀಡಿ ಹೊಸ ವರ್ಷದ ಶುಭಾಶಯಗಳು ಕೋರಿದ ಶಾಸಕರು.
ಕೂಡ್ಲಿಗಿ ಜನೇವರಿ.2

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೂಡ್ಲಿಗಿ ಪಟ್ಟಣದಲ್ಲಿ 14.ನೇ ವಾರ್ಡಿನಲ್ಲಿ ಬರುವಂತಹ ಡಾ.ಬಿ.ಆರ್ ಅಂಬೇಡ್ಕರ್ ಶಾಲೆಗೆ ಜನಪ್ರಿಯ ಶಾಸಕರಾದ ಡಾಕ್ಟರ್ ಎನ್ ಟಿ ಶ್ರೀನಿವಾಸ್ ರವರು ದಿಢೀರ್ ಭೇಟಿಕೊಟ್ಟು ಅಂಬೇಡ್ಕರ್ ನಗರದ ಶಾಲೆಯ ಮಕ್ಕಳಿಗೂ ಹಾಗೂ ಸಿಬ್ಬಂದಿ ವರ್ಗದವರಿಗೂ ಹೊಸ ವರ್ಷದ ಶುಭಾಶಯಗಳು ತಿಳಿಸುವುದರೊಂದಿಗೆ ಶಾಲಾ ಮಕ್ಕಳನ್ನು ಮಾತನಾಡಿಸುವುದರೊಂದಿಗೆ ಮುಖ್ಯ ಗುರುಗಳಾದ ಲಕ್ಷ್ಮಿದೇವಿ ಹಾಗೂ ಸಿಬ್ಬಂದಿ ವರ್ಗದವರಿಗೆ ಶಿಕ್ಷಣದ ಪ್ರಗತಿ ಬಗ್ಗೆ ಮಾಹಿತಿ ಪಡೆಯುವುದರೊಂದಿಗೆ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುವಂತೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಶಾಲೆಯ ಪಕ್ಕದಲ್ಲಿರು ವಂತಹ ಹಾಗೂ ಕಸದ ತಿಪ್ಪೆಗಳನ್ನು ಕಂಡು ಶಾಸಕರು ಗರಂ ಆಗಿ ಸ್ಥಳಕ್ಕೆ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗಳು ಫಿರೋಜ್ ಖಾನ್ ಹಾಗೂ ಗೀತಾ ಇವರನ್ನು ಕರೆಸಿ ಸ್ವಚ್ಛತೆ ಗೊಳಿಸುವಂತೆ ತಿಳಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಸೈನಿಕರಾದ ಎಚ್. ರಮೇಶ್ ಪೌರ ಕಾರ್ಮಿಕರ ಅಧ್ಯಕ್ಷರಾದ ರಾಜ್ಯಾಧ್ಯಕ್ಷರಾದಂತ ಕೆ ಪ್ರಭಾಕರ್, ವಕೀಲರು ಡಿ.ಎಚ್ ದುರ್ಗೇಶ್, ಕಾಂಗ್ರೆಸ್ ಮುಖಂಡರಾದ ಕಾವಲಿ ಶಿವಪ್ಪ ನಾಯಕ್, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರಾದಂತಹ ಗುರುಸಿದ್ದನಗೌಡ್ರು, ಜಿಂಕಲ್ ನಾಗವಣಿ, ಮಾದಿಗ ದಂಡರ ತಾಲೂಕ ಅಧ್ಯಕ್ಷರಾದ ಕೆ. ಮಹೇಶ್ ಹೆಗ್ಡಾಳ್, ಡಿ.ಎಚ್ ಮರಿಸ್ವಾಮಿ, ಶಾಮಿಯಾನ ಚಂದ್ರಪ್ಪ, ಜೆ. ರವಿ, ಇದ್ದರು.
ಜಿಲ್ಲಾ ವರದಿಗಾರರು:ರಾಘವೇಂದ್ರ.ಬಿ.ಸಾಲುಮನೆ ಕೂಡ್ಲಿಗಿ