ಭೀಮಾ ಕೋರೆಗಾಂವ್ ಯುದ್ಧ ಒಂದು ಸಾಮ್ರಾಜ್ಯದ ವಿರುದ್ಧವಲ್ಲ:ಅಂದಿನ ವ್ಯವಸ್ಥೆ – ಹೊಸಮನಿ.

ಹುನಗುಂದ ಜನೇವರಿ.3

ಭಾರತದ ಇತಿಹಾಸದಲ್ಲಿ ಮರೆಯಾಗಿ ಹೋಗಿದ್ದ ಮಹಾರಾಷ್ಟ್ರ ರಾಜ್ಯದ ಪುಣೆ ಜಿಲ್ಲೆಯ ಐತಿಹಾಸಿಕ ಭೀಮಾ ಕೋರೆಗಾಂವ್ ಯುದ್ದ ಒಂದು ಸಾಮ್ರಾಜ್ಯದ ವಿರುದ್ದವಲ್ಲ ಅದು ಅಂದಿನ ವ್ಯವಸ್ಥೆಯ ವಿರುದ್ದ ಎಂದು ದಲಿತ ಮುಖಂಡ ಮಲ್ಲಿಕಾರ್ಜುನ ಹೊಸಮನಿ ಹೇಳಿದರು.ತಾಲೂಕಿನ ಸಮೀಪದ ಹಡಗಲಿ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಗ್ರಾಮೀಣಾಭಿವೃದ್ದಿ ಯುವ ಸಂಘದ ವತಿಯಿಂದ ರವಿವಾರ ರಾತ್ರಿ ಹಮ್ಮಿಕೊಳ್ಳಲಾಗಿದ್ದ 206.ನೇ ಭೀಮಾ ಕೋರೆಗಾಂವ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಭೀಮಾ ಕೋರೆಗಾಂವ್ ಯುದ್ದ 1818 ಜನವರಿ 1 ರಂದು ಬೆಳಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆಯವರಗೆ ಅಂದರೇ 12 ಗಂಟೆಯ ಅವಧಿಯಲ್ಲಿ ನಡೆದ ರಣರೋಚಕ ಯುದ್ದದಲ್ಲಿ 5೦೦ ಜನ ಮಹರ್ ಸೈನಿಕರು 28 ಸಾವಿರ ಪೇಶ್ವೆ ಸೈನಿಕರನ್ನು ಬಗ್ಗಬಡಿದು ವಿಜಯ ಸಾಧಿಸಿದ ಮಹತ್ವದ ಯುದ್ದವಾಗಿದೆ.ಈ ಯುದ್ದದಲ್ಲಿ 22 ಜನ ಮಹರ್ ಸೈನಿಕರು ಹುತಾತ್ಮರಾಗುತ್ತಾರೆ.ವ್ಯವಸ್ಥೆಯ ಬದಲಾವಣೆಗೆ ಹೋರಾಟ ಮಾಡಿ ವೀರ ಮರಣ ಹೊಂದಿದ ಮಹರ್ ಸೈನಿಕರ ಸ್ಮರಣಾರ್ಥಕ 1827 ಮಾಚ್ 26 ರಂದು 65 ಅಡಿ ಎತ್ತರದ ವಿಜಯ ಸ್ತಂಭವನ್ನು ನಿರ್ಮಿಸಲಾಯಿತು.ಇಂತಹ ಚಾರಿತ್ರೀಕ ಇತಿಹಾಸವನ್ನು ಅಂದಿನ ಮನುವಾದಿಗಳು ಮುಚ್ಚಿ ಹಾಕಿದ್ದರಿಂದ ಹುತಾತ್ಮರ ವಿಜಯ ಸ್ತಂಭ ಅನಾಥವಾಗಿತ್ತು. ಈ ಘಟನೆ ನಡೆದು 73 ವರ್ಷದ ನಂತರದಲ್ಲಿ ಜನಸಿದ ಡಾ.ಬಾಬಾಸಾಹೇಬ ಅಂಬೇಡ್ಕರ ಅವರು ಬ್ರಿಟಿಷ್ ಓರ್ವ ಬರಹಗಾರ ಬರೆದ ಪುಸ್ತಕದಲ್ಲಿ ಓದಿ ನಂತರ 1927 ಜನವರಿ 1 ರಂದು ಕುಟುಂಬಸ್ಥರ ಸಮೇತ ಅನೇಕ ಅನುಯಾಯಿಗಳ ಜೊತೆಗೆ ಕೋರೆಗಾವ್ ಭೇಟಿ ನೀಡಿ ಹುತಾತ್ಮ ವೀರ ಸೈನಿಕರಿಗೆ ಶ್ರದ್ದಾಂಜಲಿಯನ್ನು ಸಲ್ಲಿಸುತ್ತಾರೆ.ಅಂದಿನಿಂದ ಇಲ್ಲಿಯವೆಗೆ ಲಕ್ಷಲಕ್ಷ ಜನರು ಕೋರೆಗಾಂವ್ ಸ್ಥಳಕ್ಕೆ ಭೇಟಿ ನೀಡುತ್ತಾರೆ.ಅಂದಿನ ಜಾತಿ ವ್ಯವಸ್ಥೆಯಿಂದ ಪೇಶ್ವ ಸೈನ್ಯದಲ್ಲಿ ಮಹರ್ ಸೈನಿಕರನ್ನು ಸೇರಿಸಿಕೊಳ್ಳದೇ ಹೀನಾಯವಾಗಿ ನಡೆಸಿ ಕೊಂಡಿದ್ದರ ಪ್ರತಿಫಲವೇ ಈ ಭೀಮಾ ಕೋರೆಗಾಂವ್ ಯುದ್ದವಾಗಿದೆ.ಇಂತಹ ಒಂದು ರೋಚಕ ಶೋಷಿತ ಸಮುದಾಯದ ಅಲ್ಪ ಸೈನಿಕರ ಸಾಹಸದ ಕಥೆಯನ್ನು ನಮ್ಮ ಅನೇಕ ಯುವಶಕ್ತಿ ತಿಳಿದು ಕೊಳ್ಳದೇ ಹೊಸ ವರ್ಷದ ಭರಾಟೆಯಲ್ಲಿ ಮೋಜು ಮಸ್ತಿಗೀಳಿದು ಸಮಯ ವ್ಯರ್ಥ ಮಾಡುವುದ್ದಕ್ಕಿಂತ ಭೀಮಾ ಕೋರೆಗಾಂವ್ ಯುದ್ದ ಮಹತ್ವವನ್ನು ಅರಿತು ಕೊಳ್ಳುವುದು ಮುಖ್ಯ ಎಂದರು. ಈ ಸಂದರ್ಭದಲ್ಲಿ ಭೀಮಾ ಕೋರೆಗಾಂವ್ ವಿಜಯ ಸ್ತಂಭವನ್ನು ರಚಿಸಿ ಮೇನದ ಬತ್ತಿಯಿಂದ 22 ಜನ ವೀರ ಮಹರ್ ಸೈನಿಕರಿಗೆ ಶ್ರದ್ದಾಂಜಲಿಯನ್ನು ಸಲ್ಲಿಸಲಾಯಿತು.ದಲಿತ ಮುಖಂಡರಾದ ಬೈಲಪ್ಪ ಚಲವಾದಿ,ರವಿ ಚಲವಾದಿ,ಸುನೀಲ ಚಲವಾದಿ,ಮಂಜುನಾಥ ಮಸ್ಕಿ.ಮಂಜುನಾಥ ಚಲವಾದಿ,ಅನೀಲ ಚಲವಾದಿ,ಯಂಕಪ್ಪ ದಾಸರ,ಸುರೇಶ ಚಲವಾದಿ,ಮುದಕಪ್ಪ ಚಲವಾದಿ,ಮಲ್ಲಪ್ಪ ಚಲವಾದಿ, ಲಕ್ಷ್ಮಿ ಬಾಯಿ ಮಸ್ಕಿ, ಲಕ್ಷ್ಮವ್ವ ದಾಸರ,ಹೇಮಾವತಿ ಚಲವಾದಿ,ಶಾರವ್ವ ಚಲವಾದಿ,ಲಲಿತಾ ಚಲವಾದಿ ಸೇರಿದ್ದಂತೆ ಅನೇಕರು ಇದ್ದರು.

ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ ಹುನಗುಂದ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button