ಸರ್ಕಾರಿ ನೌಕರರ, ಜನ ಸಾಮಾನ್ಯರ ಸಮಸ್ಯೆಗೆ ಸ್ಪಂದಿಸಿ ಶಾಸಕ ಡಾ. ಶ್ರೀ ನಿವಾಸ.

ಕೂಡ್ಲಿಗಿ ಜನೇವರಿ.4

ಸರ್ಕಾರದ ಸೌಲಭ್ಯ ಪಡೆಯಲು ಸಾಮಾನ್ಯ ಜನತೆ ಹಗಲಿರುಳು ಸರ್ಕಾರಿ ಕಚೇರಿಗಳನ್ನು ಅಲೆಯುತ್ತಿದ್ದು ಅದನ್ನು ತಪ್ಪಿಸಿ ಅವರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಸರ್ಕಾರಿ ನೌಕರರಿಗೆ ಕಿವಿ ಮಾತು ಹೇಳಿದರು. ಅವರು ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಬುಧವಾರ ನಡೆದ ಕಂದಾಯ ಇಲಾಖೆ, ಉಪ ನೋಂದಣಿ ಹಾಗೂ ಉಪ ಖಜಾನೆ ಕಚೇರಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಸಭೆಯಲ್ಲಿ ಮಾತನಾಡುತ್ತಾ ಜನರ ನೂರಾರು ಸಮಸ್ಯೆಗಳಲ್ಲಿ ಅತೀ ಮುಖ್ಯವಾಗಿ ಭೂಮಿ, ಆಹಾರ, ಜಮೀನು ಮಾರಾಟ, ಹಾಗೂ ಇತರೆ ದಾಖಲೆಗಳು ಸೇರಿದಂತೆ ಕಂದಾಯ ಇಲಾಖೆಗೆ ಸಂಬಂದಿಸಿದ ಸಮಸ್ಯೆಗಳೇ ಹೆಚ್ಚಾಗಿದ್ದು ಕೂಡ್ಲಿಗಿಯಂತಹ ಹಿಂದುಳಿದ ತಾಲೂಕಿನಲ್ಲಿ ಜನರ ಆರ್ಥಿಕ ಪರಿಸ್ಥಿತಿ ಅರಿತು ಸಂಬಂದಿಸಿದ ಗ್ರಾಮಲೆಕ್ಕಿಗರು, ಕಂದಾಯ ನಿರೀಕ್ಷಿಕರು ಜನರ ಸಮಸ್ಯೆಗೆ ತಕ್ಷಣ ಸ್ಪಂದಿಸಿವಲ್ಲಿ ಮುಂದಾಗಬೇಕು ಬಹಳಷ್ಟು ದೂರುಗಳು ನಿಮ್ಮಗಳ ಬಗ್ಗೆ ಬರುತ್ತಿದ್ದು ಜನರ ಸಮಸ್ಯೆ ಆಲಿಸಿ ಪರಿಹಾರ ಹುಡುಕಿ ಕೊಡುವಂತೆ ಕಂದಾಯ ಇಲಾಖೆ ಅಧಿಕಾರಿ ಸಿಬ್ಬಂದಿಗಳಿಗೆ ಶಾಸಕರು ತಿಳಿಸಿದರು. ತಾಲೂಕಿನ ಕಂದಾಯ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇರುವುದು ತಿಳಿದಿದ್ದು, ಇರುವ ನೌಕರರು ಒತ್ತಡದಲ್ಲಿ ಕೆಲಸ ನಿರ್ವಹಿಸುವಂತಾಗಿದೆ. ಹಳ್ಳಿಗಳಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಸಿಗುವುದಿಲ್ಲ. ಅವರ ಬಳಿ ಅಲೆದಾಡುವುದರಲ್ಲೇ ಸಾಕಾಗಲಿದೆ ಎಂದು ಹಲವರು ದೂರುತ್ತಿದ್ದಾರೆ. ಹೀಗಾಗಿ, ಜನ ಸಾಮಾನ್ಯರು ಸಣ್ಣಪುಟ್ಟ ಕೆಲಸಕ್ಕೂ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸುವ ರೀತಿ ಅಧಿಕಾರಿಗಳು ಸ್ಪಂದಿಸಬೇಕು. ಕರ್ತವ್ಯದ ಬಗ್ಗೆ ನಿರ್ಲಕ್ಷ್ಯ ತೋರುತ್ತಾ ಕಾಲಹರಣ ಮಾಡುವುದು, ಸಬೂಬು ಹೇಳುವುದನ್ನು ನಾನು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ ಶಾಸಕರು ಎಲ್ಲಾ ಇಲಾಖೆ ಅಧಿಕಾರಿಗಳು ಉತ್ತಮವಾಗಿ ಕೆಲಸ ಮಾಡುವ ಮೂಲಕ ಕೂಡ್ಲಿಗಿ ತಾಲೂಕನ್ನು ಮಾದರಿ ತಾಲೂಕಾ ಗಿಸಬೇಕಿದೆ ಎಂದು ತಿಳಿಸಿದರು.

ಗ್ರಾಮೀಣ ಭಾಗದ ಜನರ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲೇ ಬಗೆ ಹರಿಸುವ ಮತ್ತು ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡುವ ಗ್ರಾಮ ಲೆಕ್ಕಾಧಿಕಾರಿಗಳು ಸೇರಿ ಕಂದಾಯ ಇಲಾಖೆ ಅಧಿಕಾರಿಗಳು ಸರಕಾರದ ಸೌಲಭ್ಯ ತಲುಪಿಸುವುದನ್ನು ಸೇವಾ ಮನೋಭಾವದಲ್ಲಿ ತಮ್ಮ ಕರ್ತವ್ಯ ನಿರ್ವಹಿಸಬೇಕು ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ತಿಳಿಸಿದರು.ಫೆಬ್ರವರಿಯೊಳಗೆ ಅಭಿಯಾನ: ಕೂಡ್ಲಿಗಿ ತಾಲೂಕಾ ಈ ಬಾರಿ ಬರಗಾಲಕ್ಕೆ ತುತ್ತಾಗಿ ರೈತರು, ಕಾರ್ಮಿಕರು ಸೇರಿ ಜನ ಸಾಮಾನ್ಯರು ತುಂಬಾ ತೊಂದರೆ ಯಲ್ಲಿದ್ದಾರೆ. ಹೀಗಾಗಿ, ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಿ ಸರಕಾರದ ಸೌಲಭ್ಯವನ್ನು ಹೋಬಳಿ ಮಟ್ಟದಲ್ಲೇ ದೊರಕಿಸಿ ಕೊಡಬೇಕೆಂಬ ನಿಟ್ಟಿನಲ್ಲಿ ರೈತರ ಸಮಸ್ಯೆಗಳಾದ ಪೋಡಿ, ಪೌತಿ ಹಾಗೂ ಪಿಂಚಣಿ ಮುಕ್ತ ಮಾಡುವ ಅಭಿಯಾನವನ್ನು ಫೆಬ್ರವರಿಯೊಳಗೆ ನಡೆಸಲಾಗುವುದು. ಆದ್ದರಿಂದ, ಗ್ರಾಮೀಣ ಭಾಗದ ಕಂದಾಯ ಇಲಾಖೆಗೆ ಸಂಬಂಧಿಸಿದ ಜಮೀನು ಸೇರಿ ನಾನಾ ಸಮಸ್ಯೆಗಳನ್ನು ಬಗೆ ಹರಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗುವಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಸೂಚಿಸಿದರು.ಈ ಸಂದರ್ಭದಲ್ಲಿ ತಹಸೀಲ್ದಾರ್ ಎಂ.ರೇಣುಕಾ, ತಾಪಂ ಇಒ ವೈ.ರವಿಕುಮಾರ್, ಎಡಿಎಲ್‌ಆರ್ ಗಂಡಿ ಬಸವರಾಜ, ಉಪ ನೋಂದಣಾಧಿಕಾರಿ ವೈಶಾಲಿ, ಉಪ ಖಜಾನೆ ಅಧಿಕಾರಿ ಪ್ರಭುದೇವ್, ಪ.ಪಂ ಮುಖ್ಯಾಧಿಕಾರಿ ಫಿರೋಜ್ ಖಾನ್, ತಹಸೀಲ್ದಾರ್ ಕಚೇರಿ ಶಿರಸ್ತೇದಾರರಾದ ಮಹಮದ್ ಗೌಸ್, ಚಂದ್ರಶೇಖರ್, ಗುಡೇಕೋಟೆ ಉಪ ತಹಸೀಲ್ದಾರ್ ಕೊಟ್ರಮ್ಮ, ಕಂದಾಯ ನಿರೀಕ್ಷೆಕರಾದ ಚೌಡಪ್ಪ,ಮಲ್ಲಿಕಾರ್ಜುನ ಗೌಡ, ಚನ್ನಬಸಯ್ಯ, ತಾಲೂಕಾ ಕಚೇರಿ ಸಿಬ್ಬಂದಿ ಈಶಪ್ಪ, ಇಮ್ರಾನ್, ಚೌಡಪ್ಪ ಸೇರಿ ಇತರರಿದ್ದರು.

ಜಿಲ್ಲಾ ವರದಿಗಾರರು:ರಾಘವೇಂದ್ರ. ಸಾಲುಮನೆ. ಕೂಡ್ಲಿಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button