ರೈತಾಪಿ ವರ್ಗದ ಜಮೀನುಗಳಿಗೆ ಹೋಗುವ ರಸ್ತೆಗಳ ಅಭಿವೃದ್ಧಿ ಮರೀಚಿಕೆಯಾಗಿರುವ ಉದ್ದೇಶಕ್ಕೆ ಯಾರು ಹೊಣೆ ?.
ಹುನಗುಂದ ಜುಲೈ.15

ರೈತಾಪಿ ವರ್ಗಕ್ಕೆ ತಮ್ಮ ಜಮೀನುಗಳಿಗೆ ಹೋಗಲು ಸರಕಾರದ ಯೋಜನೆಯಾದ “ ನಮ್ಮ ಹೊಲ ನಮ್ಮ ರಸ್ತೆ – ಈ ಯೋಜನೆಯ ಒಂದು ನೈಜ ಉದಾಹರಣೆ ಹುನಗುಂದಿಂದ ಹೂಲಗೇರಿ ರಸ್ತೆ ಈ ರಸ್ತೆಯಲ್ಲಿ ಹುನಗಂದ ನಗರದ ಬಹಳಷ್ಟು ರೈತಾಪಿ ವರ್ಗದವರ ಜಮೀನುಗಳು ಇದ್ದು ಈ ರಸ್ತೆಯಲ್ಲಿ ಒಟ್ಟು ರೈತನು ತನ್ನ ಎತ್ತಿನಗಾಡಿಯನ್ನು ತೆಗೆದುಕೊಂಡು ನಡೆದರೆ ರಸ್ತೆಯಲ್ಲಿ ತೆಗ್ಗು ದಿನ್ನಿಗಳು-ನೀರು-ಪೇರು-ಇಳಿವು-ಇಕ್ಕಟ್ಟಾದ ಸ್ಥಿತಿ ಜೊತೆಗೆ ರಸ್ತೆಯ ಅಕ್ಕ- ಪಕ್ಕ ಬೆಳೆದ ಜೀನಿಕಂಠಿಗಳ ದರ್ಬಾರ್ ಇದರ ಜೊತೆಗೆ ಜೀನಿಕಂಠಿಗಳಿಂದ ಎತ್ತುಗಳ ಮೈ ಪರುಚುವುದರ ಜೊತೆಗೆ ಒಮ್ಮೊಮ್ಮೆ ರೈತರ ಮೈ-ಕೈ-ಕಾಲುಗಳಿಗೂ ಜೀನಿಕಂಠಿಗಳು ಪರಚಿಕೊಳ್ಳುವುದು ಸಾಮಾನ್ಯವಾಗಿ ನಡೆದೇ ಇದೆ. ಈ ರಸ್ತೆಗೆ ಸುಮಾರು ವರ್ಷಗಳ ಹಿಂದೆ ತೆನಹಳ್ಳಿಯವರ ಹೊಲದಿಂದ ಅವಾರಿಯವರ ಜಮೀನಿನವರೆಗೆ ಗಿಂಠಿಗಳನ್ನು ಅರ್ಧ-ಮರ್ದ ಜೆ.ಸಿ.ಬಿ ಯಿಂದ ತೆಗೆದು ಸ್ವಲ್ಪ ಪ್ರಮಾಣದಲ್ಲಿ ಗರಸು ಹಾಕಿ * ನಮ್ಮ ಹೊಲ ನಮ್ಮ ರಸ್ತೆ * ಯೋಜನೆಯಲ್ಲಿ ಮಾಡಿ ಸರಕಾರದ ಹಣವನ್ನು ಸ್ವಾಹ – ಮಾಡಿರುವರೆಂದು ರೈತಾಪಿ ವರ್ಗದವರು ಮಾನಾಡುವುದು ಸಾಮಾನ್ಯವಾಗಿದೆ

. ಈ ರಸ್ತೆಯು ಹನಗುಂದದಿಂದ ಗ್ರಾನೈಟ್ ಶಿಲೆಗೆ ಪ್ರಸಿದ್ಧವಾಗಿರುವ ಕುಷ್ಟಗಿ ತಾಲೂಕಿಗೆ ಒಳಪಡುವ ಹೂಲಗೇರಿ ಗ್ರಾಮಕ್ಕೆ ತಲುಪುವುದು ಈ ಗ್ರಾಮಕ್ಕೆ ಹೋಗಬೇಕಾದರೆ ಹುನಗುಂದದಿಂದ 12 ಕಿ.ಮೀ, ಇಲಕಲ್ ಗೆ ಹೋಗಬೇಕು ಇಲಕಲ್ಲದಿಂದ 10 ಕಿ.ಮೀ. ಹೂಲಗೇರಿಗೆ ಒಟ್ಟು 22 ಕಿ.ಮೀ ಆದರೆ ಹುನಗುಂದದಿಂದ ರೈತರ ಜಮೀನುಗಳಿಗೆ ಹೋಗುವ ರಸ್ತೆಯಾದ ಹೂಲಗೇರಿ ರಸ್ತೆಯಿಂದ ಕೇವಲ 8 ಕಿ. ಮೀ-ದಲ್ಲಿ ಹೂಲಗೇರಿ ಗ್ರಾಮವನ್ನು ತಲುಪಬಹುದು ಇಲ್ಲಿ “14 ಕಿ.ಮೀ” ಅಂತರ ಕಡಿಮೆಯಾಗುವುದು ಈ ರಸ್ತೆಯನ್ನು ಸಂಪೂರ್ಣ ಅಭಿವೃದ್ಧಿ ಪಡಿಸಿದರೆ ಹೂಲಗೇರಿ ರಸ್ತೆ ಇಂದಿಗೂ ರಸ್ತೆಗೆ ರೈತಾಪಿ ವರ್ಗ ರೂಢಿಯಲ್ಲಿ ಮಾತನಾಡುವದರ ಜೊತೆಗೆ ರೈತರು ಜಮೀನುಗಳಲ್ಲಿ ಬಿತ್ತನೆ ಮಾಡುವ ಸಂದರ್ಭ ಹಾಗೂ ಬೆಳೆಗಳು – ಕೊಯಿಲಿಗೆ ಬಂದ ಸಂದರ್ಭದಲ್ಲಿ ಈ ರಸ್ತೆ ಎಷ್ಟು ಹೊಲಸಾಗಿದೆ- ಹದಗೆಟ್ಟಿರುವದು ಹೊಲಕ್ಕೆ ಹೋಗೋದ ಒಂದು ದೊಡ್ಡ ಸಾಹಸ ಪಡಬೇಕು ಎಂದು ರೈತಾಪಿ ವರ್ಗ ಇಂದಿಗೂ ಆ ನಿರ್ಜೀವ ರಸ್ತೆಗೆ ಹಿಡಿಶಾಪ ಹಾಕುತ್ತಲೆ ಇದ್ದಾರೆ ಮತ್ತೊಂದು ಕಡೆ * ಜನಪ್ರತಿನಿಧಿಗಳು * ಹೇಳುವರು ” ನಮ್ಮ ಹೊಲ ನಮ್ಮ ರಸ್ತೆ ಯೋಜನೆಯಡಿ ಪ್ರತಿ ಮತಕ್ಷೇತ್ರಕ್ಕೆ – 37 ಕಿ.ಮೀ. – ನಿರ್ಮಾಣಕ್ಕೆ – ಉದ್ಯೋಗ ಖಾತ್ರಿ ಯೋಜನೆ ಅಡಿ ಅವಕಾಶ ನೀಡಿದ್ದು, ಅದರಂತೆ ಆಧಿಕಾರಿಗಳು ನಕಾಶದಲ್ಲಿಯ ರಸ್ತೆಗಳ ನಕ್ಷೆ ತೆಗೆದುಕೊಂಡು ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಹೇಳುವರು ಆದರೆ ” ದೇವರು ವರಕೊಟ್ಟರು, ಪೂಜಾರಿ ವರ ಕೊಡಬೇಕಲ್ಲಾ? – ಎಂಬಂತೆ ಯಾವ ಒಬ್ಬ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಈ ರಸ್ತೆಯ ಗೋಜಿಗೆ ಇದುವರೆಗೂ ಹೋಗಿರುವುದಿಲ್ಲಾ, ಇನ್ನು ಕೆಲವು ಪ್ರಮುಖ ರಸ್ತೆಗಳಾದ ಗುಂಡಮ್ಮನ ರಸ್ತೆ – ಕಾಲುದಾರಿ ರಸ್ತೆ – ಚಿಕ್ಕಬಾದವಾಡಗಿ ಒಳರಸ್ತೆ – ದ್ಯಾಮವ್ವನ ರಸ್ತೆ – ಇದಿರಾಳು ಹನಮಪ್ಪನ ಪಕ್ಕದ ರಾಮವಾಡಗಿ – ಮರೋಳ ರಸ್ತೆ. ಈ ಎಲ್ಲಾ ರೈತಾಪಿ ವರ್ಗದ ರಸ್ತೆಗಳು ಗಿಡ- ಗಂಟೆಗಳು – ತೆಗ್ಗು – ದಿನ್ನಿಗಳಿಂದ ರಸ್ತೆಗಳು ಸಂಪೂರ್ಣ ಹಾಳಾಗಿ ರೈತಾಪಿ ವರ್ಗ ತಮ್ಮ ಜಮೀನುಗಳಿಗೆ ಹೋಗಿ ಬರಲು ಚಿಂತಾಜನಕವಾಗಿರುವದು ಎಷ್ಟು ವಿಪರ್ಯಾಸ ಇನ್ನು ಕೆಲವು ರಸ್ತೆಗಳು ಅತಿಕ್ರಮಣಕಾರರಿಂದ ರಸ್ತೆಗಳೇ ಮಾಯವಾಗಿರುವವು ರೈತಾಪಿ ವರ್ಗಕ್ಕೆ ತಮ್ಮ ಜಮೀನುಗಳಿಗೆ ರಸ್ತೆ ಯಾವುದಯ್ಯಾ ಈ ವಿಷಯವಾಗಿ ಆಗಾಗ ಕದನಗಳು ನಡೆಯುತ್ತಲೇ ಇದೆ ,-, ನಡೆಯುತ್ತಲೇ ಇದೆ “ನೀನೇ ಹೇಳಬೇಕು ನಮ್ಮ ಹೊಲ ನಮ್ಮ ರಸ್ತೆ….! “.
ಪತ್ರಿಕೆ ವರದಿಗಾರರು:ಮಹಾಂತೇಶ.ಎಸ್.ಜಿಗಳೂರ. ಹುನಗುಂದ