ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ನಂ. 2 ಶಾಲೆಯಲ್ಲಿ 2024/25 ನೇ. ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಏಳನೇ ವಿದ್ಯಾರ್ಥಿಗಳ – ಬಿಳ್ಕೊಡುವ ಸಮಾರಂಭವು ಅದ್ದೂರಿಯಾಗಿ ಜರಗಿತು.
ಕಲಕೇರಿ ಫೆ.08

ತಾಳಿಕೋಟೆ ತಾಲೂಕಿನ ಕಲಕೇರಿ ಗ್ರಾಮದಲ್ಲಿ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ನಂಬರ್ 2. ಶಾಲೆಯಲ್ಲಿ 2024/25 ನೇ. ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಏಳನೇ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭ ಜರುಗಿತು. ದಿವ್ಯ ಸಾನಿಧ್ಯ ಮೌಲಾನಾ ನಾಸೀರ್ ಉಮ್ರಿ ಇನಾಮದಾರ. ಇವರು ಮಕ್ಕಳನ್ನು ತಾಯಿ ತಂದೆ ಮಕ್ಕಳು ಶಾಲೆಗೆ ಹೋಗುತ್ತಾವೋ ಇಲ್ಲ ಎಂಬುದನ್ನು ತಿಳ್ಕೊಬೇಕು ಅದು ಜವಾಬ್ದಾರಿ ತಂದೆ ತಾಯಿಯರು ಈ ಜಗತ್ತಿನಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸ ಇದ್ದರೆ ಮಾತ್ರ ಅವರಿಗೆ ಬೆಲೆ ಹೆಚ್ಚುತ್ತದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.ಡಾ, ಪ್ರಭುಗೌಡ ಲಿಂಗದಳ್ಳಿ ಅನುಗ್ರಹ ಕಣ್ಣಿನ ಆಸ್ಪತ್ರೆ ವಿಜಯಪುರ ಇವರು ಮಕ್ಕಳಿಗೆ ಮೊದಲನೇ ಗುರು ತಾಯಿ ತಂದೆ ತಾಯಿ ತಂದೆ ಕೆಲಸ ಏನೆಂದರೆ ಮಕ್ಕಳು ಶಾಲೆಗೆ ಹೋಗುತ್ತಾವೋ ಇಲ್ಲ ಎಂಬುದನ್ನು ತಿಳಿಯಬೇಕು ಅದು ನಂತರ ಶಾಲೆಯಿಂದ ಮನೆಗೆ ಬಂದ ಮಕ್ಕಳನ್ನು ಟೀಚರ್ ಹೋಮ್ ವರ್ಕ್ ಹಾಕಿದ್ದಾರೋ ಇಲ್ಲೋ ಕೇಳಬೇಕು ಅದು ತಾಯಿಯ ಕರ್ತವ್ಯ ಹೋಮ್ ವರ್ಕ್ ಇದೆಯೋ ಇಲ್ಲವೋ ಅಂದರೆ ನನ್ನ ಮಗು ಶಾಲೆಗೆ ಹೋಗಿಲ್ಲ ಎಂದು ತಿಳಿಯಬೇಕು ಯಾಕೆ ಈ ಮಾತು ನಿಮಗೆ ಪಾಲಕರಿಗೆ ತಿಳಿಸ್ತೀವಿ ಅಂದರೆ ಮಕ್ಕಳಿಗೆ ವಿದ್ಯಾಭ್ಯಾಸ ಮೊದಲು ಬೇಕು ವಿದ್ಯಾ ಧ್ಯಾನ ಅವೆರಡು ತಂದೆ ತಾಯಿ ಎಂಬುದನ್ನು ಮರೆಯಬೇಡಿ ಮಕ್ಕಳಿಗೆ ಮೊದಲನೇ ಗುರು ತಾಯಿ ಎರಡನೇ ಗುರು ತಂದೆ ಮೂರನೇ ಗುರು ಶಿಕ್ಷಕರು ಇದನ್ನು ಅರಿತು ಮಕ್ಕಳನ್ನು ಚೆನ್ನಾಗಿ ಓದಿ ದೊಡ್ಡ ವಿದ್ಯಾವಂತ ನಾಗಬೇಕು ಎಂಬುದು ಆಸೆ ತಾಯಿಗೆ ಇರುತ್ತದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ಆಬೀದ್ ಹುಸೇನ್ ಇನಾಮದಾರ ಎಸ್.ಡಿ.ಎಂ.ಸಿ ಅಧ್ಯಕ್ಷರು. ಶ್ರೀ ಮತಿ ತಾಹೇರಾಬೇಗಂ ಅಬ್ದುಲ ಗನಿ ಉಸ್ತಾದ್ ಎಸ್.ಡಿ.ಎಂ.ಸಿ ಉಪಾಧ್ಯಕ್ಷರು. ಕಲಕೇರಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ರಾಜ ಅಹ್ಮದ್ ಸಿರಸಗಿ. ಮಾಜಿ ತಾಲೂಕ ಪಂಚಾಯಿತಿಯ ಸದಸ್ಯರಾದ ಲಕ್ಕಪ್ಪ ಬಡಿಗೇರ್ ಇವರು ಈ ಸಂದರ್ಭದಲ್ಲಿ ನಮ್ಮ ಗ್ರಾಮದಲ್ಲಿ ನಂಬರ್ ಎರಡು ಉರ್ದು ಶಾಲೆಯ ಮಕ್ಕಳು ವಿದ್ಯಾ ಅಭ್ಯಾಸದಲ್ಲಿ ಬಹಳ ಮುಂದಿದ್ದಾರೆ ಎಂದು ಪಾಲಕರಿಗೆ ದಿನ ನಿತ್ಯ ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವ ನಿಮ್ಮ ಕೆಲಸ ಶಾಲೆಯಲ್ಲಿ ಮಕ್ಕಳನ್ನು ವಿದ್ಯಾಭ್ಯಾಸ ಮಾಡುವುದು ಶಿಕ್ಷಕರ ಕೆಲಸ ಆದರೂ ಈ ಶಾಲೆಯ ಶಿಕ್ಷಕರು ಮಕ್ಕಳನ್ನು ಬಾಳ ಚೆನ್ನಾಗಿ ಪಾಠವನ್ನು ಹೇಳುತ್ತಾರೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು. ಗ್ರಾಮ ಪಂಚಾಯಿತಿಯ ಸದಸ್ಯರಾದ ಕಾಸಿಂಸಾಬ್ ನಾಯ್ಕೋಡಿ ಇವರು ಮೊದಲು ಖಾಸಗಿ ಶಾಲೆಯಲ್ಲಿ ಅನೇಕ ಕಾರ್ಯಕ್ರಮಗಳು ನಡೀತಾ ಇದ್ದುವು ಆದರೆ ಈಗ ಸರ್ಕಾರಿ ಶಾಲೆಗಳಲ್ಲಿ ಇಂಥವೆಲ್ಲ ಕಾರ್ಯಕ್ರಮಗಳು ಮಾಡ್ತಾ ಇದ್ದಾರೆ ನಮಗೆ ಬಹಳ ಸಂತೋಷ ಆಗಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.ಅಪ್ಪು ದೇಸಾಯಿ ಇವರು ನಮ್ಮ ಮಕ್ಕಳನ್ನ ಸರಕಾರಿ ಶಾಲೆಗಳಲ್ಲಿ ಓದಿಸಬೇಕು ಎಂದು ತಿಳಿಸಿದರು ಖಾಸಗಿ ಶಾಲೆಯಲ್ಲಿ ಅನೇಕ ದುಡ್ಡನ್ನು ಕಟ್ಟಿ ನಮ್ಮ ಮಕ್ಕಳು ಯಾವ ಕಾಲಕ್ಕೂ ವಿದ್ಯಾಭ್ಯಾಸ ತಲೆಗೆ ಹತ್ತಲ್ಲ ಅದೇ ಸರ್ಕಾರಿ ಶಾಲೆಗಳಲ್ಲಿ ಮಕ್ಕಳನ್ನ ಓದಿಸಿದರೆ ಮುಂದೆ ಮಕ್ಕಳು ದೊಡ್ಡ ದೊಡ್ಡ ಆಫೀಸರ್ಗಳು ಆಗಬಹುದು ಎಂದು ದಯವಿಟ್ಟು ನಿಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳಿಸಿರಿ ಎಂದು ಈ ಸಂದರ್ಭದಲ್ಲಿ ತಿಳಿಸಿದರು. ಚಾಂದ್ ಪಾಷಾ ಹವಾಲ್ದಾರ್ ಪಾಲಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಒಂದು ಕವನವನ್ನು ಹೇಳಿದರು ನಾನು ಹೇಳಿದ ಕವನವನ್ನು ಪಾಲಕರೆಲ್ಲಾ ಅರ್ಥ ಮಾಡಿ ಕೊಳ್ಳಬೇಕು ಎಂದು ಈ ಸಂದರ್ಭದಲ್ಲಿ ತಿಳಿಸಿದರು. ಎಸ್.ಎಲ್ ನಾಯಕೋಡಿ ಕನ್ನಡ ಸಿ.ಆರ್.ಪಿ ಕಲಕೇರಿ. ನಬಿಲಾಲ್.ನಾಯ್ಕೋಡಿ ಗ್ರಾಮ ಪಂಚಾಯಿತಿ ಸದಸ್ಯರು.ದಾವಲ್.ನಾಯ್ಕೋಡಿ. ಕೆ.ಎಸ್ ವಲ್ಲಿಬಾಯಿ ನಿವೃತ್ತ ಶಿಕ್ಷಕರು. ಕೆ.ಎಚ್ ವಡ್ಡರ್ ಸಹಕಾರಿ ಸಂಘಗಳ ಸಹಕಾರಿ ಸಂಘಗಳ ಸಹಾಯಕ ನಿಬಂಧಕರು. ಹಾಜಿ ಪಾಷಾ ಜಾಗಿರ್ದಾರ್ ಗ್ರಾಮ ಪಂಚಾಯಿತಿ ಸದಸ್ಯರು. ಅಕ್ಬರ್ ಭಾಷಾ ಬಡಮಗೋಳ. ಹುಸೇನ್ ಬಾಷಾ ಬಡೇಘರ ಅಂಜುಮನ್ ಚೇರ್ಮನ್. ಮಹಮ್ಮದ್ ರಫಿ ಮಂದೆವಾಲ್.ಭಾಷಾ ಸಾಬ್ ಉಸ್ತಾದ್. ಹುಸೇನ್ ನಾಯ್ಕೋಡಿ. ದಾವಲ್ ಸಾಬ್ ಮುಲ್ಲಾ. ಎಲ್ಲಾ ಎಸ್.ಡಿ.ಎಂ.ಸಿ ಸದಸ್ಯರು ಹಾಗೂ ಊರಿನ ಗುರು ಹಿರಿಯರು ಈ ಶಾಲೆಯ ಮುಖ್ಯ ಗುರುಗಳು ಶಿಕ್ಷಕರು ಗುರು ಮಾತೆಯರು ಮತ್ತು ವಿದ್ಯಾರ್ಥಿಗಳು ಸೇರಿದಂತೆ ಶಾಲೆಯ ಕಾರ್ಯಕ್ರಮವು ಅದ್ದೂರಿಯಿಂದ ಜರುಗಿತು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ.ಮನಗೂಳಿ.ತಾಳಿಕೋಟೆ