ಅಂಬೇಡ್ಕರ್ ಅಧ್ಯಾಯನ ಪೀಠಕ್ಕೆ ಜಾಮೀನು ನೀಡಲಾಗುವುದು – ಡಾ.ಕೆ.ಜೆ.ಕಾಂತರಾಜ್.

ತರೀಕೆರೆ ಜನೇವರಿ.6

ತಾಲೂಕಾ ನಂದಿ ಹೊಸಳ್ಳಿ ಸರ್ವೇ ನಂಬರ್ 34 ರಲ್ಲಿ ಅಥವಾ ದೋರನಾಳು ಸರ್ವೇ ನಂಬರ್ 225.ರಲ್ಲಿಯಾದರೂ ಎಲ್ಲಿ ಜಮೀನು ಲಭ್ಯವಿದೆಯೋ,ಅಲ್ಲಿ ಅಂಬೇಡ್ಕರ್ ಅಧ್ಯಯನ ಪೀಠಕ್ಕೆ 10 ಎಕರೆ ಜಮೀನು ನೀಡಲಾಗುವುದು ಎಂದು ತರಿಕೆರೆ ಉಪ ವಿಭಾಗಾಧಿಕಾರಿ ಡಾ. ಕೆಜೆ ಕಾಂತರಾಜು ರವರು ಹೇಳಿದರು. ಅವರು ತಾಲೂಕಾ ಆಡಳಿತ ಸೌಧದಲ್ಲಿ ಉಪ ವಿಭಾಗ ಮಟ್ಟದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ದೌರ್ಜನ್ಯ ನಿಯಂತ್ರಣ ಜಾಗೃತಿ ಉಸ್ತುವಾರಿ ಸಮಿತಿ ಸಭೆಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕರಾದ ತರೀಕೆರೆ ಏನ್ ವೆಂಕಟೇಶ್ ರವರ ಮನವಿಗೆ ಉತ್ತರಿಸಿದರು. ಬುದ್ಧ ವಿಹಾರಕ್ಕೆ ದ್ಯಾಂಪುರ ಗ್ರಾಮದ ಸರ್ವೇ ನಂಬರ್ 13.ರಲ್ಲಿ 5.ಎಕರೆ ಜಮೀನು ಕಾಯ್ದಿರಿಸಲಾಗಿದೆ ಎಂದು ಹೇಳಿದರು. ಬೆಲೆನಳ್ಳಿ ದಲಿತರಿಗೆ ಹೆಚ್ ತಿಮ್ಮಾಪುರ ಗ್ರಾಮ ಸರ್ವೆ ನಂಬರ್ 26.ರಲ್ಲಿ ಸ್ಮಶಾನಕ್ಕೆ ಜಾಗ ನೀಡಲು ರಾಜಸ್ವ ನಿರೀಕ್ಷಕರಾದ ರೇವಣ್ಣ ರವರಿಗೆ ಸ್ಥಳ ಪರಿಶೀಲನೆ ಮಾಡಿ ವರದಿ ನೀಡಲು ತಿಳಿಸಿದರು. ಹುರಳಿಹಳ್ಳಿ ಗ್ರಾಮದ ಸರ್ವೆ ನಂಬರ್ 73.ರಲ್ಲಿ 20.ಜನ ನಿವೇಶನ ರೈತ ದಲಿತರಿಗೆ ನಿವೇಶನ ನೀಡಲು ಕ್ರಮ ವಹಿಸಲಾಗುವುದು, ಬೆಲೆನಳ್ಳಿ ಅಂಬೇಡ್ಕರ್ ಕಾಲೋನಿಯಲ್ಲಿ ವಾಸವಾಗಿರುವ ಮನೆಗಳಿಗೆ ಹಕ್ಕುಪತ್ರ ನೀಡಲು ಆ ಜಾಗವನ್ನು ಸರ್ಕಾರದ ಸ್ವಾಧೀನಕ್ಕೆ ಪಡೆದು ಹಕ್ಕುಪತ್ರ ನೀಡಲಾಗುವುದು ಎಂದು ಹೇಳಿದರು. ತರೀಕೆರೆ ಪಟ್ಟಣದ ಸ್ಮಶಾನಕ್ಕೆ ಐ ಮಾಸ್ಕ್ ದೀಪ, ಕಬ್ಬಿಣದ ಗೇಟು ಮತ್ತು ಸ್ನಾನದ ಗೃಹ ನಿರ್ಮಾಣ ಹಾಗೂ ರಸ್ತೆ ಸಂಪರ್ಕಕ್ಕೆ ಪುರಸಭಾ ಮುಖ್ಯ ಅಧಿಕಾರಿ ಹೆಚ್ ಪ್ರಶಾಂತ್ ರವರಿಗೆ ತಿಳಿಸಿದರು. ಮುಖ್ಯ ಅಧಿಕಾರಿ ಮಾತನಾಡಿ ನಗರೋತ್ಥಾನ ಯೋಜನೆ ಅಡಿಯಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು. ಸಮಿತಿ ಸದಸ್ಯರಾದ ಎನ್ ಆರ್ ಪುರದ ರಾಮು ರವರ ಮನವಿಯಂತೆ ಆವಾಡಿಗರಿಗೆ ಜಾತಿ ಪ್ರಮಾಣ ಪತ್ರ ನೀಡಲು ಜಾತಿ ಪರಿಶೀಲನ ವರದಿ ಆಧರಿಸಿ ನೀಡಲು ಎನ್ಆರ್ ಪುರದ ತಹಶೀಲ್ದಾರ್ ತನುಜಾ ಸವದತ್ತಿ ರವರಿಗೆ ತಿಳಿಸಿದರು. ನಂತರ ನಡೆದ ಸಪಾಯಿ ಕರ್ಮಚಾರಿ ಮತ್ತು ಅದರ ಪುನರ್ವಸತಿ ಕಾಯ್ದೆಯ ವಿಜಿಲೆನ್ಸಿಸ್ ಸಮಿತಿ ಸಭೆಯಲ್ಲಿ, ಸಮಿತಿ ಸದಸ್ಯರಾದ ತರೀಕೆರೆ ಎನ್ ವೆಂಕಟೇಶ್ ಪೌರ ಕಾರ್ಮಿಕರಿಗೆ ವಸತಿ ಸೌಲಭ್ಯ ಕೊಡಬೇಕೆಂದು ಸಭೆಯಲ್ಲಿ ತಿಳಿಸಿದರು, ಗೃಹ ಭಾಗ್ಯ ಯೋಜನೆ ಅಡಿ ತರೀಕೆರೆ,ಬೀರೂರು, ಅಜ್ಜಂಪುರ,ಎನ್ ಆರ್ ಪುರ ತಾಲೂಕು ಮುಖ್ಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಹಾಗೂ ಇಎಸ್ಐ ಕಾರ್ಡು ವಿತರಿಸಬೇಕು ಪೌರ ಕಾರ್ಮಿಕರಿಗೆ ವಿಶ್ರಾಂತಿ ಗೃಹಗಳನ್ನು ನಿರ್ಮಿಸಿ ವರದಿ ನೀಡಬೇಕೆಂದು ಸಭಾಧ್ಯಕ್ಷರಾದ ಡಾ. ಕೆಜೆ ಕಾಂತರಾಜ್ ರವರು ತಿಳಿಸಿದರು. ಸಮಿತಿ ಸದಸ್ಯರಾದ ಕೆ ನಾಗರಾಜ್, ಎಸ್ ಎನ್ ಸಿದ್ದರಾಮಪ್ಪ, ಎಸ್ ಕೆ ಸ್ವಾಮಿ, ಎಸ್ ಎನ್ ಮಹೇಂದ್ರ ಸ್ವಾಮಿ, ಎಚ್ ವಿ ಬಾಲರಾಜ್, ಎಸ್ ಆನಂದ, ಜಿ ಟಿ ರಮೇಶ, ಟಿಎಸ್ ಬಸವರಾಜ್, ಹಾಗೂ ಪೊಲೀಸು ಉಪ ಅಧೀಕ್ಷಕರಾದ ವಿ ಎಸ್ ಹಾಲಮೂರ್ತಿ ರಾವ್, ತರೀಕೆರೆ ತಾಶಿಲ್ದಾರ್ ರಾಜೀವ, ಎನ್ ಆರ್ ಪುರ ತಹಶೀಲ್ದಾರ್ ತನುಜಾ ಸೌದತ್ತಿ, ಅಜ್ಜಂಪುರ ತಹಸಿಲ್ದಾರ್ ಶಿವ ಶರಣ ಕಟ್ಟೋಳಿ, ಪುರಸಭಾ ಮುಖ್ಯ ಅಧಿಕಾರಿ ಹೆಚ್ ಪ್ರಶಾಂತ್, ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ಎಸ್ ಮಂಜುನಾಥ್, ಬಿಇಒ ಗೋವಿಂದಪ್ಪ, ಮುಂತಾದವರು ಉಪಸ್ಥಿತರಿದ್ದರು.

ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್.ತರೀಕೆರೆ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Your email address will not be published. Required fields are marked *

Back to top button