SMS ಪದವಿ ಪೂರ್ವ ಕಾಲೇಜ್ ನಲ್ಲಿ ಶ್ರೀ ಮತಿ ಸಾವಿತ್ರಿ ಬಾಯಿ ಪುಲೆ ಅವರ 193 ನೇ ಜಯಂತಿಯನ್ನು ಆಚರಿಸಲಾಯಿತು.
ಅಥಣಿ 07/01/2024 :

ಇಂದು ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಎಸ್ಎಂಎಸ್ ಪದವಿಪೂರ್ವ ಕಾಲೇಜ ಅಡಿಟೋರಿಯಂ ಹಾಲ್ ನಲ್ಲಿ ನಡೆಯಲಿರುವ ಭಾರತದ ಪ್ರಥಮ ಮಹಿಳಾ ಶಿಕ್ಷಕಿ,ಅಕ್ಷರದ ಅವ್ವ ಶ್ರೀಮತಿ ಸಾವಿತ್ರಿಬಾಯಿ ಫುಲೆ ಅವರ 193ನೇ ಜಯಂತಿ ಕಾರ್ಯಕ್ರಮ ಮುಂಜಾನೆ ದಿವ್ಯಸಾನಿಧ್ಯದಲ್ಲಿ ಪರಮಪೂಜ್ಯ ಮರುಳಸಿದ್ದ ಮಹಾಸ್ವಾಮಿ ಶೆಟ್ಟರ ಮಠ ಜರುಗಿತು .

ನಮ್ಮ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀಮತಿ ಡಾ ಲತಾ ಮುಳ್ಳೂರ ಜಿಲ್ಲಾಧ್ಯಕ್ಷರಾದ ಉಮಾ ಪಡಪ್ಪನವರ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಶ್ರೀಮತಿ ಶೋಭಾ ಪಾಟೀಲ ಮತ್ತು ತಾಲೂಕ ಅಧ್ಯಕ್ಷರಾದ ರೇಣುಕಾ ಬಡಕಂಬಿ ಹಾಗೂ ಎಲ್ಲ ತಾಲೂಕ ಪದಾಧಿಕಾರಿಗಳು ಉಪಸ್ಥಿತರಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ ಎಮ್ ಬಿ ಮೋರಟಗಿ, ಕ್ಷೇತ್ರ ಶಿಕ್ಷಣಾಧಿಕಾರಿ ಜಯಕೋಟ್ ಕ್ಷೇತ್ರ ಸಮನ್ವಾಧಿಕಾರಿಗಳು ಬಿ ಆರ್ ಪಿ ಗಳು, ಸಿಆರ್ಪಿಗಳು ಕರ್ನಾಟಕ ರಾಜ್ಯ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀ ಎ ಎಚ್ ಮುಜಾವರ್ ಹಾಗೂ ಸಂಘದ ಎಲ್ಲ ಪದಾಧಿಕಾರಿಗಳು ಶ್ರೀ ಬಿ ಎಮ್ ಮೋಪಗಾರ, ಶ್ರೀ ಎ ಎ ದೇಶಮುಖ, ಶ್ರೀ ಅನಿಲ್ ಗಸ್ತಿ, ಶ್ರೀ ನಾಗಪ್ಪ , ಉಗಾರೆ ಶ್ರೀಸುನಿಲ್ ಸನದಿ ವಿವಿಧ ಸಂಘದ ಅಧ್ಯಕ್ಷರು ಪದಾಧಿಕಾರಿಗಳು ಉಪಸ್ಥಿತರಿದ್ದರು. ಶ್ರೀ ಮತಿ ದೀಪಾ ಕರಡಿಯವರ ವಿಶೇಷ ಉಪನ್ಯಾಸ ನೀಡಿದರು .
ಅಥಣಿ ವಲಯದಲ್ಲಿ ವಿಶೇಷ ಸಾಧನೆಗೈದ ಶಿಕ್ಷಕಿಯರ ಪ್ರಶಸ್ತಿ ಪ್ರಧಾನ ಸಮಾರಂಭ ತಾಲೂಕಿನ ಸಮಸ್ತ ಶಿಕ್ಷಕ ಸಹೋದರ ಸಹೋದರಿಯರು ಹಾಗೂ ಗುರು ಸೇವಾ ಬಳಗದ ಎಲ್ಲ ಮುಖಂಡರು ಹಿರಿಯರು ಪದಾಧಿಕಾರಿಗಳು ಉಪಸ್ಥಿತರಿದ್ದರು . ಶ್ರೀ ಎ ಎಚ್ ಮುಜಾವರ್ ವಂದಿಸಿದರು.