ಅಂಜುಟಗಿ ಶ್ರೀಶಾರದಾಂಬೆ ಶಾಲೆಗೆ ಜೆ.ಜೆ.ಎಮ್ ಯೋಜನೆಯ ನೀರಿನ ವ್ಯವಸ್ಥೆ ಕಲ್ಪಿಸಿ.

ಅಂಜುಟಗಿ ಜನೇವರಿ.7

ಇಂಡಿ ತಾಲೂಕಿನ ಅಂಜುಟಗಿ ಗ್ರಾಮದ ಶ್ರೀ ಶಾರದಾಂಬೆ ಆಂಗ್ಲ್ ಹಾಗೂ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಯು ಇತ್ತೀಚಿನ ದಿನ ಮಾನಗಳಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವಲ್ಲಿ ಉತ್ತಮ ಕಾರ್ಯ ಸಾಧನೆಯತ್ತ ಸಾಗುತ್ತಿದೆ.ಈ ಶಾಲೆಯು ಗ್ರಾಮದ ಹೊರವಲದ ಅಂದಾಜು ಒಂದರಿಂದ ಎರಡು ಕೀ.ಮಿ.ಅಂತರದಲ್ಲಿದ್ದು,ಇದು ನಿಜವಾಗಿಯೂ ಪ್ರಾಚೀನ ಕಾಲದ ಉತ್ತಮ ಶಿಕ್ಷಣದ ಕೇಂದ್ರ ಬಿಂದುವಾಗಿದೆ.ಈ ಶಾಲೆಗೆ ಉತ್ತಮವಾದ ಕ್ರೀಡಾಂಗಣವಿದ್ದು,

ಸುತ್ತ ಮುತ್ತಲು ಬಗೆ-ಬಗೆಯ ಗಿಡ ಮರಗಳಿಗೆ. ಶಾಲೆಯ ಹತ್ತಿರವೇ ಅರಣ್ಯ ವಲಯದ ಗಿಡ ಮರಗಳು ಹೀಗೆ ವಿದ್ಯಾರ್ಥಿಗಳು ಕಲಿಯಲು ಪರಿಸರ ಮಡಿಲಿನಲ್ಲಿ ಕೇಂದ್ರ ಬಿಂದುವಾಗಿದ್ದು, ವಿದ್ಯಾರ್ಥಿಗಳ ಪ್ರತಿ ಕೋಣೆಗೊಂದು ಸಿ.ಸಿ.ಕ್ಯಾಮರ ಅಳವಡಿಕೆ.ಹೀಗೆ ಶಿಕ್ಷಣದ ಪ್ರಗತಿಗೆ ಅಲ್ಲಿಯ ಶಿಕ್ಷಕ ವೃಂದ ಹಾಗೂ ಎಸ್.ಡಿ.ಎಮ್.ಸಿ.ಮೇಲುಸ್ತುವಾರಿ ಸಮಿತಿ ಹಗಲಿರುಳು ವಿದ್ಯಾರ್ಥಿಗಳ ಸಲುವಾಗಿ ಶ್ರಮವಹಿಸುತ್ತಿದ್ದಾರೆ .ಆದರೆ ಈ ಶಾಲೆಗೆ ಪೂರಕವಾಗಿ ನೀರಿನ ವ್ಯವಸ್ಥೆ ಹೆಚ್ಚಿಸ ಬೇಕಾಗಿದೆ.ಅದಕ್ಕಾಗಿ ಆ ಶಾಲೆಗೆ ಸರ್ಕಾರದ ಜೆಜೆಎಮ್ ಯೋಜನೆ ಅಥವಾ ಇತರೆ ಯಾವುದಾದರೂ ಯೋಜನೆಯಡಿ ತಾಲೂಕಾ ಆಡಳಿತ ಇಲಾಖೆಯವರು ಹೆಚ್ಚಿನ ಗಮನ ಹರಿಸಿ, ವಿದ್ಯಾರ್ಥಿಗಳ ಶಿಕ್ಷಣದ ಹಿತ ದೃಷ್ಟಿಯಿಂದ ಉತ್ತಮ ನೀರಿನ ವ್ಯವಸ್ಥೆ ಕಲ್ಪಿಸಿ ಕೊಡಬೇಕೆಂದು.ಪತ್ರಕತ೯ರಾದ ಶಿವಾನಂದ ಹರಿಜನ ಇವರ ವಿನಂತಿಯ ಮನವಿಯಾಗಿದೆ.

ಜಿಲ್ಲಾ ವರದಿಗಾರರು:ಶಿವಪ್ಪ.ಹರಿಜನ.ಇಂಡಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button