ಕರ್ನಾಟಕ ಸಾವಿತ್ರಿ ಬಾಯಿ ಪುಲೆ ಮತ್ತು ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲೂಕು ಘಟಕ ದಿಂದ ಸಾವಿತ್ರಿಬಾಯಿ ಫುಲೆ ಅವರ ಜಯಂತಿ ಆಚರಿಸಲಾಯಿತು.
ಅಥಣಿ (07/01/2024) :

ಕರ್ನಾಟಕ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ (ರಿ)ತಾಲೂಕ ಘಟಕ ಮತ್ತು ಕರ್ನಾಟಕ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ) ತಾಲೂಕ ಘಟಕ ಅಥಣಿ.

ಇವರ ಸಹಯೋಗದಡಿಯಲ್ಲಿ ಇಂದು ದಿನಾಂಕ 07.01.2024 ರಂದು ತಾಲೂಕ ಮಟ್ಟದ ಸಾವಿತ್ರಿಬಾಯಿ ಫುಲೆ ಜಯಂತಿ ಆಚರಣೆ ಮತ್ತು ಪ್ರಶಸ್ತಿ ಪ್ರಧಾನ ಕಾರ್ಯಕ್ರಮಕ್ಕೆ ಸನ್ಮಾನ್ಯ ಮಾಜಿ ಉಪಮುಖ್ಯಮಂತ್ರಿಗಳು ಹಾಗೂ ಜನ ಮೆಚ್ಚಿದ ಶಾಸಕರಾದ ಶ್ರೀಯುತ ಲಕ್ಷ್ಮಣ.ಸಂ.ಸವದಿ ಅವರು ಸದರಿ ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಆಗಮಿಸಬೇಕಾಗಿತ್ತು. ಆದರೆ ವೇಳೆ ವ್ಯಥೆಯಿಂದ ಮತ್ತು ಪೂರ್ವ ನಿರ್ಧಾರಿತ ಕಾರ್ಯಕ್ರಮವಿರುವುದರಿಂದ ಅನಿವಾರ್ಯವಾಗಿ ಸಮಾರಂಭಕ್ಕೆ ಆಗಮಿಸಲು ಸಾಧ್ಯವಾಗಲಿಲ್ಲ ಮತ್ತು ನಿಮ್ಮ ಸಂಘಟನೆಯು ಇದೇ ರೀತಿಯಾಗಿ ಮುಂದುವರೆಯಲಿ ಎನ್ನುತ್ತಾ ಪ್ರಶಸ್ತಿ ಪುರಸ್ಕೃತ ಗುರುಮಾತೆಯರಿಗೆ ಶುಭಾಶಯ ತಿಳಿಸಿದರು.