ಪ್ರಧಾನ ಮಂತ್ರಿ ಆಯುಷ್ಮಾನ್ ಯೋಜನೆ ಅಡಿ ಹುಬ್ಬಳ್ಳಿಯಲ್ಲಿ ಬೃಹತ್ ಉಚಿತ ವೈದ್ಯಕೀಯ ಶಿಬಿರ .
ಕುಂದಗೋಳ . 07/01/2024
ಕ್ಷಮತಾ ಸೇವಾ ಸಂಸ್ಥೆ ಹುಬ್ಬಳ್ಳಿ ಹಾಗೂ ಭಾರತೀಯ ವೈದ್ಯಕೀಯ ಸಂಘ ಹುಬ್ಬಳ್ಳಿಯ ವತಿಯಿಂದ ಇಂದು ಕುಂದಗೋಳದ ಕಾಳಿದಾಸನಗರದಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಬೃಹತ್ ಉಚಿತ ವೈದ್ಯಕೀಯ ಶಿಬಿರ ನಡೆಯಿತು.

ಪ್ರಧಾನಮಂತ್ರಿ ಶ್ರೀ Narendra Modi ಅವರ ಮಹತ್ವಾಕಾಂಕ್ಷೆಯ ಆಯುಷ್ಮಾನ್ ಭಾರತ ಯೋಜನೆಯು ಆರೋಗ್ಯವಂತ ಭಾರತದ ಗುರಿಯೊಂದಿಗೆ ಶ್ರಮಿಸುತ್ತಿದ್ದು, ಈ ಯೋಜನೆಯಡಿ ನಮ್ಮ ಕ್ಷಮತಾ ಸಂಸ್ಥೆಯೂ ನಮ್ಮ ಕ್ಷೇತ್ರದ ಜನತೆಗಾಗಿ ಇಂತಹ ಉಚಿತ ಆರೋಗ್ಯ ಶಿಬಿರಗಳನ್ನು ನಡೆಸುತ್ತಿದೆ. ಇಂದಿನ ಶಿಬಿರದಲ್ಲಿ ನೂರಾರು ಗ್ರಾಮಸ್ಥರು ಪಾಲ್ಗೊಂಡು ಲಭ್ಯವಿರುವ ಸೌಲಭ್ಯಗಳನ್ನು ಜನತೆ ಸದುಪಯೋಗ ಪಡಿಸಿಕೊಂಡರು.
ಈ ಕಾರ್ಯಕ್ರಮದಲ್ಲಿ ಕುಂದಗೋಳದ ಶಾಸಕರಾದ ಶ್ರೀ M R Patil , ಮಾಜಿ ಪಟ್ಟಣ ಪಂಚಾಯತ ಅಧ್ಯಕ್ಷರುಗಳಾದ ಶ್ರೀ ವಾಗೀಶ ಗಂಗಾಯಿ, ಶ್ರೀ ಗಣೇಶ ಕೋಕಾಟೆ, ಮಾಜಿ ಪಟ್ಟಣ ಉಪಾಧ್ಯಕ್ಷರುಗಳಾದ ಶ್ರೀಮತಿ ಭುವನೇಶ್ವರಿ ಕವಲಗೇರಿ, ಶ್ರೀ ಹನುಮಂತಪ್ಪ ರಣತೂರು, ಬಿಜೆಪಿ ಕುಂದಗೋಳ ಮಂಡಳ ಅಧ್ಯಕ್ಷರಾದ ಶ್ರೀ ರವಿಗೌಡ ಪಾಟೀಲ ಹಾಗೂ ಗ್ರಾಮದ ಮತ್ತಿತರ ಗುರು ಹಿರಿಯರು ಉಪಸ್ಥಿತರಿದ್ದರು.