ಕೊಟ್ಟೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕಂತೆ ಕಂತೆಗಳ ಸಮಸ್ಯೆಗಳ ಆಗರ ‘ಕ್ಯಾರೇ ಎನ್ನದೇ ಡಿ.ಎಚ್.ಓ & ಟಿ.ಎಚ್.ಓ.

ಕೊಟ್ಟೂರು ಜನೇವರಿ.7

ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಕೊಟ್ಟೂರು ಪಟ್ಟಣದಲ್ಲಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸರಿಯಾದ ಆಡಳಿತ ಅಧಿಕಾರಿ ಇರದೆ ಇರುದರಿಂದ ‌’ಸಮಸ್ಯೆ’ಗಳ ಆಗರವೇ ಇದೆಯಂತೆ. ಹೆಸರಿಗೆ ಮಾತ್ರ 4 ಡಾಕ್ಟರ್ಸ್ ಇರುವರಂತೆ , ಸಮಯಕ್ಕೆ ಸರಿಯಾಗಿ ಕೆಲಸ ಮಾಡುವ ಒಬ್ಬ ಡಾಕ್ಟರ್ ಕೂಡ ಇರುವುದಿಲ್ಲವಂತೆ. ಯಾವ ಸಮಯದಲ್ಲಿ ಕೆಲಸ ಮಾಡುತ್ತಾರೋ, ಕೆಲಸ ಮಾಡದೇ ಹಾಗೆ ಕಾಲ ಕಳೆದು ಹೋಗುವರೋ ಆ ದೇವರಿಗೆ ಗೊತ್ತು, ಎಂದು ಅಲ್ಲಿನ ಸಾರ್ವಜನಿಕರಿಗೆ ಅರ್ಥವಾಗದಂತೆ ಆಗಿದೆ. ನೂತನ ತಾಲೂಕಾ ಕೊಟ್ಟೂರಿನಲ್ಲಿ ವೈದ್ಯರ ಕೊರತೆಯ ಬಗ್ಗೆ ಸಾವ೯ಜನಿಕರು ಅನೇಕ ಬಾರಿ ಪೋನ್ ಕರೆಯ ಮೂಲಕ ತಿಳಿಸಿದರೂ, ಎಚ್ಚೆತ್ತು ಕೊಳ್ಳದ ಟಿಎಚ್ಒ ಪ್ರದೀಪ್ ಮತ್ತು ಡಿಎಚ್ಓ ಶಂಕರ್ ನಾಯ್ಕ್ ವ್ಯರ್ಥ ಅಧಿಕಾರಿಗಳಂತೆ ವತಿ೯ಸುವರಂತೆ. ಇವರಿಗೆ ಅಲ್ಲಿರುವ 4 ಜನ ‘ಡಾಕ್ಟರ್’ಗಳಿಗೆ, ಅಲ್ಲಿನ ಆಡಳಿತ ಅಧಿಕಾರಿಗಳು ಅವರಿಗೆ ಸರಿಯಾಗಿ ಕೆಲಸ ಕೊಟ್ಟರೆ ಯಾವ ಸಮಸ್ಯೆಗಳು ಬರುವುದಿಲ್ಲ. ಇವರ ಮೇಲೆ ಡಿಎಚ್ಓ ಮತ್ತು ಟಿಎಚ್ಓ ಕೂಡ ವೈದ್ಯರಿಗೆ ಕಾನೂನು ಕ್ರಮ ಜರುಗಿಸದೆ ಇರುವುದರಿಂದ ಸಮಸ್ಯೆಗಳ ಆಗರ ಹೆಚ್ಚಾಗುತ್ತಿದೆ ಎಂದು ಅಲ್ಲಿನ ಸಾವ೯ಜನಿಕರು ಹೇಳುವರಂತೆ.ಟಿಎಚ್ಓ ಪ್ರದೀಪ್ ಸರ್ ರವರು ತುತ೯ ಚಿಕಿತ್ಸೆಗಾಗಿ ರೋಗಿಗಳು ಬಂದ ಮೇಲೆ, ರೋಗಿಗಳ ಸಮಸ್ಯೆ ಹೆಚ್ಚಾದ ಮೇಲೆ ಪೋನ್ ಕರೆಯ ಮೂಲಕ ಆಡಳಿತ ಅಧಿಕಾರಿ ಮತ್ತು ಆ ಸಮಯದಲ್ಲಿ ಕತ೯ವ್ಯದ ವೈದ್ಯರ ಬಗ್ಗೆ ವಿಚಾರಿಸುವುದು ಎಂದು ಸಾವ೯ಜನಿಕರರು ಹೇಳುವರಂತೆ.

ಈ ಆಸ್ಪತ್ರೆಯಲ್ಲಿ ಬದ್ಯ ನಾಯ್ಕ್ ಎಂಬ ಕೆಲ ದಿನಗಳಿಂದ ಗೈರುಹಾಜರಿ ವೈದ್ಯರಂತೆ ಮತ್ತು ಅರ್ಥವಿಲ್ಲದ ಆಡಳಿತ ವೈದ್ಯಾಧಿಕಾರಿ ಬಸವೇಶ್ವರಯ್ಯ ಹಾಗೂ ದಿನಕ್ಕೆ 5-6 ಸಹ ರೋಗಿಗಳಿಗೆ ಚಿಕಿತ್ಸೆ ನೀಡದಂತಹ ದಂತವೈದ್ಯರು ಈ ಎಲ್ಲಾ ವೈದ್ಯರು ಕೇವಲ ಸಂಬಳಕ್ಕಾಗಿ ಮಾತ್ರ ಕೆಲಸ ಮಾಡುತ್ತಾರೆ, ರೋಗಿಗಳಿಗೆ ಸಮಯಕ್ಕೆ ತಕ್ಕಾಗಿ ಯಾವಾಗ ಯಾರು ಕೆಲಸ ಮಾಡಬೇಕು ಎಂಬುದನ್ನು ಮರೆ ತಿರುವರಂತೆ ಇಲ್ಲಿ ಕೇವಲ ನರ್ಸ್ಗಳದ್ದೆ ‘ದರ್ಬಾರ್’ರಂತೆ ಒಟ್ಟಿನಲ್ಲಿ ಒಳ್ಳೆಯ ಚಿಕಿತ್ಸೆ ನೀಡಿ, ಯಾವುದೇ ದುರ್ಗತಿ ಸಂಭವಿಸದಂತೆ ನೋಡಿ ಕೊಂಡರೆ, ಸಾವ೯ಜನಿಕರು ನಿಟ್ಟುಸಿರೂ ಬಿಟ್ಟಂತೆ ಆಗುತ್ತದೆ ಎಂಬುದು ಅಲ್ಲಿನ ಕೆಲವು ಜನರ ಅಭಿಪ್ರಾಯ. ಇದಲ್ಲದೆ ಸ್ವಚ್ಛತೆ ಬಗ್ಗೆಂತು ಯಾರು ಕೇಳುವ ಆಗಿಯೇ ಇಲ್ಲವಂತೆ, ಕೇಳಿದರೆ, ನೀವ್ಯಾರು? ನಿಮಗೇನು ಸಂಬಂಧ ನಮ್ಮ ಕೆಲಸ ನಾವು ಮಾಡುತ್ತೇವೆ ಸುಮ್ಮನೆ ಬಂದು ತೊಂದರೆ ಕೊಡಬೇಡಿ, ಹೀಗೆ ಮಾಡಿದರೆ ಕತ೯ವ್ಯಕ್ಕೆ ತೊಂದರೆ ನೀಡುತ್ತೀವಿರಿ ಎಂದು ‘ಕೇಸ್’ ದಾಖಲಿಸ ಬೇಕಾಗುತ್ತದೆ ಎಂದು ಹೇಳುವ ಮೂಲಕ ಸಾವ೯ಜನಿಕರನ್ನು ‘ಭಯ’ ಪಡಿಸುವಂತೆ. ಹೀಗಾದರೆ ರೋಗಿಗಳ ಗತಿ ಏನು? ಯಾರು ಇದರ ಬಗ್ಗೆ ಪ್ರಶ್ನೆ ಮಾಡಬೇಕು? ಎಂಬುದು ಸಾರ್ವಜನಿಕರಿಗೆ ಆತಂಕಕಾರಿ ಬೆಳವಣಿಗೆಯಾಗಿದೆ.

ಇಂತಹ ಸಮುದಾಯ ಆರೋಗ್ಯ ಕೇಂದ್ರಕ್ಕೆ ನ್ಯಾಯ ದೊರಕಿಸಿ ಕೊಡುವುದಾದರೂ ಯಾರು? ಇಲ್ಲಿನ ಶಾಸಕರಾದಂತಹ ಕೆ ನೇಮಿರಾಜ್ ನಾಯ್ಕ್ರವರನ್ನು ಸಾರ್ವಜನಿಕರಾಗಲಿ ಮತ್ತು ಪತ್ರಿಕೆರಾಗಲಿ ಪ್ರಶ್ನೆ ಮಾಡಿದರೆ, ಅನುದಾನ ಬಂದಿದೆ, ಇನ್ನು ಮುಂದೆ ನಾವು ಮಾಡಿಸುತ್ತೇವೆ, ಈಗ ತಾನೇ ಗೆದ್ದು ಬಂದಿದ್ದೇವೆ, ಮಾಡಿಸುವವರೆಗೂ ವೇಟ್ ಮಾಡಿ ಎಂದು ಹೇಳುವರಂತೆ ಹಾಗೆಂತೆ ಈಗಿನಂತೆ. ಅಂತೆ ಕಂತೆ ಸಂತೆಗಳ ಮಾರ್ಕೆಟ್ ದಂತೆ ವ್ಯವಹಾರ ಆಗಿದೆ. ಮೊದಲು ನಮಗೆ ವೈದ್ಯರನ್ನು ಕೊಡಿ, ನಿಮ್ಮನ್ನೇ ನಂಬಿ ಆರಿಸಿ ತಂದಂತಹ ಮತದಾರರಿಗೆ ರಕ್ಷಣೆ ಕೊಡಿ, ಎಂದು ಬೇಡುವ ರೋಗಿಗಳ ಪರಿಸ್ಥಿತಿಯಾಗಿದೆ.ಜೂನ್ 8ನೇ 2023 ರಂದು ತಾಲೂಕು ಕಾರ್ಯಾಲಯದ ಮುಂದೆ ಧರಣಿ ನಡೆಸಿದವು. ಡಿ ಎಚ್ ಓ ಇದನ್ನು ಸರಿ ಪಡಿಸುತ್ತೇನೆ ಎಂದು ಕೇವಲ ಬಾಯಿ ಮಾತಿನಿಂದ ಹೇಳಿದ್ದರು. ಅವರ ಮಾತಿನಲ್ಲಿ ಸ್ವಲ್ಪ ಕಿಮ್ಮತ್ತಿಲ್ಲ, ಎಂದು ನಮಗೆ ತಿಳಿದು ಬಂದಿದೆ, ಅದಕ್ಕೆ ಈಗ ಹೇಳುತ್ತೇವೆ ಇನ್ನು 15 ದಿನ ಕೊಟ್ಟು ಎಚ್ಚರಿಕೆ ನೀಡುತ್ತೇವೆ, ಅದರ ಒಳಗಾಗಿಯೇ ನಮ್ಮ ಕೊಟ್ಟೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ವೈದ್ಯರನ್ನು ನೇಮಕ ಮಾಡಬೇಕು, ಇಲ್ಲದಿದ್ದರೆ ಬೃಹತ್ ಪ್ರತಿಭಟನೆ ಅನಿರ್ದಿಷ್ಟ ಅವಧಿ ಸತ್ಯಾಗ್ರಹ ಮಾಡತ್ತೇವೆ‌. ಎಂದು ಗುಡಿಯಾರ ಮಲ್ಲಿಕಾರ್ಜುನ್ ಸಿಪಿಐ(ಎಂಎಲ್) ಲಿಬರೇಷನ್ ಪಾರ್ಟಿ ಕಾರ್ಯದರ್ಶಿಗಳು ತಿಳಿಸಿದರು. ಮತ್ತು ಗುರಿಕಾರ ಮಂಜಪ್ಪ ಯೂಥ್ ಅಧ್ಯಕ್ಷರು ಕರ್ನಾಟಕ ರಕ್ಷಣಾ ವೇದಿಕೆಯ ಸ್ವಾಭಿಮಾನಿ ಸೇನೆ ಸುರೇಶ್ ಮತ್ತು ಕೊಲ್ಲೂರಪ್ಪ ಡಿಎಸ್ಎಸ್ ಮುಖಂಡರು ತಿಳಿಸಿದರು.

ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.ಸಿ ಕೊಟ್ಟೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button