ರೇಷ್ಮೆ ಬೆಳೆದ ರೈತರಿಗೆ ಮನೆ ಕಟ್ಟಡ ಭೂಮಿ ಪೂಜೆ.
ದೇವರ ಹಿಪ್ಪರಗಿ ಜನೇವರಿ.10

ತಾಲೂಕಿನ ಮಣ್ಣೂರ ಗ್ರಾಮದ ರೈತರ ತೋಟದಲ್ಲಿ ಹಾಗೂ ದೇವರ ಹಿಪ್ಪರಗಿ ರೈತರ ತೋಟದಲ್ಲಿ ರೈತರಾದ ಶ್ರೀಮತಿ ಉಮಾದೇವಿ ಬಸವರಾಜ,ವಾಲಿ ಹಾಗೂ ಶ್ರೀ ಮತಿ ಭೀಮವ್ವ ಬಸಪ್ಪ ಗುಡಿಮನಿ,ಇವರ ತೋಟದಲ್ಲಿ ಇಂದು ಮನೆ ಕಟ್ಟಲು ಭೂಮಿ ಪೂಜೆವನ್ನು ರೇಷ್ಮೆ ಅಧಿಕಾರಿಗಳು ಹಾಗೂ ಸ್ವಾಮೀಜಿ ಯವರ ಅಮೃತ ಹಸ್ತದಿಂದ ನೆರೆವೇರಿಸಲಾಯಿತು,ರೇಷ್ಮೆ ಬೆಳೆಗಾರರಿಗೆ ಸರ್ಕಾರ ಬಹಳ ರಿಯಾಯಿತಿ ದರದಲ್ಲಿ ಅವರಿಗೆ ಅನುಕೂಲ ಆಗಲಿ ಎಂದು ರೇಷ್ಮೆ ಬೆಳೆದ ರೈತರ ತೋಟದಲ್ಲಿ ಮನೆ ಕಟ್ಟಡ ಮಾಡಿ ಕೊಡುತ್ತದೆ ರೈತರು ರೇಷ್ಮೆ ಬೆಳೆಯಬೇಕು ಸರ್ಕಾರ ಇದಕ್ಕೆ ಬಹಳ ಸವಲತ್ತುಗಳನ್ನು ನೀಡುತ್ತದೆ.

ಎಂದು ತಾಲ್ಲೂಕಿನ ರೇಷ್ಮೆ ಅಧಿಕಾರಿಗಳಾದ ಪಿ ಆರ್ ಉಮಚಗಿಮಠ ರೈತರಿಗೆ ತಿಳಿಸಿದರು,ಈ ಸಂದರ್ಭದಲ್ಲಿ ರೇಷ್ಮೆ ಇಲಾಖೆಯ ಸಿಬ್ಬಂದಿಗಳಾದ ಸೋಮಶೇಖರ ಹೋಸಮನಿ ಹಾಗೂ ಶ್ರೀ ವೇದಮೂರ್ತಿ ಹಂಸಯ್ಯ ಹಿರೇಮಠ ಶಶಿಧರ ಕುಮಟಗಿ ಬೀಮಾಶಂಕರಗೌಡ ಪಾಟೀಲ ಸುರೇಶ ಪ್ಯಾಟಿ ಶ್ರೀ ಮಂತ ದೂಡ್ಡಮನಿ ಬಸವರಾಜ ವಾಲಿ ರಾಮಗೂಂಡ ಹರನಾಳ,ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ತಾಲೂಕ ವರದಿಗಾರರು:ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ