ಇಂಗ್ಲೀಷ್ ಕಾರ್ಯಾಗಾರಗಳು ಗುಣಮಟ್ಟದ ಕಲಿಕೆ ಸಾಮರ್ಥ್ಯ ಮತ್ತು ಫಲಿತಾಂಶ ಹೆಚ್ಚಿಸುವಲ್ಲಿ ತುಂಬಾ ಪರಿಣಾಮಕಾರಿ.

ಕೊಟ್ಟೂರು ಜನೇವರಿ.10

ವಿಜಯನಗರ ಪದವಿ ಪೂರ್ವ ಕಾಲೇಜುಳ ಆಂಗ್ಲಭಾಷಾ ಉಪನ್ಯಾಸಕರ ವೇಧಿಕೆ ಹಾಗೂ ಉಪ ನಿರ್ದೇಶಕರ ಕಛೇರಿ ವಿಜಯನಗರ ಬಳ್ಳಾರಿ ಹಾಗೂ ತಾಲೂಕಾ ಉಪನ್ಯಾಸಕರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ದ್ವೀತಿಯ ಪಿ.ಯು ವಿದ್ಯಾರ್ಥಿಗಳಿಗೆ ಉತ್ತಮ ಕಲಿಕಾ ಹಾಗೂ ಫಲಿತಾಂಶ ಹೆಚ್ಚಳದ ಸಲುವಾಗಿ ಒಂದು ದಿನದ ಆಂಗ್ಲಭಾಷಾ ಬೋಧನಾ ಕಾರ್ಯಗಾರವನ್ನು ಕೊಟ್ಟೂರು ತಾಲೂಕಿನ ವಿದ್ಯಾರ್ಥಿಗಳಿಗೆ ಸರ್ಕಾರಿ ಪದವಿ ಪೂರ್ವ ಕಾಲೇಜು ಕೊಟ್ಟೂರುನಲ್ಲಿ ಹಮ್ಮಿಕೊಳ್ಳಲಾಗಿತ್ತು.ಕಾರ್ಯಗಾರವನ್ನು ಪ್ರಾಚಾರ್ಯ ಡಾ|| ಸೋಮಶೇಖರಪ್ಪ ದೀಪ ಬೆಳಗಿಸಿ ಚಾಲನೆ ನೀಡಿ ಮಾತನಾಡುತ್ತ ವಿದ್ಯಾರ್ಥಿಗಳು ಸಂಪನ್ಮೂಲ ವ್ಯಕ್ತಿಗಳ ಬೋಧನೆಯನ್ನ ಆಸಕ್ತಿಯಿಂದ ಆಲಿಸಿದರೆ ಆಂಗ್ಲ ಭಾಷಾ ಸಾಮಾರ್ಥ ಹೆಚ್ಚುವುದಲ್ಲದೆ ಸುಲಭವಾಗಿ ಮತ್ತು ಉತ್ಸಹ ಭರಿತರಾಗಿ ಪರೀಕ್ಷಯನ್ನು ಎದುರಿಸಿ ಉತ್ತಮ ಅಂಕಗಳನ್ನು ಪಡೆಯಲು ಸಾಧ್ಯವಾಗುತ್ತದೆ ಇಂತಹ ಕಾರ್ಯಗಾರಗಳು ಮಕ್ಕಳಲ್ಲಿ ಕಲಿಕೋತ್ಸಾಹ ಹೆಚ್ಚುಸುತ್ತದೆ. ಮೇಲಿಂದ ಮೇಲೆ ಆಂಗ್ಲ ಭಾಷಾ ವೇದಿಕೆಯವರು ಕಾರ್ಯಗಾರಗಳನ್ನು ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಬೇಕೆಂದರು.

ಸಂಪನ್ಮೂಲ ಉಪಾನ್ಯಸಕರುಗಳಾಗಿ ಹೂವಿನ ಹಡಗಲಿಯ ಶ್ರೀಯುತ ಕೊಟ್ರಗೌಡ್ರು, ಕಾಳೇಶ್, ಪರಶುರಾಮಪ್ಪ ನಾಗೂಜೆ, ರೇವಣ್ಣ, ಇಮ್ರಾನ್, ಬಸವರಾಜ ಇವರುಗಳು ಬೋಧನೆಯನ್ನು ನೀಡಿದರು. ಕೊಟ್ಟೂರೇಶ್ವರ ಕಾಲೇಜು ಭಾಗೀರಥಿ ಪಿ.ಯು ಕಾಲೇಜು ಕೊಗಳಿ ಪಿ.ಯು ಕಾಲೇಜುಗಳ ೫೬೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದರ ಉಪಯೋಗ ಪಡೆದು ಕೊಡರು, ತರಬೇತಿ ನಂತರ ವಿದ್ಯಾರ್ಥಿಗಳು ಅಭಿಪ್ರಾಯವನ್ನು ಹಚ್ಚಿಕೊಳ್ಳುತ್ತ ಪರೀಕ್ಷೆ ಎದುರಿಸಲು ತುಂಬಾ ಉಪಯುಕ್ತವಾಗಿದ್ದು. ಎರಡು ದಿನದ ಅವಧಿಗೆ  ವಿಸ್ತರಿಸಿದರೆ ತುಂಬಾ ಪರಿಣಾಮಕಾರಿಯಾಗುತ್ತದೆ ಎಂದರು ಉಪನ್ಯಾಸಕರ ಡಾ. ಜಗದೀಶ್ ಚಂದ್ರ ಬೋಸ್ ಕಾರ್ಯಕ್ರಮ ಸಯೋಜಿಸಿ ನಿರೂಪಿಸಿ ಸ್ವಾಗತಿಸಿದರು.ಕೊಗಳಿ ಕಾಲೇಜಿನ ಪ್ರಾಚಾರ್ಯ ಶ್ರೀ ಜಯಣ್ಣ, ಉಪನ್ಯಾಸಕರು ಬೋದಕರ ಸಿಬ್ಬಂದಿ ಇದ್ದರು.

ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.ಸಿ.ಕೊಟ್ಟೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button