ಅದೃಷ್ಟವಶಾತ್ ವಿಚಿತ್ರವಾಗಿ ಪ್ರಾಣಾಪಾಯ ದಿಂದ ಬದುಕುಳಿದ ಯುವಕ.
ವಿಜಯಪುರ ಜನೇವರಿ.12

ಮನುಷ್ಯನ ಆಯಸ್ಸು ಹೆಚ್ಚು ಇದ್ದರೆ, ಹೆಂತಾ ಘಟನೆ ಸಂಭವಿಸಿದರು ಬದುಕುವುದು ಎಂಬುವುದಕ್ಕೆ ಈ ಘಟನೆ ಸಾಕ್ಷೀ ನೋಡಿ, ಇಂದು ವಿಜಯಪುರ ರೇಲ್ವೆ ನಿಲ್ದಾಣದಲ್ಲಿ ನಡೆದ ಘಟನೆ. ಯುವಕನೊಬ್ಬ ಗೂಡ್ಸ್ ರೈಲ್ವೆ ಕೆಳಗಿಂದ ಬರುವಾಗ ರೈಲು ತನ್ನ ಪ್ರಯಾಣವನ್ನು ಸಾಗಿಸುತ್ತಿರುವಾಗ ಅದರ ಕೆಳಗೆ ಮಲಗಿ ಅದೃಷ್ಟವಶಾತ್ ತನ್ನ ಪ್ರಾಣವನ್ನು ಉಳಿಸಿಕೊಂಡ ಘಟನೆ ವಿಜಯಪೂರ ರೇಲ್ವೆ ನಿಲ್ದಾಣದಲ್ಲಿ ನಡೆದಿದೆ,ಯುವಕ ಪಕ್ಕದಲ್ಲಿ ನಿಂತಿರುವ ಪ್ಯಾಸೆಂಜರ್ ರೈಲು ಗಾಡಿಯು ಹೋಗುತ್ತಿದೆ ಎಂದು, ಗೂಡ್ಸ್ ರೈಲು ಕೆಳಗಿನಿಂದ ಹಾದು ಹೋಗಲು ಪ್ರಯತ್ನಿಸಿದಾಗ ಗೂಡ್ಸ್ ರೈಲು ಹೊರಟೆ ಬಿಟ್ಟಿದೆ,ನಂತರ ಎಚ್ಚೆತ್ತು ಕೊಂಡ ಯುವಕ ರೈಲು ಹಳಿಯ ಮೇಲೆ ಮಲಗಿದ್ದಾನೆ, ದೇವರ ಆಶೀರ್ವಾದದಿಂದ ಪ್ರಾಣಾಪಾಯದಿಂದ ಪಾರಾಗಿದ್ದಾನೆ, ಎಂದು ಪ್ರತ್ಯಕ್ಷದರ್ಶಿಗಳು ವೀಡಿಯೋ ಮಾಡಿ ಸಾಮಾಜಿಕ ಜಾಲ ತಾಣಗಳಲ್ಲಿ ಹರಿಬಿಟ್ಟಿದ್ದಾರೆ.
ಜಿಲ್ಲಾ ವರದಿಗಾರರು:ಶಿವಪ್ಪ.ಬಿ.ಹರಿಜನ.ಇಂಡಿ