ಜ.14 ರಂದು 12.ನೇ ಕೃಷಿ ಸಂಕ್ರಾಂತಿ ಮತ್ತು ರಾಷ್ಟ್ರೀಯ ಕೃಷಿ ಪ್ರಶಸ್ತಿ ಪ್ರಧಾನ ಸಮಾರಂಭ.
ಹುನಗುಂದ ಜನೇವರಿ.13

ತಾಲೂಕಿನ ಕೂಡಲ ಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಆವರಣದಲ್ಲಿ ಜ.14 ರಂದು ರವಿವಾರ ಬೆಳಿಗ್ಗೆ 11 ಗಂಟೆಗೆ ಕೂಡಲ ಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಪ್ರಥಮ ಜಗದ್ಗುರು ಬಸವ ಜಯಮೃತ್ಯುಂಜಯ ಮಹಾ ಸ್ವಾಮಿಗಳ ಸಾನಿಧ್ಯದಲ್ಲಿ ಮತ್ತು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಶಾಸಕ ವಿಜಯಾನಂದ ಕಾಶಪ್ಪನವರ ಅಧ್ಯಕ್ಷತೆಯಲ್ಲಿ ಹಾಗೂ ಸಚಿವರು, ಶಾಸಕರು, ಗಣ್ಯರ ಸಮ್ಮುಖದಲ್ಲಿ 2ಎ ಮೀಸಲಾತಿ ಪಾದಯಾತ್ರೆಯ ತೃತೀಯ ವರ್ಷದ ವರ್ಷಾಚರಣೆ ಮತ್ತು ರಾಷ್ಟ್ರೀಯ ಬಸವ ಕೃಷಿ ಪ್ರಶಸ್ತಿ ಪ್ರಧಾನ ಸಮಾರಂಭ,12.ನೇ ಕೃಷಿ ಸಂಕ್ರಾಂತಿ, ಹಾಗೂ 2ಎ, ಓಬಿಸಿ ಮೀಸಲಾತಿ ಚಳುವಳಿಗಾರರ ಸಮಾವೇಶ ಜರುಗಲಿದ್ದು. ರೈತರು, ನಾಗರಿಕರು ಮತ್ತು ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ರಾಜ್ಯ ರೈತ ಘಟಕದ ಅಧ್ಯಕ್ಷ ಅಮರೇಶ ನಾಗೂರ, ತಾಲೂಕ ಅಧ್ಯಕ್ಷ ಶಂಕ್ರಪ್ಪ ನೇಗಲಿ, ಪ್ರಧಾನ ಕಾರ್ಯದರ್ಶಿ ಮಹಾಂತೇಶ ಮದರಿ, ಮುಖಂಡರಾದ ಬಿ.ಕೆ.ಗೌಡರ, ಶಿವರಾಜ ಪಾಟೀಲ, ಮಹಾಂತೇಶ ಪರೂತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ.ಹುನಗುಂದ