ಶ್ರೀ ಸಿದ್ದಶ್ರೀ ಉತ್ಸವ – ನಟ ಶೋಭರಾಜ್ ಗೆ ಶ್ರೀ ಸಿದ್ಧಶ್ರೀ ಪ್ರಶಸ್ತಿ.

ಸಿದ್ದನಕೊಳ್ಳ ಜನೇವರಿ.13

ಬಾಗಲಕೋಟೆ ಜಿಲ್ಲೆಯ ಇಲಕಲ್ಲ ತಾಲೂಕಿನ ಸುಕ್ಷೇತ್ರ ಸಿದ್ದನಕೊಳ್ಳದ ನಿರಂತರ ದಾಸೋಹ ಮತ್ತು ಕಲಾ ಪೋಷಕರ ಮಠದ ಶ್ರೀ ಸಿದ್ದಪ್ಪಜ್ಜನ ಜಾತ್ರಾ ಮಹೋತ್ಸವ- ಶ್ರೀಸಿದ್ಧಶ್ರೀ ರಾಷ್ಟ್ರೀಯ ಉತ್ಸವ-೨೦೨೪. ಜನೇವರಿ ೧೪,೧೫,೧೬ ರಂದು ಮೂರು ದಿನಗಳ ಕಾಲ ಅದ್ಧೂರಿಯಾಗಿ ಜರುಗಲಿದೆ. ಶ್ರೀಸಿದ್ಧಶ್ರೀ ರಾಷ್ಟ್ರೀಯ ಪ್ರಶಸ್ತಿಯನ್ನು ಚಲನ ಚಿತ್ರ ಕಲಾವಿದ ಶೋಭರಾಜರಿಗೆ ನೀಡಲಾಗುತ್ತಿದೆ ಎಂದು ಧರ್ಮಾಧಿಕಾರಿಗಳಾದ ಡಾ.ಶಿವಕುಮಾರ ಮಹಾ ಸ್ವಾಮಿಗಳು ಹೇಳಿದರು. ಅವರು ಸಿದ್ಧನಕೊಳ್ಳದ ಮಠದದಲ್ಲಿ ಜಾತ್ರಾ ಮಹೋತ್ಸವ ನಿಮಿತ್ಯ ನಡೆದ ಸುದ್ದಿ ಗೋಷ್ಠಿಯಲ್ಲಿ ಮೂರು ದಿನಗಳ ಕಾಲ ನಡೆವ ಕಾರ್ಯಕ್ರಮಗಳ ವಿವರಗಳನ್ನು ನೀಡಿದರು. ಬೆಂಗಳೂರಿನ ಡಾ. ಆರ್.ಎಸ್.ರಾಜು ಹೆಲಿಕಾಪ್ಟರ್ ಮೂಲಕ ರಥದ ಮೇಲೆ ಹೂಮಳೆ ಗರೆಯಲಿದ್ದಾರೆ. ಶಾಸಕ ವಿಜಯಾನಂದ ಕಾಶಪ್ಪನವರ ,ಕೆಪಿಸಿಸಿ ಪ್ರ.ಕಾರ್ಯದರ್ಶಿ ವೀಣಾ ಕಾಶಪ್ಪನವರ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ದಿ.೧೫.ರಂದು ಚಲನ ಚಿತ್ರೋತ್ಸವವನ್ನು ಸಚಿವ ಶಿವರಾಜ ತಂಗಡಗಿ , ಮಾಜಿ ಸಚಿವ ವಿ.ಸೋಮಣ್ಣ ಉದ್ಘಾಟಿಸಲಿದ್ದಾರೆ. ಸಮಾರೋಪ ಸಮಾರಂಭದಲ್ಲಿ ಶಾಸಕ ಕಾಶಪ್ಪನವರ ದಂಪತಿ,ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಪಾಲ್ಗೊಳ್ಳಲಿದ್ದಾರೆ. ಇದು ಭಕ್ತರ ಮಠ. ಇಲ್ಲಿ ಬರುವವರೆಲ್ಲರೂ ಸಿದ್ಧಪ್ಪಜ್ಜನ ಭಕ್ತರೇ. ಜಾತಿ, ಧರ್ಮ, ಮೇಲು-ಕೀಳು, ರಾಜಕೀಯ ಇಲ್ಲಿ ಇಲ್ಲಾ , ಪ್ರಸಕ್ತ ವರ್ಷ ಶ್ರೀ ಸಿದ್ಧಶ್ರೀ ರಾಷ್ಟೀಯ ಪ್ರಶಸ್ತಿಯನ್ನು ೭೦೦ಕ್ಕೂ ಮಿಕ್ಕಿ ಚಲನ ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳ ಮೂಲಕ ಜನಮನ ಗೆದ್ದಿರುವ ಹೆಸರಾಂತ ಚಲನ ಚಿತ್ರ ನಟ ಶೋಭರಾಜರಿಗೆ ನೀಡಲಾಗುತ್ತಿದೆ. ರಾಜ್ಯ, ಹೊರ ರಾಜ್ಯದ ಹೆಸರಾಂತ ಕಲಾವಿದರು, ಜೊತೆಗೆ ನಮ್ಮ ಭಾಗದ ಪ್ರತಿಭೆಗಳೂ ಮನ ರಂಜನೆ ,ಸಂಗೀತ, ನೃತ್ಯ ಕಾರ್ಯಕ್ರಮಗಳನ್ನು ನೀಡಲಿದ್ದಾರೆ, ಇಪ್ಪತ್ತಕ್ಕೂ ಹೆಚ್ಚು ಚಲನ ಚಿತ್ರ ,ಕಿರು ಚಿತ್ರಗಳ ಹಾಡು, ಟೀಸರ್‌ಗಳು ಬಿಡುಗಡೆ ಯಾಗಲಿವೆ. ಆ ಚಿತ್ರಗಳ ನಟರು, ತಂಡದವರು ಪಾಲ್ಗೊಳ್ಳಲಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಚಿತ್ರ ನಿರ್ಮಾಪಕ ಘನಶ್ಯಾಮ ಬಾಂಡಗೆ, ಸಂಗಮೇಶ ಹುದ್ದಾರ, ಚಲನ ಚಿತ್ರೋತ್ಸವ ಸಮಿತಿ ಸಂಚಾಲಕ ಡಾ.ಪ್ರಭು ಗಂಜಿಹಾಳ, ರಾಜುಗೌಡ ನಾಡಗೌಡ, ಕಲಾವಿದರಾದ ವೀರೇಶ (ಪುರವಂತರ)ಐಹೊಳ್ಳಿ , ಸಂಗನಗೌಡ ಕುರುಡಗಿ,ಮಂಜುಳಾ ರೇವಡಿ, ರೇಣುಕಾ ಬಗಲಿ ಮೊದಲಾದವರು ಉಪಸ್ಥಿತರಿದ್ದರು.

*****

ವರದಿ-ಡಾ.ಪ್ರಭು ಗಂಜಿಹಾಳ

ಮೊ-೯೪೪೮೭೭೫೩೪೬.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button